ಉತ್ತರಪ್ರಭ
ಮುಳಗುಂದ:
ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿ ಹಬ್ಬವನ್ನ ಶಾಂತಿ ಸಂಭ್ರಮದಿoದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿ ಪ್ರತಿಸ್ಥಾಪಿಸಿ ಶನಿವಾರ ಬೆಳಗಿನಜಾವ ಕಾಮದಹನ ಮಾಡಿದರು.
ಹೋಳಿ ಆಚರಣೆಯಲ್ಲಿ ಎಲ್ಲ ವರ್ಗದ ಯುವಕರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ನಾನಾ ವೇಷದರಿಸಿದ ಚಿಣ್ಣರು, ಯುವಕರು, ಮಹಿಳೆಯರು ಪರಸ್ಪರ ರಂಗು ರಂಗಿನ ಬಣ್ಣದೋಕಳಿಯಲ್ಲಿ ಮಿಂದೆದ್ದರು. ಪ್ರಮುಖವಾಗಿ ಚಿಂದಿಪೇಟಿ ಓಣಿ ಯವಕರು ವಾಹನದ ಮೇಲೆ ಕಾಮ ರತಿ ಪ್ರತಿಕೃತಿ ನಿರ್ಮಿಸಿದ್ದರು.
ಜಗ್ಗಲಿಗೆ ಬಡಿತ, ಕಣಿ ನಾದಕ್ಕೆ ಹೆಜ್ಜೆಹಾಕಿ ಹೋಳಿ ಪದಗಳನ್ನು ಹಾಡುತ್ತ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಪುರದ ಓಣಿ, ಸವಳಭಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ನಾನಾ ವೇಷ ಧರಿಸಿ, ಹಾಸ್ಯ, ವಿನೋದಾವಳಿಯ ಅಣಕು ಶವ ಯಾತ್ರೆ ಮಾಡಿದರು. ಮಕ್ಕಳ ದಂಡು ಮನೆ ಮನೆಗೆ ತೆರಳಿ ಹೋಳಿಗೆ ತುಪ್ಪದ ಪ್ರಸಾದ ಸವಿದರು. ಓಣಿಯ ಬೀದಿಯಲ್ಲಿ ಚಿಣ್ಣರ ಬಾರಿಸುವ ಹಲಿಗೆ ನಾದ ರಿಂಗಣಿಸಿತು. ಪ್ರಮುಖ ಗಣ್ಯರು ಸೇರಿದಂತೆ ಎಲ್ಲರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು
ಜಾಹಿರಾತು
ಜಾಹಿರಾತು
ಜಾಹಿರಾತು
Leave a Reply

Your email address will not be published. Required fields are marked *

You May Also Like

ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ನಿಲ್ಲಿಸಲು ಶಿಕ್ಷಣ ಸಚಿವರಿಗೆ ಚಿತ್ರಕಲಾ ಶಿಕ್ಷಕರ ಮನವಿ

ಉತ್ತರಪ್ರಭಆಲಮಟ್ಟಿ: ಪ್ರಸಕ್ತ 2022-23 ನೇ ಸಾಲಿನಲ್ಲಿ ರಾಜ್ಯದ ಸಕಾ೯ರಿ ಪ್ರೌಢಶಾಲೆಗಳಲ್ಲಿ ಅವಶ್ಯ ಹೆಚ್ಚುವರಿ ವಿಶೇಷ ಶಿಕ್ಷಕರ…

ಲಾರಿ ವೊವರ್ ಟೇಕ್ ಮಾಡಲು ಹೋಗಿ ಚಕ್ರಕ್ಕೆ ಸಿಲುಕಿ ಇಬ್ಬರು ಬೈಕ್ ಸವಾರರ ಸಾವು

ಉತ್ತರಪ್ರಭ ಮುಂಡರಗಿ: ಇಂದು ದಿನಾಂಕ 06/06/2022 ಬೆಳಗ್ಗೆ 10:30ರ ಸೂಮಾರಿಗೆ ಮುಂಡರಗಿ ಹಡಗಲಿ ರಸ್ತೆ  ಮದ್ಯ…

ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ನೀಡುತ್ತಿದೆ: ತಾಹೀರ್ ಹುಸೇನ್

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು 3ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು…