ನಿಡಗುಂದಿ (ವಿಜಯಪುರ ಜಿಲ್ಲೆ): ಶಿವಮೊಗ್ಗದಲ್ಲಿ ನಡೆದ ಹರ್ಷ ಝಿಂಗಾಡೆ ಕೊಲೆ ಖಂಡಿಸಿ ಭಾವಸಾರ ಕ್ಷತ್ರೀಯ ಸಮಾಜದ ಜನರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹತ್ಯೆಯನ್ನು ಖಂಡಿಸಿದರು.
ಹರ್ಷ ನಿಧನಕ್ಕೆ ಹರ್ಷ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿ, ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಮಾಜದ ಅಧ್ಯಕ್ಷ ನಾರಾಯಣ ಮಹೇಂದ್ರಕರ, ಕಾಶೀನಾಥ ಮಹೇಂದ್ರಕರ ಮಾತನಾಡಿ, ಹಿಂದೂ ಸಮಾಜದ ರಕ್ಷಣೆಗಾಗಿ ಕ್ಷತ್ರೀಯ ಸಮಾಜ ಸದಾ ನಿಲ್ಲುತ್ತದೆ, ಅಂಥ ಸಮಾಜದ ಹರ್ಷನನ್ನು ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ. ಸಮಾಜಕ್ಕಾಗಿ ತನ್ನ ಬದುಕನ್ನೆ ತ್ಯಾಗ ಮಾಡಿರುವ ಹರ್ಷನ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಂಥ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತೋರಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಆಗ್ರಹಿಸಿದರು.


ಪಾಂಡುರಂಗ ಪತಂಗೆ, ನಾಗೇಶ ಮಹೇಂದ್ರಕರ ಮಾತನಾಡಿ, ರಾಜ್ಯ ಸರ್ಕಾರ ಎಸ್ ಡಿಪಿಐ ಹಾಗೂ ಪಿಎಫ್ ಐ, ಸಿಎಫ್ ಐ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದರು. ಹಿಂದೂ ಧರ್ಮದವರ ಪರಧರ್ಮ ಸಹಿಷ್ಣುತೆ ಬಗ್ಗೆ ಅನ್ಯರು ಹಗುರವಾಗಿ ಪರಿಗಣಿಸುವುದು ಸಲ್ಲ, ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಹೇಳಿದವರಿಂದ ಮುಂದುವರಿದ ಭಾಗವಾಗಿ ಈ ಹತ್ಯೆ ನಡೆದಿದೆ, ಮುಂದೆ ಇನ್ನೂ ಅನೇಕ ಹತ್ಯೆಗಳು ನಡೆಯಬಹುದು ಎಂದರು.
ಲಕ್ಷ್ಮಿಕಾಂತ ಮಹೇಂದ್ರಕರ, ನರಸಿಂಹ ಮಹೇಂದ್ರಕರ, ಸಿದ್ಧಲಿಂಗೇಶ, ಕೃಷ್ಣಾಕಾಂರ, ತುಕಾರಾಮ, ಶಂಕರ, ಪಾಂಡು ಬೋಂಬಲೇಕರ, ಪ್ರವೀಣಕುಮಾರ, ಯಮನೂರಿ, ಜಗದೀಶ, ತುಳಜರಾಮ ಇನ್ನೀತರರು ಇದ್ದರು.
ಗ್ರೇಡ್-2 ತಹಶೀಲ್ದಾರ್ ಎಸ್.ಎಚ್. ರಾಠೋಡ ಮನವಿ ಸ್ವೀಕರಿಸಿದರು.

Leave a Reply

Your email address will not be published. Required fields are marked *

You May Also Like

ಪಾಸಿಟಿವಿಟಿ ದರ ಹೆಚ್ಚಿದ್ದಲ್ಲಿ ವಿಶೇಷ ನಿಗಾ ವಹಿಸಿ

ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜನರು ಸೋಂಕು ತೆಡೆಗಟ್ಟುವಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಕೆ ಅವರು ತಿಳಿಸಿದ್ದಾರೆ.

ಉತ್ತರದಲ್ಲಿ ರಣ ಬಿಸಿಲು….ದಕ್ಷಿಣದಲ್ಲಿ ಭರ್ಜರಿ ಮಳೆ!

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ಮುಂದುವರೆದಿದೆ. ವಿಜಯಪುರ…

ನಭಾಪುರ ತಾಂಡಾದಲ್ಲಿ ಆಕಸ್ಮಿಕ ಬೆಂಕಿಗೆ 5 ಎಕರೆ ಕಬ್ಬು ಸುಟ್ಟು ಭಸ್ಮ

ಉತ್ತರಪ್ರಭಗದಗ: ತಾಲೂಕಿನ ನಭಾಪೂರ ತಾಂಡಾದ ರೈತ ರುಪಣ್ಣ ಸೋಮಪ್ಪ ಲಮಾಣಿಯವರ ಹೋಲದಲ್ಲೊ ಹೊಲದಲ್ಲಿ ಬೆಳೆದಿದ್ದ ಕಬ್ಬು…

ಕೋವಿಡ್ ಹಿನ್ನೆಲೆ ಕಾಲಕಾಲೇಶ್ವರ ಜಾತ್ರೆ ರದ್ದು

ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ರದ್ದುಮಾಡಲಾಗಿದೆ ಎಂದು ತಹಶೀಲ್ದಾರ ಎ.ಬಿ. ಕಲಘಟಗಿ ಹೇಳಿದರು.