ವರದಿ: ವಿಠಲ ಕೆಳೂತ್


ಮಸ್ಕಿ: ಬಸವ ವಸತಿ ಯೋಜನೆ‌ ಹಾಗೂ ಡಾ.‌ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ 30 ಮನೆಗಳು ಮಂಜೂರು ಆಗಿವೆ ಅರ್ಹ ಪಲಾನುಭವಿಗಳಿಗೆ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಭೋವಿ ಹೇಳಿದರು.
ತಾಲೂಕಿನ ಮಾರಲದಿನ್ನಿ ಗ್ರಾಪಂಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಬಸವ ವಸತಿ ಯೋಜನೆಯಲ್ಲಿ 20 ಮನೆಗಳು, ಡಾ. ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ 7 ಮನೆ, ಇದರಲ್ಲಿ ಪಜಾಗೆ 5 ಮತ್ತು ಪಪಂ ವರ್ಗಕ್ಕೆ 02 ಮನೆಗಳು, ಅಲ್ಪ ಸಂಖ್ಯಾತರು ಸೇರಿದಂತೆ ಒಟ್ಟು 30ಮನೆಗಳು ಮಂಜೂರು ಆಗಿವೆ ಎಂದರು.


ಅದಕ್ಕೆ ಗ್ರಾಪಂ ಸದಸ್ಯರು ಪ್ರತಿಕ್ರಿಯಿಸಿ, ಸರಕಾರದಿಂದ ಮನೆ ಕೊಡಿಸುತ್ತಾರೆ ಎಂದು ಜನ ನಮ್ಮನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಕಡಿಮೆ ಮನೆಗಳು ಬಂದಿದ್ದರಿಂದ ಅರ್ಹ ಪಲಾನುಭವಿಗಳಿಗೆ ಮನೆ ಒದಗಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಮನೆ ಕೊಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಬೇಕೆಂದು ಒತ್ತಾಯಿಸಿದರು.


ಸದ್ಯಕ್ಕೆ ಸರಕಾರದಿಂದ ಬಂದಿರುವ ಮನೆಗಳು ಬಡ ಜನರಿಗೆ ಒದಗಿಸಬೇಕು, ಮುಂದಿನ ದಿನದಲ್ಲಿ ಹೆಚ್ಚಿನ ಮನೆ ಕೊಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಭಾಗದಲ್ಲಿ ಎಸ್ಸಿ ಎಸ್ಟಿ ಜನಸಂಖ್ಯೆ ಹೆಚ್ಚಿನದ್ದು ಇದೆ. ಈ ವರ್ಗದ ಬಹುತೇಕ ಜನರಿಗೆ ಮನೆಗಳು ಇಲ್ಲ. ‌ಗುಡಿಸಲಿನಲ್ಲಿ ವಾಸ ಮಾಡುತ್ತಿಲ್ಲ. ಇವರಿಗೆ ಕೇವಲ 7ಮನೆಗಳು ಮಂಜೂರು ಆಗಿದ್ದು ಬೇಸರದ ಸಂಗತಿ ಎಂದು ಗ್ರಾಮ ಸದಸ್ಯರು ಅಸಮಾಧಾನ ಹೊರ ಹಾಕಿದರು.


ಬಳಿಕ ಗ್ರಾಪಂ‌ ಅಧ್ಯಕ್ಷ ಟಾಕಪ್ಪ ಮೆಣಸಿನಕಾಯಿ ಅವರು ಮಾತನಾಡಿ, ಸರಕಾರದಿಂದ ಮಂಜೂರು ಆಗಿರುವ ಮನೆಗಳನ್ನು ವಾಪಾಸ್ಸು ಕಳಿಸುವುದು ಬೇಡ, ಎಲ್ಲಾರು ಜೊತೆಗೂಡಿ ಇದನ್ನು ಬಡ ಜನರಿಗೆ ಹಂಚಿಕೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹುಲಿಗೆಮ್ಮ, ಬೀರಪ್ಪ ವೆಂಕಟಾಪೂರ, ಲಕ್ಷ್ಮಿ, ಭೀಮವ್ವ, ಮೌನಮ್ಮ, ಹನುಮಂತ, ಗ್ರಾಪಂ ಸಿಬ್ಬಂದಿ ಶಿವಪುತ್ರಪ್ಪ ಮಾರಲದಿನ್ನಿ, ಮೌನೇಶ ಹೊಸಮನಿ ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.

ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ…

ನಾಳೆ ಸತತ 8ನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ನಂಬುಗೆಯ ನಾಯಕರಾಗಿ, ನಾಡಿನ ಶಿಕ್ಷಕ ಸಮುದಾಯದ ಜೀವಧ್ವನಿಯಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಹೊರಟ್ಟಿಯವರು ನಾಡಿಗೆ ಪರಿಚಿತರಾಗಿದ್ದೇ…

ಮಧುಸ್ವಾಮಿ ವರ್ತನೆ ಸರಿಯಲ್ಲ: ಸಿಎಂ ಬಿಎಸ್ವೈ

ಬೆಂಗಳೂರು: ಕಾನೂನು ಸಚಿವ ಜೆ.ಸಿ ಮಧುಸ್ವಾಮಿ ರೈತ ಮಹಿಳೆಗೆ ಅವಾಚ್ಯವಾಗಿ ಮಾತಾಡಿದ್ದು ಸರಿಯಲ್ಲ. ಯಾರೇ ಆಗಲಿ…