ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಶನಿವಾರ ನಿಧನರಾದ ಹಿನ್ನೆಲೆ ಇಲ್ಲಿನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಚಿತ್ರಕ್ಕೆ ಪುಷ್ಪ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಧರ್ಮಗುರು ಲಾಲಶಾಪೀರ ಮಕಾಂದಾರ ಮಾತನಾಡಿ, ಇಬ್ರಾಹಿಂ ಸುತಾರ ಅವರ ನಾಡಿನೆಲ್ಲಡೆ ಪ್ರವಚನ ನೀಡುವ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ, ಎರಡುಭಾರಿ ಮುಳಗುಂದಕ್ಕೂ ಭೇಟಿಕೊಟ್ಟಿದ್ದರು. ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಾವುದ ಜಮಾಲಸಾಬನವರ, ಹಮೀದ್ ಮುಜಾವರ, ಗೂಳಪ್ಪ ಮಜ್ಜಿಗುಡ್ಡ, ಅಜರುದ್ದಿನ ಲಾಡಸಾಬನವರ, ಗಿರೀಶ ಫಿರಂಗಿ,ರಿಯಾಜ ಮುಲ್ಲಾ,ಶರಣಪ್ಪ ಕಮಾಜಿ,ಶರಣಪ್ಪ ಮಳ್ಳಿ,ಮುನ್ನಾ ಢಾಲಾಯತ ಹಾಗೂ ಬ್ಯಾಂಕ್ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

You May Also Like

ದಿಶಾ ರವಿ ಪರ ಧ್ವನಿಯೆತ್ತುವ ಅಗತ್ಯವಿದೆ

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ವಿರೋಧಿಸಿದ್ದಾರೆ. 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೈಲಿನಲ್ಲಿದ್ದಾರೆ. ಇದಕ್ಕೆ ನಾವೆಲ್ಲರು ಸಾಮೂಹಿಕವಾಗಿ ಜವಾಬ್ದಾರರಾಗುತ್ತೇವೆ. ಬಹಳ ದಿನಗಳಿಂದ ಇಂತಹ ಅನ್ಯಾಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೈ ಕಮಲದ ನಡುವೆ ಟ್ವೀಟ್ ಸಮರ

ಬ್ರಷ್ಟಾಚಾರದ ವಿಷಯವೀಗ ಕೈ-ಕಮಲದ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಡಿಕೆಶಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದರೆ, ಸಿಎಂ ಬಿಎಸ್ವೈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 22000 ಅತಿಥಿ ಶಿಕ್ಷಕರ ನೇಮಕಾತಿ

ಉತ್ತರಪ್ರಭ ಹುದ್ದೆ: 2022-23 ನೇ ಶೈಕ್ಷಣಿಕ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ…

ನಿಖಿಲ್ ಕುಮಾರಸ್ವಾಮಿ ವಿವಾಹ: ಪಾಸ್ ನೀಡಿದ ವಾಹನಗಳ ವಿವರಣೆ ಕೇಳಿದ ಕೋರ್ಟ್..!

ದೇಶಾದ್ಯಂತ ಲಾಕ್ ಡೌನ್ ಮದ್ಯೆಯೂ ನಟ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಇತ್ತಿಚೆಗಷ್ಟೆ ನಡೆದಿತ್ತು. ವಿವಾಹ ಸಂದರ್ಭದಲ್ಲಿ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.