ಉತ್ತರಪ್ರಭ
ಆಲಮಟ್ಟಿ:
ಶ್ರೀಶೈಲ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತಾದಿಗಳಿಗೆ ಶನಿವಾರ ಇಲ್ಲಿ ಅನ್ನ ಸಂತರ್ಪಪಣೆ ಸೇವೆ ನಡೆಯಿತು.
ಆಲಮಟ್ಟಿಯ ಈಶ್ವರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಅನ್ನ ದಾಸೋಹ ಸೇವಾ ಕಾರ್ಯಕ್ರಮದಲ್ಲಿ ನಿಡಗುಂದಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಭಾಗವಹಿಸಿದ್ದರು. ಗ್ರಾಮಸ್ಥರಾದ ಸುಭಾಸ ಪಾಟೀಲ, ರೇವಣಸಿದ್ದಪ್ಪ ಹುಂಡೇಕಾರ, ಶಿವಾನಂದ ಪಾಟೀಲ, ಚಿಮ್ಮಲಗಿ ಅಡಿಯಪ್ಪ, ಸುರೇಶ ಹುರಕಡ್ಲಿ ಮೊದಲಾದವರ ನೇತೃತ್ವದಲ್ಲಿ ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಮೊದಲ ಬಾರಿಗೆ ಅನ್ನ ದಾಸೋಹ ಸೇವಾ ಕೈಂಕರ್ಯ ಕೈಗೊಂಡಿದ್ದರು. ಪಾದಯಾತ್ರಿಗಳು ಆಗಮಿಸುತ್ತಿದ್ದಂತೆ ದೇಗುಲದಲ್ಲಿ ಭಕ್ತಿಭಾವದ ಪರಾಕಾಷ್ಠೆಯ ಮೊಳಗಿತು. ಮಲ್ಲಿಕಾರ್ಜುನ ಕಂಬಿಗೆ ಶೃದ್ಧಾಪೂರ್ವಕ ಭಕ್ತಿಯಿಂದ ಗ್ರಾಮಸ್ಥರು ಪೂಜಿಸಿ ನಮಿಸಿದರು. ಧನ್ಯತೆಯಲಿ ಮಿಂದರು.

ಆಲಮಟ್ಟಿಯಲ್ಲಿ ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಅನ್ನ ಸಂತರ್ಪಣೆ ಸೇವೆ ನಡೆಯಿತು. ಮಲ್ಲಿಕಾರ್ಜುನ ಕಂಬಿಗೆ ಗ್ರಾಮಸ್ಥರು ಭಕ್ತಿಯಿಂದ ಪೂಜಿಸಿ ಧನ್ಯತೆ ಭಾವ ತೋರಿದರು.
ಜಾಹಿರಾತು
ಜಾಹಿರಾತು
ಜಾಹಿರಾತು
ಜಾಹಿರಾತು

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ-ಹೊರಹರಿವು ಯಥಾಸ್ಥಿತಿ..!

ಉತ್ತರಪ್ರಭಆಲಮಟ್ಟಿ: ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರುತ್ತಿರುವ ನೀರಿನ…

ಫೆ.10 ರಂದು ರಾಯಚೂರು ಬಂದ್: ಮಧ್ಯ ಮಾರಾಟ ನಿಷೇಧ

ವರದಿ: ವಿಠಲ‌ ಕೆಳೂತ್ ಉತ್ತರಪ್ರಭಮಸ್ಕಿ: ಜಿಲ್ಲೆಯ ಪ್ರಗತಿಪರ, ದಲಿತ ಸಂಘಟನೆ ಒಕ್ಕೂಟ ಫೆ. 10ರಂದು ರಾಯಚೂರು…

ಸಿ.ಸಿ.ಟಿ.ವಿ ಅಳವಡಿಕೆಗಾಗಿ ಕಬನೂರ ಗ್ರಾಮಸ್ಥರಿಂದ ಪ್ರತಿಭಟನೆ

ಉತ್ತರಪ್ರಭ ಹಾವೇರಿ/ಶಿಗ್ಗಾಂವ: ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಪಂಚಾಯತಿಗೆ ಬರುವದಿಲ್ಲ ಹಾಗಾಗಿ ಪಂಚಾಯತಿಯಲ್ಲಿ ಸಿ.ಸಿ.ಟಿ.ವಿ…