ಆಲಮಟ್ಟಿ : ವಿಜಯಪುರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಅವರಿಗೆ 2021 ನೇ ಸಾಲಿನ ಅನುಪಮ ಸೇವಾ ಪ್ರಶಸ್ತಿ ಲಭಿಸಿದಕ್ಕೆ ಇಲ್ಲಿನ ಎಂ.ಎಚ್.ಎಂ.ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳು ಪ್ರಶಸ್ತಿ ಪುರಸ್ಕೃತರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.


ಅನುಪಮ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ಅದಿಕ್ಷಕ ಪ್ರಕಾಶ ಗೊಂಗಡಿ ಅವರು ಪ.ಪೂ.ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿರುವ ಅನನ್ಯ ಸೇವಾ ಕೈಂಕರ್ಯವನ್ನು ವಿಜಯಪುರ ಜಿಲ್ಲಾ ನೌಕರರ ಸಂಘ ಗುರುತಿಸಿ ಪ್ರತಿಷ್ಟಿತ ಪುರಸ್ಕಾರ ನೀಡಿ ಸತ್ಕರಿಸಿದ್ದು ಔಚಿತ್ಯಪೂರ್ಣವಾಗಿದೆ. ನಮ್ಮೆಲ್ಲ ಉಪನ್ಯಾಸಕ ಬಳಗಕ್ಕೆ ಅತೀವ ಸಂತಸವಾಗಿದೆ. ಪ್ರಕಾಶ ಗೊಂಗಡಿ ಅವರಲ್ಲಿರುವ ಸರಳ ಮೃದು ಸ್ವಭಾವ, ಮಾನನೀಯ ಪಾರದರ್ಶಕ ಮೌಲ್ಯಾಧಾರಿತ ಗುಣಗಳು,ಎಲ್ಲರೊಂದಿಗೆ ಸಹನಾಶೀಲರಾಗಿ ಬೆರೆಯುವ ಸೃಜನಶೀಲ ಅಪರೂಪದ ನಡೆನುಡಿಗಳು ನಿಜಕ್ಕೂ ಆದರ್ಶಪ್ರಾಯವಾಗಿವೆ ಎಂದು ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜಿನ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಹೇಳಿದರು.
ಆಲಮಟ್ಟಿಯ ಎಂ.ಎಚ್.ಎಂ
ಪ.ಪೂ.ಕಾಲೇಜು ಉಪನ್ಯಾಸಕ ಬಳಗ ಪ್ರಾಂಶುಪಾಲ ಹೇಮಗಿರಿಮಠ ಅವರ ನೇತೃತ್ವದಲ್ಲಿ ವಿಜಯಪುರಕ್ಕೆ ತೆರಳಿ ಪ್ರಕಾಶ ಗೊಂಗಡಿ ದಂಪತಿ ಅವರನ್ನು ಶಾಲು ಹೊದಿಸಿ ಫಲಪುಷ್ಪವನ್ನು ನೀಡಿ ಅಭಿಮಾನಪೂರ್ವಕ ಹೃದಯ ಸ್ಪಶಿ೯ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಪಿ.ವೈ.ಧನಶೆಟ್ಚಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ,ದ್ವೀತಿಯ ದಜೆ೯ ಸಹಾಯಕ ಡಿ.ಟಿ.ಸಿಂಗಾರಿ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಸರ್ಕಾರಿ ನೌಕರಸ್ಥರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ!

ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಲಿಂ, ತೋಂಟದ ಸಿದ್ದಲಿಂಗ ಶ್ರೀ ಆದರ್ಶಗಳ ಮೇರು ಪರ್ವತ – ಡಾ.ಸಿದ್ದರಾಮ ಸ್ವಾಮೀಜಿ ಅಭಿಮತ

ಸಚಿತ್ರ ವರದಿ : ಗುಲಾಬಚಂದ ಜಾಧವ ಗದಗ : ಕ್ರಿಯಾಶೀಲತೆಯ ಮಾತೃ ಹೃದಯಿ ಲಿಂಗೈಕ್ಯ ಡಾ.ತೋಂಟದ…

ಕೊರೋನಾ ಕಾವ್ಯ-9

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.

ಕುಡುಕರ ನಶೆಗೆ ಸುಟ್ಟು ಭಸ್ಮವಾದ ಬೈಕ್ ಗಳು!

ಉಡುಪಿ : ಕುಡುಕರ ನಶೆಗೆ ಮೂರು ಬೈಕ್ ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.