ಉತ್ತರಪ್ರಭ ಸುದ್ದಿ

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿ ಮುಂದೆ ಡಿ.ಎಸ್.ಎಸ್. ಸಂಘಟನೆಗಳು ನಡೆಸುತ್ತಿದ್ದ ಆಮರಣ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ, ಗದಗ ತಹಶೀಲ್ದಾರ ಕಿಷನ್ ಕಲಾಲ್ ಭೇಟಿ ನೀಡಿ ಸತ್ಯಾಗ್ರಹ ನಿರತರ ಮನವಿ ಸ್ವೀಕರಿಸಿದರು. ನಂತರ ಸತ್ಯಾಗ್ರಹ ಅಂತ್ಯಗೊಂಡಿತು.

ಈ ವೇಳೆ ಚಿಂಚಲಿ ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ ಹರಿಜನ ಮಾತನಾಡಿ, 11ನೇ ವಾರ್ಡಿನ ಪಪಂ ಸದಸ್ಯ ಬಸವಂತಪ್ಪ ಹಾರೋಗೇರಿ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಖೋಟ್ಟಿ ಆಗಿದ್ದು ತನಿಖೆ ನಡೆಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಒಂದುವರೆ ವರ್ಷದ ಹಿಂದೆ ಮನವಿ ಕೊಟ್ಟಿದ್ದೇವೆ, ಇವರೆಗೂ ಇತ್ಯರ್ಥವಾಗಿಲ್ಲ ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತು ಆಮರಣ ಸತ್ಯಾಗ್ರಹ ಮಾಡಬೇಕಾಗಿದೆ. ನಿಜವಾದ ಪರಿಶಿಷ್ಟರ ಸವಲತ್ತುಗಳು ಅನ್ಯರ ಪಾಲಾಗಿದ್ದು ಕೂಡಲೆ ನ್ಯಾಯ ಒದಗಿಸಬೇಕು. ಈ ಕುರಿತು ಲಿಖಿತ ಭರವಸೆ ಕೊಡಬೇಕು. ಎಂದರು.

ನಂತರ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, ಖೋಟ್ಟಿ ಜಾತಿ ಪ್ರಮಾಣ ಪತ್ರ ರದ್ದು ಕೋರಿ ಸಲ್ಲಿಸಿರುವ ಮನವಿ ಈಗಾಗಲೇ ಜಿಲ್ಲಾಡಳಿತ ತನಿಖೆ ಹಂತದಲ್ಲಿದೆ. ಪರ ಮತ್ತು ವಿರೋದಗಳನ್ನ ಆಲಿಸಿ ಜಿಲ್ಲಾಧಿಕಾರಿಗಳು ನ್ಯಾಯ ಇತ್ಯರ್ಥ ಮಾಡಲಿದ್ದು ತಮ್ಮ ಮನವಿಯನ್ನ ಅವರಿಗೆ ಸಲ್ಲಿಸುತ್ತೇವೆ. ಎಂದು ಭರವಸೆ ನೀಡಿದರು. ನಂತರ ಅರ್ಜಿದಾರ ಮರಿಯಪ್ಪ ನಡುಗೇರಿ ಮಾತನಾಡಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಅನ್ಯಾಯವಾಗಿದ್ದು ತಾವು ಕೊಟ್ಟ ಭರವಸೆ ಕೂಡಲೆ ಈಡೆರದಿದ್ದರೆ ಜಿಲ್ಲಾಡಳಿತದ ಮುಂದೆ ಮತ್ತೆ ಸತ್ಯಾಗ್ರಹ ನಡೆಸುತ್ತೇವೆ. ಎಂದರು.

ಈ ಸಂದರ್ಭದಲ್ಲಿ ಗದಗ ತಾಲೂಕ ಸಮಾಜ ಕಲ್ಯಾಣಧಿಕಾರಿ ಎಸ್.ಎಂ.ಹೆಬ್ಬಳ್ಳಿ, ಡಿಎಸ್‍ಎಸ್‍ನ ಸುಭಾಶ್ ಜಾಲಣ್ಣವರ, ಪ್ರಕಾಶ ಗಡದವರ, ದೇವಪ್ಪ ನಡುಗೇರಿ, ಪರಸುರಾಮ ನಡುಗೇರಿ, ಗಾಳೆಪ್ಪ ನಡುಗೇರಿ, ಉಡಚಪ್ಪ ಪೂಜಾರ, ಸಂತೋಷ ಜಾಲಣ್ಣವರ, ಮಹಾಂತೇಶ ದೊಡ್ಡಮನಿ, ಬಸವರಾಜ ನಡುಗೇರಿ, ಬಸವಣ್ಣೆಪ್ಪ ನಡುಗೇರಿ, ಮಂಜು ಗಡದವರು, ಶರಣಪ್ಪ ಕಾಳೆ, ಕನಕಪ್ಪ ಹಲಗಿಕೆಂಚಣ್ಣವರ, ಫಕ್ಕಿರೇಶ ಚಾಕಲಬ್ಬಿ ಮೊದಲಾದವರು ಇದ್ದರು.

ಮುಳಗುಂದ ಡಿಎಸ್‍ಎಸ್ ಸಂಘಟನೆ ನಡಸುತ್ತಿದ್ದ ಸತ್ಯಾಗ್ರಹ ಮನವಿಯನ್ನ ಸಮಾಜ ಕಲ್ಯಾಣಧಿಕಾರಿ ಪ್ರಶಾಂತ ವರಗಪ್ಪನವರ ಸ್ವೀಕರಿಸಿದರು.

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

20ನೇ ಶತಮಾನದ ದೀರ್ಘಕಾಲಿಕ ವೈಜ್ಞಾನಿಕ ತಪಸ್ಸಿನಿಂದ ಹೊರಬಂದ ಅಮೂಲ್ಯ ಫಲಗಳು ರಾಮನ್ ಪರಿಣಾಮ ಹಾಗೂ ಸಾಪೇಕ್ಷವಾದ ರಾಮನ್ ಪರಿಣಾಮ ವಿಶ್ವದ ರಹಸ್ಯವನ್ನು ಬೇಧಿಸಿ ಮುಂದಿನ ಎಲ್ಲಾ ವೈಜ್ಞಾನಿಕ ಪ್ರಗತಿಗೆ ಸರಿಯಾದ ದಿಕ್ಕು ತೋರಿಸಿದ ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹಾಗೆಯೇ ನಿಸರ್ಗದ ರಹಸ್ಯವನ್ನು ಬಯಲು ಮಾಡಿದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಬಿರದಲ್ಲಿ ನಿಲ್ಲಿಸಿದ

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಅಂತಿಮವಾಗಿ ಚುನಾವಣಾ ಕಣದಲ್ಲುಳಿದ ಅಭ್ಯರ್ಥಿಗಳ ಹಾಗೂ ಚಿಹ್ನೆ ಹಂಚಿಕೆ ವಾರ್ಡವಾರು ವಿವರ

ಗದಗ :ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ  ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಇಂತಿದೆ: ವಾರ್ಡ…

ಗದಗ ಜಿಲ್ಲೆಯಲ್ಲಿ ಸೋಂಕಿನ ಏಕ್-ದಮ್ ನೆಗೆತ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ…

ಕೊರ್ಲಹಳ್ಳಿಯಲ್ಲಿ ನೀರಿನ ಗೋಳು: ತುಂಗೆಯ ಪಾತ್ರದಲ್ಲೂ ನೀರಿಗೆ ತಾಪತ್ರಯ!

ನದಿ ನೀರಿನ ಪಾತ್ರದ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ ಎಂದರೆ ನಿಜಕ್ಕೂ ಆಶ್ಚರ್ಯ. ಹೌದು ನೀರಿನ ಸಮಸ್ಯೆ ಎಂದರೆ ಒಂದೆಡೆ ಆಳುವವರ ನಿರ್ಲಕ್ಷ್ಯ, ಮತ್ತೊಂದೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಹೆಚ್ಚಿನ ಹಣದ ವಸೂಲಿ. ಇದರಿಂದ ಗ್ರಾಮಸ್ಥರು ತತ್ತಿರಿಸುವಂತಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.