ಗದಗ: ಬಗರಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದೆ.ಅದರಲ್ಲೂ ಮುಂಡರಗಿ ವ್ಯಾಪ್ತಿಯಲ್ಲಿ ಬರುವ ಬಗರ ಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಕೊಡುತ್ತಿರುವ ಕಿರುಕುಳಕ್ಕೆ ಜನರು ಬೆಸತ್ತು ಹೋಗಿದ್ದಾರೆ.
ಯಾವ ಜನ ಕಪ್ಪತ್ತಗುಡ್ಡವನ್ನು ಉಳಿಸಿದ್ದಾರೆ ಅವರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಹೊರಟ ಅರಣ್ಯ ಇಲಾಖೆಯ ನಡೆಗೆ ಹಿಡಿಶಾಪಹಾಕುತ್ತಿದ್ದಾರೆ.
ಮುಂಡರಗಿ ತಾಲೂಕಿನ ಶಿಂಗಟರಾಯನ ಕೆರೆ ತಾಂಡಾದಲ್ಲಿ ತಲೆತಲಾಂತರದಿಂದ ಜಮೀನನ್ನು ಉಳುಮೆ ಮಾಡುತ್ತಾ ಬಂದಿದ್ದ ಹಾಮೇಶ ರಾಮಪ್ಪ ಚವ್ಹಾಣ ಇವರ ಜಮೀನಿಗೆ ತಂತಿ ಬೇಲಿ ಹಾಕಲು ಬಂದಿದ್ದ ಮುಂಡರಗಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಪರಿಪರಿಯಾಗಿ ಮಹಿಳೆಯರು ಮಕ್ಕಳು ಬೇಡಿಕೊಂಡರು ಅವರ ಮೇಲೆ ದೌರ್ಜನ್ಯ ಮಾಡಿ ಬೇಲಿ ಹಾಕಲು ಯತ್ನಿಸಿದ ಪರಿಣಾಮ ಅದರಿಂದ ಮನನೊಂದು ಸೊನವ್ವ ರಾಮಜಿ ಕಾರಭಾರಿ ಇಂದು ನಿಧನ ಹೊಂದಿದ್ದಾರೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ.
ಅರಣ್ಯ ಇಲಾಖೆಯು ಯಾರು ಬಡವರಿದ್ದಾರೆ, ನಿರ್ಗತಿಕರಿದ್ದಾರೆ ತಮ್ಮ ತುತ್ತಿನ ಚೀಲವನ್ನು ತುಂಬೋಗೋಸ್ಕರ ಅರಣ್ಯಭೂಮಿ ಮೇಲೆ ಅವಲಂಭಿತರಾಗಿದ್ದಾರೆ ಅವರನ್ನೆ ಶೋಷಣೆ ಮಾಡುತ್ತಾ ಬಂದಿದೆ ಎನ್ನುವುದಕ್ಕೆ ಇದೋಂದು ತಾಜಾ ಉದಾಹರಣೆ ಎನ್ನಬಹುದು.
ಅರಣ್ಯ ಇಲಾಖೆಯ ಈ ಕ್ರಮಕ್ಕೆ ಜನರು ಬೆಸತ್ತು ಹೋಗಿದ್ದಾರೆ ಮ್ರತ ಮಹಿಳೆಯ ಶವವನ್ನು ಇಟ್ಟು ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆಂದು ತಿಳಿದು ಬಂದಿದೆ. ಈಗಲಾದರು ಅರಣ್ಯ ಇಲಾಖೆಯು ಬಗರಹುಕೂಮ ಸಾಗುವಳಿದಾರರಿಗೆ ನೆಮ್ಮದಿಯಿಂದ ಜೀವನ ನಡೆಸಲು ಅನೂವು ಮಾಡಿಕೊಡಬೇಕಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್!

ಹೈದರಾಬಾದ್ : ನಟ ಚಿರಂಜೀವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಉತ್ತರದ ಜನ ಮತ್ತೆ ನೆರೆಗೆ ತತ್ತರ!: ರಸ್ತೆಯ ಬದಿಯಲ್ಲೆ ಲಖಮಾಪುರ ಜನರ ವಾಸ

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿಯಿಂದಾಗಿ ಗದಗ ಜಿಲ್ಲೆಯ 16 ಹಳ್ಳಿಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ. ನರಗುಂದ ಹಾಗೂ ರೋಣ ತಾಲೂಕಿನ ಹಲವು ಹಳ್ಳಿಗಳ ಜನರಲ್ಲೀಗ ಪ್ರವಾಹ ಆತಂಕ ಸೃಷ್ಟಿಯಾಗಿದೆ.

ಕೊರೊನಾ ಎಫೆಕ್ಟ್ – ಹೊಲದಲ್ಲಿ ಬೆಳೆದ ಎಲೆಕೋಸನ್ನು ನಾಶ ಮಾಡಿದ ರೈತ!

ಚಿಕ್ಕಮಗಳೂರು: ಸರ್ಕಾರ ಎಷ್ಟೇ ಭರವಸೆ ನೀಡಿದರೂ ರೈತರ ಬವಣೆ ಮಾತ್ರ ನೀಗುತ್ತಿಲ್ಲ. ರೈತರೊಬ್ಬರು ಹಗಲಿರುಳು ಕಷ್ಟಪಟ್ಟು…

ಆರೋಗ್ಯ ಸಚಿವರಿಂದಲೇ ಲಾಕ್ ಡೌನ್ ಉಲ್ಲಂಘನೆ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ…?

ಕೋರೋನಾ ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರೇ ಲಾಕ್ ಡೌನ್ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ತಾವು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿ ಸಚಿವ ಶ್ರೀರಾಮುಲು ಅವರಿಗೆ ಹೂಮಳೆ ಗೈದಿದ್ದಾರೆ.