ಮುಳಗುಂದ: ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದ ದಿವ್ಯ ಚೇತನ ಶಾಲಾ ಆವರಣದಲ್ಲಿ ಡಿ.5 ಶನಿವಾರ ಸಂಜೆ 2 ನೇ ವರ್ಷದ ದಿವ್ಯ ದೀಪೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.
ಶುದ್ದ ಕಾರ್ತಿಕ ಮಾಸದಲ್ಲಿ ದೇಗುಲ, ಮಂದಿರದಲ್ಲಿ ದೀಪೋತ್ಸವ ನಡೆಯುವದು ಸಂಪ್ರದಾಯ ಆದರೆ ಶಾಲೆ ಎಂಬ ದೇಗುಲಕ್ಕೆ ದೀಪ ಬೆಳಗಿಸಿ ಜ್ಞಾನದ ಬೆಳಕು ಬೆಳಗಿಸುವ ಕಾರ್ಯವನ್ನ ಶ್ರೀಮಠದ ಪ್ರಭುಲಿಂಗ ದೇವರು 2 ನೇ ವರ್ಷದಲ್ಲಿ ಆಯೋಜಿಸಿದ್ದಾರೆ. ಅಂದು ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮ 7.40ಕ್ಕೆ ಏಕಕಾಲಕ್ಕೆ ದೀಪಗಳ ಬೆಳಗಿಸುವದು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹತ್ತಿಕಾಳನ್ನು ಎಣ್ಣೆಯಲ್ಲಿ ನೆನೆಸಿ ಪಣತೆಯೊಂದಿಗೆ ಆಗಮಿಸಬೇಕು. ಎಂದು ಸಂಘಟಿಕರು ತಿಳಿಸಿದ್ದಾರೆ.