ಉತ್ತರಪ್ರಭ ಸುದ್ದಿ
ರೋಣ: ಪಟ್ಟಣದಲ್ಲಿ ಬಿಸಿ ರಕ್ತದ ಯುವಕರ ಗುಂಪುಗಳ ಗಲಾಟೆ ಮಾಡಿಕೊಂಡು, ರೋಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ಒಬ್ಬ ಯುವಕನಿಗೆ ಗಂಭೀರ ಗಾಯ ವಾಗಿದ್ದು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ರೋಣ ಪಟ್ಟಣದ ಶಿವಾನಂದ ಮಠದ ಹತ್ತಿರ ಬುಧವಾರ ಮದ್ಯಾಹ್ನ ಎರಡು ಯುವಕರ ಗುಂಪುಗಳ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಪಟ್ಟಣದ ಸಂಜು ಎಂಬ ಯುವಕನಿಗೆ ಪಟ್ಟಣದ ಬಸವರಾಜ, ನಾಗರಾಜ, ರವಿ, ಅನೀಲ, ಸಂತೋಷ ಎಂಬ ಯುವಕರು ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಯುವಕ ರೋಣ ಪೊಲೀಸ್ ಠಾಣೆಯಲ್ಲಿ ದೂರು ನಿಡಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.