ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಶನಿವಾರ ನಿಧನರಾದ ಹಿನ್ನೆಲೆ ಇಲ್ಲಿನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಚಿತ್ರಕ್ಕೆ ಪುಷ್ಪ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಧರ್ಮಗುರು ಲಾಲಶಾಪೀರ ಮಕಾಂದಾರ ಮಾತನಾಡಿ, ಇಬ್ರಾಹಿಂ ಸುತಾರ ಅವರ ನಾಡಿನೆಲ್ಲಡೆ ಪ್ರವಚನ ನೀಡುವ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ, ಎರಡುಭಾರಿ ಮುಳಗುಂದಕ್ಕೂ ಭೇಟಿಕೊಟ್ಟಿದ್ದರು. ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಾವುದ ಜಮಾಲಸಾಬನವರ, ಹಮೀದ್ ಮುಜಾವರ, ಗೂಳಪ್ಪ ಮಜ್ಜಿಗುಡ್ಡ, ಅಜರುದ್ದಿನ ಲಾಡಸಾಬನವರ, ಗಿರೀಶ ಫಿರಂಗಿ,ರಿಯಾಜ ಮುಲ್ಲಾ,ಶರಣಪ್ಪ ಕಮಾಜಿ,ಶರಣಪ್ಪ ಮಳ್ಳಿ,ಮುನ್ನಾ ಢಾಲಾಯತ ಹಾಗೂ ಬ್ಯಾಂಕ್ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ತಾಲೂಕಿನ ವಿವಿದೆಡೆ ತಾಪಂ ಇಓ ಅವರಿಂದ ಲಸಿಕಾಕರಣದ ಮೇಲ್ವೀಚಾರಣೆ

ಕೋವಿಡ್ ಲಸಿಕೆ ಪಡೆದ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ಸುರಕ್ಷಿತವಾಗಿದ್ದು, ಗ್ರಾಮೀಣ ಭಾಗದ ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಗುರಿಕಾರ ಹೇಳಿದರು.

ಪರಿಸರ ದಿನವೇ 23 ಮರಗಳ ಹಾಫ್ ಮರ್ಡರ್ : ವಿಂಡ್ ಕಂಪನಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಉತ್ತರಪ್ರಭ ನಿಂಗಪ್ಪ ಬಿ.ಮಡಿವಾಳರ ಗಾಳಿಯಂತ್ರ ಸಾಗಿಸಲು ಗಾಳಿ ಕೊಡುವ ಮರದ ಟೊಂಗೆಗಳು ಬಲಿ ಐತಿಹಾಸಿಕ ಗಿಡಗಳನ್ನು…

ಇಂದಿನಿಂದ ಶ್ರೀ ಹೊಳಲಮ್ಮದೇವಿ ಜಾತ್ರೆ ಆರಂಭ

ತಾಲೂಕಿನ ಶ್ರೀಮಂತಗಡದ ಇತಿಹಾಸ ಪ್ರಸಿದ್ಧ ಹೊಳಲಮ್ಮದೇವಿ ಜಾತ್ರಾ ಮಹೋತ್ಸವವು ಇಂದಿನಿಂದ ಪ್ರಾರಂಭವಾಗುತ್ತಿದೆ. ಫೆ.27ರಂದು ರಥೋತ್ಸವ ಹಾಗೂ ಫೆ.28ರ ರವಿವಾರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುತ್ತದೆ.

ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾ ಬಗರಹುಕುಮ್ ಸಾಗುವಳಿ; ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ – ರವಿಕಾಂತ ಅಂಗಡಿ ಒತ್ತಾಯ

ಉತ್ತರಪ್ರಭ ಸುದ್ದಿಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ…