ಹೂಲಗೇರಿ: ತಂಬಾಕು ನಿರ್ಮೂಲನಾ ಜಾಗೃತಿ ದಿನಾಚರಣೆ ಕೆರೂರ ( ಬಾಗಲಕೋಟೆ ಜಿಲ್ಲೆ)
ಎಲ್ಲ ಭಾಗ್ಯಗಳಲ್ಲೇ ಆರೋಗ್ಯ ಭಾಗ್ಯವೇ ಮಿಗಿಲು. ಸಕಲ ಸೌಲಭ್ಯಗಳಿಗಿಂತಲೂ ನಮ್ಮ ಆರೋಗ್ಯಯುತ ಸದೃಢ ಶರೀರ ಕಾಪಾಡಿಕೊಳ್ಳುವುದೇ ಮುಖ್ಯ, ಆರೋಗ್ಯ ಸರಿಯಿಲ್ಲದಿದ್ದರೇ ಬದುಕು ಕಷ್ಟಸಾಧ್ಯ, ತಂಬಾಕು, ಮದ್ಯಪಾನ ಮತ್ತೀತರ ದುಶ್ಚಟಗಳಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಇದು ವಿಪಯಾ೯ಸ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಶಶಿಕಾಂತ ಕುಮಟಿಹಳ್ಳಿ ಅಭಿಪ್ರಾಯಪಟ್ಟರು.


ಸಮೀಪದ ಹೂಲಗೇರಿ ಎಚ್.ಆರ್. ಪಾಟೀಲ ಸರ್ಕಾರಿ ಪ್ರೌಡಶಾಲೆಯಲ್ಲಿ ಗುರುವಾರ, ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಜರುಗಿದ ತಂಬಾಕು ನಿರ್ಮೂಲನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ತಂಬಾಕು ತಿನ್ನುವುದರಿಂದ ಪ್ರತಿ ವರ್ಷ ಲಕ್ಷಾಂತರ ಜನ ಕ್ಯಾನ್ಸರ್ ಗೆ ತುತ್ತಾಗಿ ತಮ್ಮ ಅಮೂಲ್ಯ ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.


ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಆರ್.ಎಸ್. ಬಾದವಾಡಗಿ ಮಾತನಾಡಿ, ತಂಬಾಕು ಚಟ ಎಲ್ಲೆಂದರಲ್ಲಿ ಹೆಚ್ಚಾಗುತ್ತಲ್ಲಿದೆ. ಇದರ ಹಾಗು ಮದ್ಯಪಾನಗಳ ವ್ಯಾಮೋಹಕ್ಕೆ ಈಡಾಗಿ ನಿರಂತರ ವ್ಯಸನೀಗಳಾದರೆ ಕ್ಯಾನ್ಸರ್ ದಂಥ ಇತರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಟದಿಂದ ಚಟ್ಟಕ್ಕೆರಬೇಕಾಗದ ಅನಿವಾರ್ಯತೆ ಎದುರಾದೀತು. ಯುವ ಪೀಳಿಗೆ ದುಶ್ಚಟಗಳ ದುಷ್ಪರಿಣಾಮ ಅರಿತು ಅಮೂಲ್ಯ ಜೀವ ರಕ್ಷಿಸಿಕೊಳ್ಳಲು ದೃಢ ಮನಸ್ಸು ಮಾಡಬೇಕು. ಸುಂದರ ಜೀವಕ್ಕೆ ಮಾರಕವಾಗುವಂಥ ಚಟಗಳಿಂದ ದೂರ ಇರಬೇಕು. ಅಂಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ನಿಮೂ೯ಲನೆಗಾಗಿ ಸರ್ಕಾರ ನಾನಾ ಕ್ರಮ ಕೈಗೊಂಡಿದೆ, ತಂಬಾಕು ಉತ್ಪನ್ನಗಳನ್ನು ಶಾಲೆ, ಕಾಲೇಜು ಆವರಣದ ಸುತ್ತಮುತ್ತಲೂ ನಿಷೇಧಿಸಲಾಗಿದೆ, ಆದರೂ ಯುವಕರು ತಂಬಾಕಿನತ್ತ ಆಕರ್ಷಣೆಗೊಳ್ಳುತ್ತಿರುವುದು ಖೇದಕರ ಎಂದರು.


ಆರೋಗ್ಯ ಇಲಾಖೆಯ ಎ.ಡಿ. ಜತ್ತಿ, ಶಿವಲಿಂಗ ಕರಗಣಿ, ಪದ್ಮಾ ಕಮತರ, ಸುಮಿತ್ರಾ ಹಂಬೂರ, ಸುರೇಶ ಹದ್ಲಿ ಮಾತನಾಡಿದರು.
ಪ್ರಮೀಳಾ ಮಹೇಂದ್ರಕರ, ಎಸ್.ಎಚ್. ರಾಠೋಡ, ಎಸ್.ಎಸ್. ಓಂಕಾರ, ಎಸ್.ಎನ್. ಕಲ್ಲಗೋನಾಳ ವೇದಿಕೆಯ ಮೇಲಿದ್ದರು. ಎಸ್.ಎಚ್. ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಓಂಕಾರ ಸ್ವಾಗತಿಸಿದರು. ಎಸ್.ಎನ್. ಕಲ್ಲಗೋನಾಳ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು: ಪರಬ

ಕಾಡು ಬೆಳೆಸಿ ನಾಡು ಉಳಿಸಿ ಎಂಬ ವಾಖ್ಯೆದಂತೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಿ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪಪಂ ಅಧ್ಯಕ್ಷ ಪರಮೇಶ ಪರಬ ಹೇಳಿದರು.

ಕುಡಿದ ಮತ್ತಿನಲ್ಲಿ ಮಹಿಳೆಯ ಜೀವಕ್ಕೆ ಕುತ್ತು ತಂದ ಪೊಲೀಸ್!

ನವದೆಹಲಿ : ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ವೇಗವಾಗಿ ಕಾರು ಚಲಾಯಿಸಿ…

ಸಂವಿಧಾನಕ್ಕೆ ತೆಲೆ ಬಾಗಿ ನಡೆದರೆ ಬದುಕು ಪಾವನ ಮಕ್ಕಳು ಶೈಕ್ಷಣಿಕ ಪ್ರಭಲತೆ ಸಾಧಿಸಬೇಕು – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ…

ಗೋರ ಸೇನಾ ಸಂಘಟನೇ ವತಿಯಿಂದ ಪ್ರತಿಭಟನೆ- ಸಂಗೂರ ಸಕ್ಕರೆ ಕಾರ್ಖಾನೆ:ಲಾರಿ ಹಾಯ್ದು ಒರ್ವ ಕಾರ್ಮೀಕ ಸಾವೂ, ಇಬ್ಬರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿ ಹಾವೇರಿ: ಹಾವೇರಿ ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ದಿನಾಂಕ:09.01.2022 ರಾತ್ರಿ 2.00 ಗಂಟೆ…