ಉತ್ತರಪ್ರಭ ಸುದ್ದಿ

ನರೇಗಲ್ಲ:ಪುರುಷನೊಂದಿಗೆ ಎಲ್ಲ ರಂಗಗಳಲ್ಲಿಯೂ ಸಾಧನೆಗೈಯುತ್ತಿರುವ ಮಹಿಳೆ ಎಂದಿಗೂ ಅಬಲೆಯಲ್ಲ, ಆಕೆ ಸಬಲೆ ಎಂದು ಶ್ರೀ ಮತಿ ಸಂಯುಕ್ತಾ ಕೆ.ಬಂಡಿ ಅಧ್ಯಕ್ಷರು ಅಕ್ಕನ ಬಳಗ ಗಜೇಂದ್ರಗಡ ಹೇಳಿದರು.

ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಬಯಲಿನಲ್ಲಿ ಸಂಜೆ ನಡೆದ ಪಟ್ಟಣದ ಸಮಸ್ತ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದಳು. ಆದರೆ ಈಗ ಅವಳು ಎಲ್ಲ ರಂಗಗಳಲ್ಲಿಯೂ ತನ್ನ ಸಾಧನೆಯ ಛಾಪನ್ನು ಒತ್ತಿದ್ದಾಳೆ. ಸಾಹಿತ್ಯ, ಸಂಗೀತ, ಕಲೆ, ಉದ್ಯೋಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ

ಸಂಯುಕ್ತಾ ಕೆ ಬಂಡಿ

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಡಾ:ಶ್ರೀ ಮತಿ ಸಪ್ನಾ ಕೆ.ಕಾಳೆ ಶಾಂತಿ, ಸಹನೆ, ಸಂಯಮದ ಪ್ರತಿರೂಪ ಹೆಣ್ಣು. ಅವಳಿಂದಲೆ ಈ ಜಗತ್ತಿಗೆ ಶಾಂತಿ. ದೀಪ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ಮಹಿಳೆ ತನ್ನ ಸಮರ್ಪಣೆಯ ಭಾವದೊಂದಿಗೆ ಈ ಜಗತ್ತನ್ನು ಬೆಳಕಾಗಿದ್ದಾಳೆ ಎಂದರು.

ಮಹಿಳೆ ಅಬಲೇಯಲ್ಲ ಸಬಲೇ – ಸಂಯುಕ್ತಾ ಕೆ ಬಂಡಿ

ಉಪನ್ಯಾಸಕಿ ಶ್ರೀ ಮತಿ ವೇದಾ ಕುಲಕರ್ಣಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳುವುದೆ ದುಸ್ತರವಾಗಿದೆ. ಆಟೋರಿಕ್ಷಾದಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಧನೆಯ ದಾಪುಗಾಲನ್ನಿರಿಸಿದ್ದಾಳೆ. ಕೇವಲ ವರ್ಷದಲ್ಲಿ ಒಂದು ದಿನ ಈ ಆಚರಣೆ ಮಾಡಿ ಸುಮ್ಮನಿರುವುದರ ಬದಲು, ಮನೆಯಿಂದಲೆ ಮಹಿಳಾ ಸಮಾನತೆಗಾಗಿ ಹೋರಾಡಬೇಕಿದೆ. ಮಹಿಳಾ ದಿನಾಚರಣೆಯ ಆಶಯಗಳು ಕೇವಲ ಸುಶಿಕ್ಷಿತ ವರ್ಗದ ಮಹಿಳೆಯರಿಗೆ ತಲುಪಿದರೆ ಸಾಲದು. ಸಮಾಜದ ಕಟ್ಟಕಡೆಯ ಮಹಿಳೆಗೂ ಈ ಸಂದೇಶ ತಲುಪಬೇಕು. ಅವರೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆಂದರು.

ನಂತರ ಸರಿಗಮಪ ಎಂಟರ್ ಟೈನ್ಮಟ್ ಬೆಂಗಳೂರು ತಂಡದವರಿಂದ ಮನರಂಜನಾ ಕಾರ್ಯಕ್ರಮ.ಹಾಗೂ ಕಾಮಿಡಿ ಕಿಲಾಡಿಗಳಿಂದ ಕಾಮಿಡಿ ಕಾರ್ಯಕ್ರಮ ಜರುಗಿದವು.

ಈ ಸಂಧರ್ಭದಲ್ಲಿ ಅನುಸೂಯಾ ಪಾಟೀಲ. ಸಾವಿತ್ರಿ ಶಿವುನಗೌಡ.ಗೌರಮ್ಮ ಆನಂದಪ್ಪನವರ. ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ ನಿಂಗಪ್ಪ ಚಲವಾದಿ ಮಲ್ಲವ್ವ ಕಳಕೊಣ್ಣವರ.ಸುಜಾತಾ ಸಂಗನಾಳಮಠ.ಸಾವಿತ್ರಿ ಗಂಗರಗೊಂಡ. ಸುಮಂಗಲಾ ಕೊಟಗಿ.ಚೆನ್ನಮ್ಮ ಕಡಗದ.ಅಕ್ಹಮಹಾದೇವಿ ಪಾಟೀಲ. ಬಸಮ್ಮ ಕಣವಿ.ಅನುಸೂಯಾ ಸೋಮಗೊಂಡ. ಸುನೀತಾ ವಂಕಲಕುಂಟಿ. ವಿದ್ಯಾಗೌರಿ ಹೆಗಡೆ.ಅರ್ಚನಾ ಕುಲಕರ್ಣಿ.ಸೀಮಾ ಕೊಂಡಿ.ಅಕ್ಕಮ್ಮ ಮಣ್ಣೋಡ್ಡರ.ಜ್ಯೋತಿ ಪಾಯಪ್ಪಗೌಡ್ರ. ಸುಮಿತ್ರಾ ಕಮಲಾಪುರ.ವಿಶಾಲಾಕ್ಷಿ ಹೊಸಮನಿ.

Leave a Reply

Your email address will not be published. Required fields are marked *

You May Also Like

ಗ್ರಾ.ಪಂ ಸದಸ್ಯರ ಸರ್ವಾಧಿಕಾರ ಖಂಡಿಸಿ ರೈತರ ಆಕ್ರೋಶ

ಉತ್ತರಪ್ರಭ ಮುಳಗುಂದ: ಗ್ರಾಮ ಪಂಚಾಯ್ತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಕಾರ್ಯವೈಕರಿಯನ್ನ ಪ್ರಶ್ನಿಸುವ ಮತ್ತು ಸೌಲಭ್ಯಗಳನ್ನ…

15 ದಿನದಲ್ಲಿ ಬಾಕಿ ತೆರಿಗೆ ವಸೂಲಿ ಮಾಡಿ : ನಗರಸಭೆಗೆ ಡಿಸಿ ಸೂಚನೆ

ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.

ನಗರ ಸಭೆ ಚುನಾವಣೆ: 6ನೇ ವಾರ್ಡನಲ್ಲಿ ಕಾಂಗ್ರೇಸಗೆ ಜಯ

ಗದಗ ಬೇಟಗೇರಿ:ನಗರ ಸಭೆ 6 ನೇ ವಾರ್ಡನ ಮತ  ಎಣಿಕೆ ಮುಕ್ತಾಯ , 6ನೇ  ವಾರ್ಡನಲ್ಲಿ…

ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಮಗುಚಿ ಬಿದ್ದು ಸ್ಥಳದಲ್ಲಿ ಓರ್ವ ವ್ಯಕ್ತಿ ಸಾವನ್ನಪಿದ್ದು, ಐವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂಧ ರಸ್ತೆಯಲ್ಲಿ ನಡೆದಿದೆ.