ಉತ್ತರಪ್ರಭ
ಮುಳಗುಂದ:
ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿ ಹಬ್ಬವನ್ನ ಶಾಂತಿ ಸಂಭ್ರಮದಿoದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿ ಪ್ರತಿಸ್ಥಾಪಿಸಿ ಶನಿವಾರ ಬೆಳಗಿನಜಾವ ಕಾಮದಹನ ಮಾಡಿದರು.
ಹೋಳಿ ಆಚರಣೆಯಲ್ಲಿ ಎಲ್ಲ ವರ್ಗದ ಯುವಕರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ನಾನಾ ವೇಷದರಿಸಿದ ಚಿಣ್ಣರು, ಯುವಕರು, ಮಹಿಳೆಯರು ಪರಸ್ಪರ ರಂಗು ರಂಗಿನ ಬಣ್ಣದೋಕಳಿಯಲ್ಲಿ ಮಿಂದೆದ್ದರು. ಪ್ರಮುಖವಾಗಿ ಚಿಂದಿಪೇಟಿ ಓಣಿ ಯವಕರು ವಾಹನದ ಮೇಲೆ ಕಾಮ ರತಿ ಪ್ರತಿಕೃತಿ ನಿರ್ಮಿಸಿದ್ದರು.
ಜಗ್ಗಲಿಗೆ ಬಡಿತ, ಕಣಿ ನಾದಕ್ಕೆ ಹೆಜ್ಜೆಹಾಕಿ ಹೋಳಿ ಪದಗಳನ್ನು ಹಾಡುತ್ತ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಪುರದ ಓಣಿ, ಸವಳಭಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ನಾನಾ ವೇಷ ಧರಿಸಿ, ಹಾಸ್ಯ, ವಿನೋದಾವಳಿಯ ಅಣಕು ಶವ ಯಾತ್ರೆ ಮಾಡಿದರು. ಮಕ್ಕಳ ದಂಡು ಮನೆ ಮನೆಗೆ ತೆರಳಿ ಹೋಳಿಗೆ ತುಪ್ಪದ ಪ್ರಸಾದ ಸವಿದರು. ಓಣಿಯ ಬೀದಿಯಲ್ಲಿ ಚಿಣ್ಣರ ಬಾರಿಸುವ ಹಲಿಗೆ ನಾದ ರಿಂಗಣಿಸಿತು. ಪ್ರಮುಖ ಗಣ್ಯರು ಸೇರಿದಂತೆ ಎಲ್ಲರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು
ಜಾಹಿರಾತು
ಜಾಹಿರಾತು
ಜಾಹಿರಾತು
Leave a Reply

Your email address will not be published. Required fields are marked *

You May Also Like

ಕಟ್ಟಿಗೆ ಅಡ್ಡೆಗಳಿಂದ ಶಿರಹಟ್ಟಿ ಜನರಿಗೆ ಕೊರೊನಾ ಭಯ..!

ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾತ್ರ ಕಟ್ಟಿಗೆ ಅಡ್ಡೆಗಳು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ನಡೆಯುತ್ತಿವೆ.

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಖಂಡನೆ

ರಾಜ್ಯ ಸರ್ಕಾರ ಶೇ.30ರಷ್ಟು ಖಾಸಗಿ ಶಾಲಾ ಶುಲ್ಕ ಕಡಿತಗಿಳಿಸಿದ್ದನ್ನು ಖಂಡಿಸಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕ ವೀರಶೈವ ಲಿಂಗಾಯತ್ ಪಂಚಮಸಾಲಿ ಸಂಘಕ್ಕೆ ಅಧ್ಯಕ್ಷರಾಗಿ ಮಂಜುನಾಥ,ವಿ, ಮಾಗಡಿ ಆಯ್ಕೆ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ )ಬೆಂಗಳೂರು,ಲಕ್ಷ್ಮೇಶ್ವರ ತಾಲೂಕ…

ಶಿರಹಟ್ಟಿ ತಾಲೂಕಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ತಹಶೀಲ್ದಾರ ನೀಡಿದ ಮಾಹಿತಿ

ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ…