ವರದಿ: ವಿಠಲ‌ ಕೆಳೂತ್

ಉತ್ತರಪ್ರಭ
ಮಸ್ಕಿ:
ಜಿಲ್ಲೆಯ ಪ್ರಗತಿಪರ, ದಲಿತ ಸಂಘಟನೆ ಒಕ್ಕೂಟ ಫೆ. 10ರಂದು ರಾಯಚೂರು ಸಂಪೂರ್ಣ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ರಾಯಚೂರಿನ ಜಿಲ್ಲಾಧಿಕಾರಿ ಡಾ. ಅವಿನಾಶ ಮೇನನ್ ರಾಜೇಂದ್ರನ ಅವರು ತಿಳಿಸಿದ್ದಾರೆ.
ಪ್ರಗತಿಪರ ಸಂಘಟನೆ ಒಕ್ಕೂಟದ ವತಿಯಿಂದ ರಾಯಚೂರು ನಗರ ಸಂಪೂರ್ಣ ಬಂದ್ ಮಾಡಬೇಕೆಂದು ಕರೆ ನೀಡಿರುವುದರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ‌ ನಡೆಯಬಾರದು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ತಾಲೂಕಿನಲ್ಲಿನ
ಫೆ. 9ರಂದು ರಾತ್ರಿ 8ಗಂಟೆಯಿಂದ ಫೆ. 10 ರಾತ್ರಿ 8ಗಂಟೆಯವರೆಗೆ ಬ್ರಾಂಡಿ, ಬಾರ್ ಅಂಗಡಿಗಳನ್ನು ಮುಚ್ಚಬೇಕು, ಮಧ್ಯ ಸಾಗಾಣಿಕೆ ಮಾರಾಟ ನಿಲ್ಲಿಸಬೇಕು, ಒಂದು ವೇಳೆ ಮಧ್ಯ ಮಾರಾಟ ಮಾಡಿದರೆ,ಅಬಕಾರಿ 1965ರ ಕಾಯ್ದೆ, ಕಲಾಂ 21ರ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಲಾಗಿದೆ.‌ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಲ್ಲಿ ಮಹಾಮಳೆ ಆಲಮಟ್ಟಿಯಲ್ಲಿ ಜಲಕಳೆ..!!!

ಉತ್ತರಪ್ರಭಗುಲಾಬಚಂದ ಜಾಧವಆಲಮಟ್ಟಿ: ಇಲ್ಲಿ ಮಳೆ ಬಂದ್ರೂ ಅಷ್ಟೇ ಬಿಟ್ರೂ ಅಷ್ಟೇ ! ಏನು ಫರಕ್ ಬಿಳಾಂಗಿಲ್ರೀ…

ಗಜೇಂದ್ರಗಡ ತಾಂಡಾದಲ್ಲಿ ಡಾ. B.R. ಅಂಬೇಡ್ಕರ್ ರವರ 131 ನೆಯ ಜಯಂತಿ ಆಚರಣೆ

ಉತ್ತರಪ್ರಭ ಗಜೇಂದ್ರಗಡ: 14/4/2022 ರಂದು ಬೆಳಿಗ್ಗೆ 11:೦೦ ಗಂಟೆಗೆ ಸಂವಿದಾನ ಶಿಲ್ಪಿ, ಮಹಾನ ಮೇಧಾವಿ ಮಹನಾಯಕ…

ಆಲಮಟ್ಟಿ: ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಅನ್ನ ದಾಸೋಹ

ಉತ್ತರಪ್ರಭಆಲಮಟ್ಟಿ: ಶ್ರೀಶೈಲ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತಾದಿಗಳಿಗೆ ಶನಿವಾರ ಇಲ್ಲಿ ಅನ್ನ…