ಉತ್ತರಪ್ರಭ ಸುದ್ದಿ

ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು ದಿನಗಳ ಹಿಂದೆ ಪ್ರಕಟಿಸಿತ್ತು. ನಾಮ ಪತ್ರ ಸಲ್ಲಿಸಲು ದಿನಾಂಕ: 15.12.2021 ಕೊನೆಯ ದಿನ ವಾಗಿದ್ದು, ಈಗಾಗಲೇ ಕೆಲವು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ,ಇನ್ನೂ ಹಲವು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ ಕಾಂಗ್ರೇಸ್  35 ವಾರ್ಡಗಳ ಪೈಕಿ 26 ಅಭ್ಯರ್ಥಿಗಳ  ಪಟ್ಟಿಯನ್ನು ಬಿಡುಗಡೆಗೊಳಿಸಿ ಇನ್ನೂ 9 ವಾರ್ಡ ಅಭ್ಯರ್ಥಿಗಳ  ಪಟ್ಟಿಯನ್ನು ಕಾಂಗ್ರೇಸ್ ಘೋಷಿಸಿರುವುದಿಲ್ಲಾ,  ಈ ಮಧ್ಯೆ ಬಿಜೆಪಿಯ   ಮುಖಂಡ ಮತ್ತು ಗದಗ ವಿಧಾನಸಭಾ ಪರಾಜಿತ ಅಭ್ಯರ್ಥಿ ಅನೀಲ ಮೇಣಸಿನಕಾಯಿ 35ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾದ ಉಷಾ ಮಹೇಶ ದಾಸರ  ಪರವಾಗಿ  ಮನೆ ಮನೆಗೆ  ತೆರಳಿ ಮತಭೀಕ್ಷೆ ಕೇಳುತ್ತಿರುವುದು ವಿಶೇಷವಾಗಿದೆ. ಜೋಳಿಗೆ ಹಿಡಿದುಕೊಂಡು  ದಯವಿಟ್ಟು ಈ ಭಾರಿ ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿ ಅದರೊಂದಿಗೆ ಅವರಿಗೆ ಧನಸಹಾಹ ಮಾಡಿ ಬಹುಮತದಿಂದ ಗೆಲ್ಲಿಸಲು  ಮನವಿ ಮಾಡಿದರು .ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ರಸ್ತೆ ಅಪಘಾತ ಮಗು ಸೆರಿ ಇಬ್ಬರ ದುರ್ಮರಣ

ಮುಂಡರಗಿ: ಮುಂಡರಗಿ ತಾಲೂಕಿನ ಡಂಬಳ ಮತ್ತು ಮೇವುಂಡಿ ಮಾರ್ಗ ಮಧ್ಯೆ ಮೆಕ್ಕೆ ಜೋಳ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರಗೆ ಹಿಂದಿನಿಂದ ಬಂದ ಕಾರು ಟ್ರಾಕ್ಟರಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮಗು ಸೆರಿ ಇಬ್ಬರ ಸಾವು, ಉಳಿದವರ ಪರಿಸ್ಥಿಥಿ ಗಂಭಿರ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.

ಕಾಲೇಜ್ ಟೀಚರ್ತಿಯ ಸೇವಾ ಕಾರ್ಯ

ಗದಗ: ಕೊರೊನಾದ ಈ ಸಂಕಷ್ಟದಲ್ಲಿ ಅದೆಷ್ಟೋ ಜನರು ಬಡ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಕೆಲವರು ಪ್ರಾಮಾಣಿಕ ಸಹಾಯ ಮಾಡಿದರೆ ಇನ್ನು ಕೆಲವರ ಸಹಾಯದ ಉದ್ದೇಶವೇ ಬೇರೆಯದ್ದಾಗಿರುತ್ತದೆ.

ಗದಗ ಜಿಲ್ಲೆಗೂ ಒಂದು ವಾರದ ಲಾಕ್ಡೌನ್?

ಸಿಎಂ ಯಡಿಯೂರಪ್ಪ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡೀಯೋ ಸಂವಾದ ನಡೆಸುತ್ತಿದ್ದಾರೆ. ಅಭಿಪ್ರಾಯ ಆಧರಿಸಿ ಲಾಕ್ ಡೌನ್ ಜಾರಿ ಮಾಡಬಹುದು ಎನ್ನಲಾಗಿದೆ.

ಗೂಗಲ್ ನಿಂದ ನೀವು ಹಣ ಸಂಪಾದನೆ ಮಾಡಬಹುದು

ಗೂಗಲ್​ ಕಂಪನಿ ಟಾಸ್ಕ್​ ಮೇಟ್​ ಎಂಬ ಅಪ್ಲಿಕೇಶನ್​ ಒಂದರ ಟೆಸ್ಟಿಂಗ್​ ನಡೆಸುತ್ತಿದೆ. ಇದರ ಸಹಾಯದಿಂದ ಬಳಕೆದಾರರು ಹಣ ಸಂಪಾದನೆ ಮಾಡಬಹುದಾಗಿದೆ.