ಉತ್ತರಪ್ರಭ
ನರೇಗಲ್: ಪಟ್ಟಣದ ಹುಚ್ಚೀರೇಶ್ವರ ನಗರದ ವಿದ್ಯಾರ್ಥಿ ಕಾರ್ತಿಕ ವೀರಪ್ಪ ಹಳ್ಳಿಕೇರಿ(24) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಮೃತ ವಿದ್ಯಾರ್ಥಿ ಮೂರ್ಚೆ ರೋಗದ ಖಾಯಿಲೆಯಿಂದ ಬಳಲುತ್ತಿದ್ದನು ಶಿವಮೋಗ್ಗ, ಹುಬ್ಬಳ್ಳಿ, ಗದಗ, ನರೇಗಲ್ ಮುಂತಾದ ಕಡೆಗಳಲ್ಲಿ ತೋರಿಸಿದರು ಕಡಿಮೆ ಆಗಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ದೂರಿನಲ್ಲಿ ದಾಖಲಿಸಿದ್ದಾರೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.