ಸದ್ಯ ಸಿಎಂ ಯಡಿಯೂರಪ್ಪ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡೀಯೋ ಸಂವಾದ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಭಿಪ್ರಾಯ ಆಧರಿಸಿ ಬೆಂಗಳೂರಿನಂತೆ ಇನ್ನು ಕೆಲವು ಜಿಲ್ಲೆಗಳಲ್ಲಿ ವಾರದ ಮಟ್ಟಿಗಿನ ಲಾಕ್ ಡೌನ್ ಜಾರಿ ಮಾಡಬಹುದು ಎನ್ನಲಾಗಿದೆ.

ಗದಗ: ಮುಖ್ಯಮಂತ್ರಿ ಯಡಿಯೂರಪ್ಪ ಸೋಂಕು ತೀವ್ರವಾಗಿ ಏರಿಕೆ ಕಾಣುತ್ತಿರುವ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ  ಇಂದು 11 ಗಂಟೆಗೆ ವಿಡಿಯೋ ಸಂವಾದ ಆರಂಭಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,  ಕಲಬುರಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ರಾಯಚೂರು ಮತ್ತು ಗದಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಸಂವಾದದಲ್ಲಿ ಭಾಗಿಯಾಗಿದ್ದಾರೆ.

ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆದ ನಂತರ, ಆಯಾ ಜಿಲ್ಲೆಗಳಲ್ಲಿ 7 ದಿನದ ಲಾಕ್ ಡೌನ್ ಅಗತ್ಯವಿದೆಯೇ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.

ಕಳೆದ 10 ದಿನಗಳಿಂದ ಸೋಂಕು ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿರುವ ಗದಗ ಜಿಲ್ಲೆ ಈಗ ಸೋಂಕು ಏರುತ್ತಿರುವ 10 ಜಿಲ್ಲೆಗಳ ಪಟ್ಟಿಯಲ್ಲಿದೆ. ಬೆಂಗಳೂರಿನಂತೆ ಉಳಿದ 8 ಜಿಲ್ಲೆಗಳಲ್ಲೂ ಒಂದು ವಾರ ಕಾಲದ ಲಾಕ್ ಡೌನ್ ವಿಧಿಸುವ ಆಲೋಚನೆ ಸರ್ಕಾರಕ್ಕಿದೆ ಎನ್ನಲಾಗಿದೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಚಿವ ಅಶೋಕ್ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಗದಗ ಜಿಲ್ಲೆಯೂ 7 ದಿನಗಳ ಲಾಕ್ ಡೌನ್ ಗೆ ಒಳಪಡಲಿದೆಯೇ ಎಂಬುದು ಸಂಜೆ ಹೊತ್ತಿಗೆ ತಿಳಿಯಲಿದೆ.

Leave a Reply

Your email address will not be published. Required fields are marked *

You May Also Like

ಡ್ರೋನ್ ಪ್ರತಾಪ್: ಟಿವಿ ಸಂದರ್ಶನದಲ್ಲಿ ತೋರಿಸಿದ ಫೋಟೊದ ಅಸಲಿಯತ್ತು ಬಯಲು!

ಸ್ವಯಂಘೋಷಿತ 600 ಡ್ರೋನ್ ಸರದಾರ ಎನ್.ಎಂ.ಪ್ರತಾಪನ ಸುಳ್ಳುಗಳು ಒಂದೊಂದಾಗಿ ಹೊರಬರುತ್ತಿವೆ. ಬಿಟಿವಿಯಲ್ಲಿ ಸುದೀರ್ಘ ಸಂದರ್ಶನದಲ್ಲಿ ಈ ಹುಡುಗ ಮೊಬೈಲ್ ನಲ್ಲಿ ತೋರಿಸಿದ ಫೋಟೊಗಳ ಅಸಲಿಯತ್ತು ಬಯಲಾಗಿದೆ.

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ಲಾಡ್ಜ್‌, ಬಾರ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಗದಗ ಆಗಮಿಸಿದ ಸಿ ಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನುಹಮ್ಮಿಕೋಂಡಿದ್ದ ಸಿ ಎಂ ಬಸವರಾಜ ಬೊಮ್ಮಾಯಿಯವರು ಇಂದು ಗದಗ…