ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಶನಿವಾರ ನಿಧನರಾದ ಹಿನ್ನೆಲೆ ಇಲ್ಲಿನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಚಿತ್ರಕ್ಕೆ ಪುಷ್ಪ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಧರ್ಮಗುರು ಲಾಲಶಾಪೀರ ಮಕಾಂದಾರ ಮಾತನಾಡಿ, ಇಬ್ರಾಹಿಂ ಸುತಾರ ಅವರ ನಾಡಿನೆಲ್ಲಡೆ ಪ್ರವಚನ ನೀಡುವ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ, ಎರಡುಭಾರಿ ಮುಳಗುಂದಕ್ಕೂ ಭೇಟಿಕೊಟ್ಟಿದ್ದರು. ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಾವುದ ಜಮಾಲಸಾಬನವರ, ಹಮೀದ್ ಮುಜಾವರ, ಗೂಳಪ್ಪ ಮಜ್ಜಿಗುಡ್ಡ, ಅಜರುದ್ದಿನ ಲಾಡಸಾಬನವರ, ಗಿರೀಶ ಫಿರಂಗಿ,ರಿಯಾಜ ಮುಲ್ಲಾ,ಶರಣಪ್ಪ ಕಮಾಜಿ,ಶರಣಪ್ಪ ಮಳ್ಳಿ,ಮುನ್ನಾ ಢಾಲಾಯತ ಹಾಗೂ ಬ್ಯಾಂಕ್ ನಿರ್ದೇಶಕರು ಇದ್ದರು.