ಉತ್ತರಪ್ರಭ ಸುದ್ದಿ
ಗದಗ:
ಕಳೆದ ಒಂದು ವಾರದಿಂದ ಅಡವಿಸೊಮಾಪುರ ಗ್ರಾಮದ ಬಳಿ ರಸ್ತೆ ಮದ್ಯೆ ಕುಡಿಯುವ ನೀರಿನ ಪೈಪ ಒಡೆದು ಒಂದು ವಾರ ಕಳೆದರೂ ಇತ್ತ ಕಡೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೆ ರಸ್ತೆ ಹಾಳಾಗಿ ಹೊಗಿದ್ದು ಅಂತಹ ರಸ್ತೆಯಲ್ಲಿ ಪ್ರಯಾಣಿಕರು ಹರಸಾಹಸ ಮಾಡಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಾರೆ ಅದರ ಮದ್ಯೆ ಪೈಪ್ ಒಡೆದಿದ್ದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ.
ಅಷ್ಟೇ ಅಲ್ಲದೇ ಶಾಲಾ ಮಕ್ಕಳು ರಸ್ತೆ ದಾಟುವಾಗ ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳು ಬಹಳ. ರೈತರ ಹೊಲಕ್ಕೆ ನೀರು ಹರಿದು ಬೆಳೆ ಬಾರದ ರೀತಿಯಲ್ಲಿ ಹೊಲಗಳಲ್ಲಿ ನೀರು ನಿಂತಿದೆ ಇದರಿಂದ ರೈತರು ಅಧಿಕಾರಿಗಳಿಗೆ ಹೀಡಿ ಶಾಪ ಹಾಕುತ್ತಿದ್ದಾರೆ.
ನೀರು ಅಮೂಲ್ಯ ವಾಗಿದ್ದು ಅದನ್ನು ಪೋಲಾಗದಂತೆ ತಡೆಯಲು ಹಲವು ಜಾಗೃತಿ ಕಾರ್ಯಾಗಾರಗಳನ್ನು ಸರ್ಕಾರ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಇತ್ತ ಅಧಿಕಾರಿಗಳು ಗಡದ ನಿದ್ದೆಯನ್ನು ಮಾಡುತ್ತಾ ಸಂಬಳ ಪಡೆದು ಕಾಲಹರಣ ಮಾಡುತ್ತಿರುವುದು ಜನರಲ್ಲಿ ಬೇಸರ ಮೂಡಿದೆ. ನೀರನ್ನು ಪೋಲಾಗದಂತೆ ತಡೆಯಬೇಕಾದ ಅಧಿಕಾರಿಗಳು ನೀರು ಪೊಲು ಮಾಡುತ್ತಿರುವುದು ನೋಡಿದರೆ ಅಧಿಕಾರಿಗಳು ಜಾಣಕುರುಡುತನ ಮೆರಯುತ್ತಿದ್ದಾರೆ.

ನೀರು ಕಳೆದ ಶನಿವಾರದಿಂದ ಹರಿದು ಹೊಗುತ್ತಿದ್ದರು ಯಾವುದೇ ಅಧಿಕಾರಿ ಇತ್ತ ಕಡೆ ಗಮನ ಹರಿಸದೆ ಕುಡಿಯುವ ನೀರನ್ನು ಪೋಲು ಮಾಡಿ ಜನರಿಗೆ ಅನಾವಶ್ಯಕ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಪಕ್ಕದಲ್ಲೆ ಇರುವ ಜಮಿನಿಗೆ ನಿರು ಹರಿಯುತ್ತಿದ್ದು, ದನಗಳಿಗೆ ಅಂತ ಸಂಗ್ರಹಣೆ ಮಾಡಿದ ಮೇವಿನ ಬಣವಿಗೆ ನೀರು ಹೊಕ್ಕು ಹಾಳಾಗಿ ಹೊಗಿವೇ ಇದಕ್ಕೆಲ್ಲ ಅಧಿಕಾರಿಗಳೆ ಹೊಣೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಒಂದು ವಾರದಿಂದ ಕುಡಿಯೋ ನೀರಿನ ಪೈಪ ಹೊಡದೈತರಿ ಹಂಗ ನೀರ ಹರದ ರೊಡ ಮತ್ತು ಹೊಲಕ್ಕ ಹರಿಯಾಕತೈತಿ ಯಾರು ಬಂದು ಅದನ್ನು ರೀಪೆರಿ ಮಾಡಿಲ್ಲ ಶಾಲೆ ಹುಡುಗರು, ಮುದುಕರು ಮತ್ತು ಬಹಳ ಗಾಡಿಯವರು ಜಾರಿ ಬಿದ್ದ ಗಾಯಾ ಮಾಡಕೊಂಡಾರ ಅಷ್ಟ ಅಲ್ಲರಿ ಹೊಲದಾಗ ಒಟ್ಟಿರೊ ಬಣವಿಗೆ ನೀರ್ ಹೊಕ್ಕೊಂಡು ಮೇವ ಹಾಳಾಗೈತಿ, ಈ ಸಮಸ್ಯೆ ಯಾರಿಗ ಹೆಳೋದು ಅಂತ ತಿಳಿವಲ್ದ, ಒಟ್ಟಾರೆ ಸರಿಹೋದ್ರ ಸಾಕು.

-ಸೋಮನಗೌಡರ ಪಾಟೀಲ್
ಅಡವಿಸೋಮಾಪುರ ಗ್ರಾಮದ ನಿವಾ
ಸಿ

ಇನ್ನಾದರೂ ಅಧಿಕಾರಿಗಳು ಉತ್ತರಪ್ರಭ ವರದಿಯಿಂದ ಎಚ್ಚೆತ್ತು ಪೋಲಾಗುತ್ತಿರುವ ನೀರನ್ನು ತಡೆಯುವಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಪೂರೈಸಲಿ ಎಂಬ ಕಳಕಳಿ.

Leave a Reply

Your email address will not be published. Required fields are marked *

You May Also Like

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…

ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 348. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 4804 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 2824 ಸಕ್ರೀಯ ಪ್ರಕರಣಗಳಿವೆ.

ಕುರಿ ಮತ್ತು ಮೇಕೆಗಳ ಅನುಗ್ರಹ ಯೋಜನೆ ಮುಂದುವರೆಸಲು ಮನವಿ

ಕುರಿಗಾರರಿಗೆ ಅನುಕೂಲಕರವಾಗಿದ್ದ ಅನುಗ್ರಹ ಯೋಜನೆಯನ್ನು ಮುಂದುವರೆಸಬೇಕು. ಜೊತೆಗೆ ಯೋಜನೆಯಡಿ ಬಾಕಿ ಇರುವ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.