ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ ಇದೆ. ಬುಧವಾರ ಮತ್ತೆ 100 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 16 ಜನ 18 ವರ್ಷದೊಳಗಿನ ಮಕ್ಕಳಿದ್ದಾರೆ. ಜೊತೆಗೆ ಸೋಂಕಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಈ ಮೂಲಕ ಮೂರನೇ ಅಲೆಯ ಮೊದಲ ಸಾವು ಇದಾಗಿದೆ.

ಬುಧವಾರವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ : 658850. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ : 710766. ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ : 685808. ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು : 26958 (ಇಂದಿನ 100 ಸೇರಿ). ಈವರೆಗೆ ಕೋವಿಡ್ ನಿಂದ ಮೃತಪಟ್ಟವರು : 320 (ಇಂದಿನ 1 ಸೇರಿ). ಸೋಂಕಿನಿಂದ ಗುಣಮುಖರಾದವರು : ಒಟ್ಟು 25898 ಜನ (ಇಂದಿನ 36 ಸೇರಿ) ಸಕ್ರಿಯ ಪ್ರಕರಣಗಳು : 740

ತಾಲೂಕುವಾರು ಒಟ್ಟು ಸೋಂಕಿತರ ವಿವರ : ಗದಗ-53, ಮುಂಡರಗಿ-25, ನರಗುಂದ-00, ರೋಣ-17, ಶಿರಹಟ್ಟಿ-05, ಹೊರಜಿಲ್ಲೆಯ ಪ್ರಕರಣಗಳು-00

ಸೋಂಕಿತ ಮಹಿಳೆ ಸಾವು: ಗದಗ ರಾಜೀವ ಗಾಂಧೀ ನಗರದ ನಿವಾಸಿ 60 ವರ್ಷದ ಮಹಿಳೆ (ಪಿ-3368146) ಇವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಇವರನ್ನು ಕೋವಿಡ್ ಸೋಂಕು ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಇವರು ಬಹು ಅಂಗಾಂಗ ವೈಫಲ್ಯದಿಂದಾಗಿ ದಿ 18 01-2022 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You May Also Like

ಕಾಂಗ್ರೆಸ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಮೂಂದುಡಲು ಕಾರಣವೆನು…?

ಉತ್ತರಪ್ರಭಚುನಾವಣೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದ. ಸಿದ್ದರಾಮಯ್ಯ, ಡಿಕೆಶಿ…

ಕೊರೊನಾ: ಒಂದೇ ದಿನ 2,003 ಸಾವು, 10,974 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊರೊನಾ ರೋಗಕ್ಕೆ 2,003 ನಾಗರಿಕರು ಬಲಿಯಾಗಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಗದಗನಲ್ಲಿ ಬೆಂಕಿಗೆ ಆಹುತಿಯಾದ ಸ್ಕೂಟಿ ಪ್ಲೇಜರ್

ನಗರದ ಗಂಗಾಪೂರ ಪೇಟೆಯ ವೀರನಾರಾಯಣ ದೇವಸ್ಥಾನ ಬಳಿ ನಿಲ್ಲಿಸಿದ ಸ್ಕೂಟಿ ಪ್ಲೇಜರ್ ಆಕಸ್ಮಿಕ ಬೆಂಕಿಗೆ ಹೊತ್ತು ಉರಿಯಿತು.

ಪ್ರತಿ ಗ್ರಾಮಕ್ಕೂ ಜಲಜೀವನ್ ಮಿಷನ್ ಉಪಯುಕ್ತ: ಶಾಸಕ ರಾಮಣ್ಣ

ಲಕ್ಷ್ಮೇಶ್ವರ: ತಾಲೂಕಿನ ಉಂಡೇನಹಳ್ಳಿ ಒಡೆಯರ ಮಲ್ಲಾಪೂರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಶಾಸಕ ರಾಮಣ್ಣ ಲಮಾಣಿ ಭೂಮಿ ಪೂಜೆ ನೆರವೇರಿಸಿದರು.