ನಿಡಗುಂದಿ: ಸಂವಿಧಾನ ಕರ್ತೃ ಡಾ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿರುವ ರಾಯಚೂರ ಜಿಲ್ಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಪರ ನಾನಾ ಸಂಘಟನೆಗಳು ನಿಡಗುಂದಿ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟಿಸಿದರು.

ವಿವಿಧ ಸಂಘಟನೆಯ ಮುಖಂಡರಾದ ಅಶೋಕ ಚಲವಾದಿ, ಶ್ರೀನಾಥ ಭೈರವಾಡಗಿ, ಪೀರಪ್ಪ ದೊಡಮನಿ, ಲಕ್ಷ್ಮಣ ಮುಂದಿನಮನಿ ಘಟನೆ ಖಂಡಿಸಿ ಮಾತನಾಡಿ, ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಸ್ಪೃಶ್ಯರ ಏಳಿಗೆ ಸಹಿಸದ ಅನೇಕರು ಮೇಲಿಂದ ಮೇಲಿ ಸಂವಿಧಾನ ಶಿಲ್ಪಿಯನ್ನು ಅಪಮಾನ ಮಾಡುತ್ತಿದ್ದಾರೆ ಎಂದರು.

ಪರಶುರಾಮ ದಿಂಡವಾರ, ಅಶೋಕ ನಡುವಿನಮನಿ, ಮಂಜುನಾಥ ಕಟ್ಟೀಮನಿ, ರಮೇಶ ಹಾಲ್ಯಾಳ, ಹನುಮಂತ ಬಾಗೇವಾಡಿ, ಪ್ರಶಾಂತ ಚಲವಾದಿ, ಶಂಕರ ಅಮೀನಪ್ಪಗೋಳ, ಸಿದ್ದು , ಯಮನೂರಿ ತಳಗೇರಿ, ಕೃಷ್ಣಾ ಅದ್ವಾನಿ, ಮುತ್ತು ನಡುವಿನಮನಿ ಇದ್ದರು.
ಉಪತಹಶೀಲ್ದಾರ್ ಕೆ.ವೈ. ಹೊಸಮನಿ ಮನವಿ ಸ್ವೀಕರಿಸಿದರು. ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 6 ಕ್ಕೂ ಹೆಚ್ಚು ನಾನಾ ದಲಿತ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಅರ್ಪಿಸಿದರು.