ಆಲಮಟ್ಟಿ : ಸಮೀಪದ ಅರಳದಿನ್ನಿ ಗ್ರಾಮದಲ್ಲಿನ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆಯನ್ನು ಎತ್ತರಿಸಬೇಕು ಹಾಗು ಹೊಸದೊಂದು ಶೌಚಾಲಯ ನಿಮಿ೯ಸಬೇಕು ಎಂದು ಕನಾ೯ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ
ಈ ಕುರಿತು ಇಲ್ಲಿನ ಗ್ರಾಪಂ. ಅದ್ಯಕ್ಷ ಮಂಜುನಾಥ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆಲಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ಅರಳದಿನ್ನಿ ಗ್ರಾಮದಲ್ಲಿ ಮಹಿಳೆಯರು ನಿತ್ಯ ಶೌಚಕ್ಕಾಗಿ ತೀವ್ರ ಪರದಾಟ ನಡೆಸಬೇಕಾಗಿದೆ. ಗ್ರಾಮದಲ್ಲಿನ ಹಳೆ ಶೌಚಾಲಯದ ಪರಸ್ಥಿತಿ ಹದಗೆಟ್ಡಿದೆ. ಮಹಿಳೆಯರು ಹಿಡಿಶಾಪ ಹಾಕುವಂತಾಗಿದೆ. ನಿಸರ್ಗಕ್ರಿಯೆಗೆ ಅತ್ತಇತ್ತ ದೂರದವರೆಗೆ ಅಲೆದಾಡುವಂತಾಗಿದೆ ಎಂದು ದೂರಲಾಗಿದೆ.


ಹಳೆ ಶೌಚಾಲಯ ರಸ್ತೆಗೆ ಹತ್ತಿರವಾಗಿದೆ. ರಸ್ತೆ ನವೀಕರಣದಿಂದಾಗಿ ಶೌಚಾಲಯ ಮಟ್ಟಕ್ಕಿಂತ ರಸ್ತೆ ಎತ್ತರ ಹೆಚ್ಚಾಗಿದೆ. ಇದರಿಂದ ಶೌಚಾಲಯ ಬಳಿಸಲು ಮಹಿಳೆಯರು ಮುಜುಗರ ಪಟ್ಟು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಾತ್ರಿಯವರೆಗೆ ನಿಸರ್ಗಕ್ರಿಯೆ ತಡೆದುಕೊಳ್ಳುವ ದುಸ್ಥಿತಿ ಬಂದೊದಗಿದೆ. ಕತ್ತಲಲ್ಲಿ ಅಥವಾ ಬೆಳಕು ಹರಿಯುವ ಮುನ್ನವೇ ಹೋಗಬೇಕಾದ ದಯನೀಯ ಪರಿಸ್ಥಿತಿ ಇದೆ. ಕಾರಣ ಹಳೆ ಶೌಚಾಲಯದ ಗೋಡೆ ಮತ್ತಿಷ್ಟು ಮೂರನಾಲ್ಕು ಅಡಿ ಎತ್ತರಿಸಿ ಶೌಚಾಲಯ ನವೀಕರಿಸಬೇಕು ಹಾಗು ಹೊಸದಾಗಿ ಇನ್ನೊಂದು ಶೌಚಾಲಯ ಮಹಿಳೆಯರಿಗಾಗಿ ನಿಮಿ೯ಸಿ ಅನುಕೂಲ ಮಾಡಿಕೊಡಬೇಕು. ಮಹಿಳೆಯರಿಗೆ ಇಲ್ಲಿ ಒದಗಿರುವ ಸಂಕಷ್ಟಕ್ಕೆ , ಮಾನ ಮಯಾ೯ದೆ,ಆರೋಗ್ಯ ಗಮನದಲ್ಲಿಟ್ಟುಕೊಂಡು ಸಮಸ್ಯೆ ಪರಿಹಾರಕ್ಕೆ ತುತು೯ ಮುಂದಾಗಬೇಕು. ಅಲ್ಲದೇ ಅರಳದಿನ್ನಿ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ರೂಪಿಸಲು ಸಂಬಂಧಿಸಿದವರು ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ.
ಈಗಾಗಲೇ ಹೊಸ ಶೌಚಾಲಯ ನಿಮಾ೯ಣಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದಾಗ್ಯೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳಾವಕಾಶದ ಕೊರತೆ ಸಬೂಬ ಮುಂದಿಡುತ್ತಾ ಜಾರಿಕೊಳ್ಳುತ್ತಿದ್ದಾರೆ ಎಂದು ಸಂಘಟನೆ ದೂರಿದೆ. ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣು ಮಕ್ಕಳಿಗೆ ಅಗುತ್ತಿರುವ ಶೌಚಾಲಯ ಸೌಲಭ್ಯ ಇಲ್ಲದ ತೊಂದರೆಯನ್ನು ಪರಿಹರಿಸಬೇಕು. ವಿಳಂಬ ಧೋರಣೆ ತಾಳದೆ ,ಈ ಗಂಭೀರ ವಿಷಯವನ್ನು ಕಡೆಗಣಿಸದೇ ತಕ್ಷಣ ಕಾರ್ಯಪ್ರರ್ವತರಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕಿಳಿಯಬೇಕಾದೀತೆಂದು ವೇದಿಕೆಯ ಅಧ್ಯಕ್ಷ ಪತ್ತೇಸಾಬ ಚಾಂದ, ಉಪಾಧ್ಯಕ್ಷ ಚಂದ್ರಶೇಖರ್ ಹೆರಕಲ್, ಯುವ ಘಟಕ ಅಧ್ಯಕ್ಷ ಯಲಗೂರೇಶ್ ಮೇಟಿ, ನಗರ ಘಟಕ ಅಧ್ಯಕ್ಷ ಮಹಮ್ಮದ್ ಬಸೀರ ಮುಲ್ಲಾ, ಕಾಮಿ೯ಕ ಘಟಕದ ಉಪಾಧ್ಯಕ್ಷ ಶಿವಾನಂದ ಕೊಳ್ಳಾರ, ಕಾರ್ಯದರ್ಶಿ ರಸೂಲಸಾಬ ಹುಸೇನಸಾಬ ಸಿಂಧೆ, ಸಂಚಾಲಕ ಮಹಿಬೂಬ ಡೋಣೂರ, ರಫೀಕ ಅಥಣಿ ಮೊದಲಾದವರು ಎಚ್ಚರಿಸಿದ್ದಾರೆ.
ಪೋಟೋ ಫೈಲ್ : ಆಲಮಟ್ಟಿ ಸನಿಹದ ಅರಳದಿನ್ನಿ ಗ್ರಾಮದಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯದ ಗೋಡೆ ಎತ್ತರಿಸಲು ಹಾಗು ಹೊಸದಾಗಿ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಕನಾ೯ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಲಮಟ್ಟಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಹಿರೇಮಠ ಅವರಿಗೆ ಮನವಿ ಅಪಿ೯ಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ಮತ್ತೆ 6 ಕೊರೊನಾ ಪಾಸಿಟಿವ್!: ಒಂದು ಸಾವು

ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 322 ಕ್ಕೆ ಏರಿಕೆಯಾಗಿದೆ. ಇಂದು 05 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು

ಗದಗ ಜಿಲ್ಲೆಯ ಆರು ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಇಂದು ಮತ್ತೆ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.

ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ!: ವೈದ್ಯಕೀಯ ಶಿಕ್ಷಣ ಸಚಿವರಿಗೆ ಮಹಿಳಾ ವೈದ್ಯೆಯ ತರಾಟೆ!

ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ. ಮೂವತ್ತು ಲಕ್ಷ ಪರಿಹಾರ ಕೊಟ್ಟು ಸಮಾಧಾನ ಮಾಡ್ತೀರೆನ್ರಿ. ನಿಮ್ಮದು ಒಂದು ಸರ್ಕಾರನೇನ್ರಿ? ಯಾರಿಗೆ ಬೇಕು ನಿಮ್ಮ ಹಣ ..? ಎಲ್ಲರೂ ಒಂದು ತಿಂಗಳ ಸಂಬಳ ಕೊಟ್ರೆ ಸಾಕು..! ಹಣಕೊಟ್ಟು ಸಮಾಧಾನ ಮಾಡ್ತಿರೇನ್ರೀ? ನನಗೆ ನಮ್ಮ ನಾಗೇಂದ್ರ ಬೇಕು.. ಇದು ಮಹಿಳಾ ವೈದ್ಯೆ ಒಬ್ಬರು ವೈದ್ಯಕೀಯ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪರಿ.

ರಾಜ್ಯದಲ್ಲಿಂದು 5007 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5007 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85870 ಕ್ಕೆ ಏರಿಕೆಯಾದಂತಾಗಿದೆ.