ನಗರಸಭೆ ಚುಣಾವಣೆ:35ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡ ಅನೀಲ ಮೇಣಸಿಕಾಯಿ ಮತಭೀಕ್ಷೆ

ಉತ್ತರಪ್ರಭ ಸುದ್ದಿ

ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು ದಿನಗಳ ಹಿಂದೆ ಪ್ರಕಟಿಸಿತ್ತು. ನಾಮ ಪತ್ರ ಸಲ್ಲಿಸಲು ದಿನಾಂಕ: 15.12.2021 ಕೊನೆಯ ದಿನ ವಾಗಿದ್ದು, ಈಗಾಗಲೇ ಕೆಲವು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ,ಇನ್ನೂ ಹಲವು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ ಕಾಂಗ್ರೇಸ್  35 ವಾರ್ಡಗಳ ಪೈಕಿ 26 ಅಭ್ಯರ್ಥಿಗಳ  ಪಟ್ಟಿಯನ್ನು ಬಿಡುಗಡೆಗೊಳಿಸಿ ಇನ್ನೂ 9 ವಾರ್ಡ ಅಭ್ಯರ್ಥಿಗಳ  ಪಟ್ಟಿಯನ್ನು ಕಾಂಗ್ರೇಸ್ ಘೋಷಿಸಿರುವುದಿಲ್ಲಾ,  ಈ ಮಧ್ಯೆ ಬಿಜೆಪಿಯ   ಮುಖಂಡ ಮತ್ತು ಗದಗ ವಿಧಾನಸಭಾ ಪರಾಜಿತ ಅಭ್ಯರ್ಥಿ ಅನೀಲ ಮೇಣಸಿನಕಾಯಿ 35ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾದ ಉಷಾ ಮಹೇಶ ದಾಸರ  ಪರವಾಗಿ  ಮನೆ ಮನೆಗೆ  ತೆರಳಿ ಮತಭೀಕ್ಷೆ ಕೇಳುತ್ತಿರುವುದು ವಿಶೇಷವಾಗಿದೆ. ಜೋಳಿಗೆ ಹಿಡಿದುಕೊಂಡು  ದಯವಿಟ್ಟು ಈ ಭಾರಿ ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿ ಅದರೊಂದಿಗೆ ಅವರಿಗೆ ಧನಸಹಾಹ ಮಾಡಿ ಬಹುಮತದಿಂದ ಗೆಲ್ಲಿಸಲು  ಮನವಿ ಮಾಡಿದರು .ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಹಾಜರಿದ್ದರು.

Exit mobile version