ಉತ್ತರಪ್ರಭ ಸುದ್ದಿ
ಗದಗ:
ಕಳೆದ ಒಂದು ವಾರದಿಂದ ಅಡವಿಸೊಮಾಪುರ ಗ್ರಾಮದ ಬಳಿ ರಸ್ತೆ ಮದ್ಯೆ ಕುಡಿಯುವ ನೀರಿನ ಪೈಪ ಒಡೆದು ಒಂದು ವಾರ ಕಳೆದರೂ ಇತ್ತ ಕಡೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೆ ರಸ್ತೆ ಹಾಳಾಗಿ ಹೊಗಿದ್ದು ಅಂತಹ ರಸ್ತೆಯಲ್ಲಿ ಪ್ರಯಾಣಿಕರು ಹರಸಾಹಸ ಮಾಡಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಾರೆ ಅದರ ಮದ್ಯೆ ಪೈಪ್ ಒಡೆದಿದ್ದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ.
ಅಷ್ಟೇ ಅಲ್ಲದೇ ಶಾಲಾ ಮಕ್ಕಳು ರಸ್ತೆ ದಾಟುವಾಗ ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳು ಬಹಳ. ರೈತರ ಹೊಲಕ್ಕೆ ನೀರು ಹರಿದು ಬೆಳೆ ಬಾರದ ರೀತಿಯಲ್ಲಿ ಹೊಲಗಳಲ್ಲಿ ನೀರು ನಿಂತಿದೆ ಇದರಿಂದ ರೈತರು ಅಧಿಕಾರಿಗಳಿಗೆ ಹೀಡಿ ಶಾಪ ಹಾಕುತ್ತಿದ್ದಾರೆ.
ನೀರು ಅಮೂಲ್ಯ ವಾಗಿದ್ದು ಅದನ್ನು ಪೋಲಾಗದಂತೆ ತಡೆಯಲು ಹಲವು ಜಾಗೃತಿ ಕಾರ್ಯಾಗಾರಗಳನ್ನು ಸರ್ಕಾರ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಇತ್ತ ಅಧಿಕಾರಿಗಳು ಗಡದ ನಿದ್ದೆಯನ್ನು ಮಾಡುತ್ತಾ ಸಂಬಳ ಪಡೆದು ಕಾಲಹರಣ ಮಾಡುತ್ತಿರುವುದು ಜನರಲ್ಲಿ ಬೇಸರ ಮೂಡಿದೆ. ನೀರನ್ನು ಪೋಲಾಗದಂತೆ ತಡೆಯಬೇಕಾದ ಅಧಿಕಾರಿಗಳು ನೀರು ಪೊಲು ಮಾಡುತ್ತಿರುವುದು ನೋಡಿದರೆ ಅಧಿಕಾರಿಗಳು ಜಾಣಕುರುಡುತನ ಮೆರಯುತ್ತಿದ್ದಾರೆ.

ನೀರು ಕಳೆದ ಶನಿವಾರದಿಂದ ಹರಿದು ಹೊಗುತ್ತಿದ್ದರು ಯಾವುದೇ ಅಧಿಕಾರಿ ಇತ್ತ ಕಡೆ ಗಮನ ಹರಿಸದೆ ಕುಡಿಯುವ ನೀರನ್ನು ಪೋಲು ಮಾಡಿ ಜನರಿಗೆ ಅನಾವಶ್ಯಕ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಪಕ್ಕದಲ್ಲೆ ಇರುವ ಜಮಿನಿಗೆ ನಿರು ಹರಿಯುತ್ತಿದ್ದು, ದನಗಳಿಗೆ ಅಂತ ಸಂಗ್ರಹಣೆ ಮಾಡಿದ ಮೇವಿನ ಬಣವಿಗೆ ನೀರು ಹೊಕ್ಕು ಹಾಳಾಗಿ ಹೊಗಿವೇ ಇದಕ್ಕೆಲ್ಲ ಅಧಿಕಾರಿಗಳೆ ಹೊಣೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಒಂದು ವಾರದಿಂದ ಕುಡಿಯೋ ನೀರಿನ ಪೈಪ ಹೊಡದೈತರಿ ಹಂಗ ನೀರ ಹರದ ರೊಡ ಮತ್ತು ಹೊಲಕ್ಕ ಹರಿಯಾಕತೈತಿ ಯಾರು ಬಂದು ಅದನ್ನು ರೀಪೆರಿ ಮಾಡಿಲ್ಲ ಶಾಲೆ ಹುಡುಗರು, ಮುದುಕರು ಮತ್ತು ಬಹಳ ಗಾಡಿಯವರು ಜಾರಿ ಬಿದ್ದ ಗಾಯಾ ಮಾಡಕೊಂಡಾರ ಅಷ್ಟ ಅಲ್ಲರಿ ಹೊಲದಾಗ ಒಟ್ಟಿರೊ ಬಣವಿಗೆ ನೀರ್ ಹೊಕ್ಕೊಂಡು ಮೇವ ಹಾಳಾಗೈತಿ, ಈ ಸಮಸ್ಯೆ ಯಾರಿಗ ಹೆಳೋದು ಅಂತ ತಿಳಿವಲ್ದ, ಒಟ್ಟಾರೆ ಸರಿಹೋದ್ರ ಸಾಕು.

-ಸೋಮನಗೌಡರ ಪಾಟೀಲ್
ಅಡವಿಸೋಮಾಪುರ ಗ್ರಾಮದ ನಿವಾ
ಸಿ

ಇನ್ನಾದರೂ ಅಧಿಕಾರಿಗಳು ಉತ್ತರಪ್ರಭ ವರದಿಯಿಂದ ಎಚ್ಚೆತ್ತು ಪೋಲಾಗುತ್ತಿರುವ ನೀರನ್ನು ತಡೆಯುವಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಪೂರೈಸಲಿ ಎಂಬ ಕಳಕಳಿ.

Leave a Reply

Your email address will not be published. Required fields are marked *

You May Also Like

ಮಾ.4 ರಿಂದ ರಾಜ್ಯ ಬಜೆಟ್ ಅಧಿವೇಶನ: ಮೀಸಲಾತಿ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆ!

ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಅಧಿವೇಶನ ನಡೆಸಲಾಗುತ್ತಿದ್ದು, ಮಾರ್ಚ್ 4 ಮತ್ತು 5 ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಆನ್ ಲೈನ್ ಶಿಕ್ಷಣದ ಬಗ್ಗೆ ನಾಳೆ ಮಹತ್ವದ ಸಭೆ: ಸಚಿವ ಸುರೇಶ್ ಕುಮಾರ್

ಎಲ್ ಕೆಜಿ, ಯುಕೆಜಿ ಆನ್ ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒಳಿತಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಕೊರೊನಾ ಎಫೆಕ್ಟ್: ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ, ಐಟಿಐ ಉದ್ಯೋಗಿಗಳು ನರೆಗಾ ಕೆಲಸಕ್ಕೆ..!

ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಹಾವಳಿ..!

ರಾಜ್ಯದಲ್ಲಿ ಒಂದೇ ದಿನದಲ್ಲಿ 760 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.