ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಟಾಸ್ಕ್ ಒಂದರಲ್ಲಿ ಗ್ಲಾಸ್ ಗೆ ಕೈ ತಗುಲಿದ ಪರಿಣಾ‌ಮ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಬಿಗ್ ಬಾಸ್ ಮನೆಯಲ್ಲೀಗ 10 ಜನರಿದ್ದು, ಈ ಸ್ಪರ್ಧಿಗಳ ನಡುವೆಯೇ ಭಾರೀ ಪೈಪೋಟಿ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.


ಬಿಗ್ ಬಾಸ್ ಮನೆಯಲ್ಲೀಗ ಸದ್ಯ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಈಗಾಗಲೇ ಇನ್ನಿಂಗ್ಸ್ 19ನೇ ದಿನ ಕೂಡ ಪೂರ್ಣಗೊಂಡಿದ್ದು, ಪ್ರತಿ ಸೋಮವಾರ ಎಲಿಮಿನೇಷನ್ ಗೆ ನಾಮಿನೇಷನ್ ಕಾರ್ಯ ನಡೆಯುತ್ತದೆ. ಈ ಬಾರಿ ಬಿಗ್ ಬಾಸ್ 8 ಸದಸ್ಯರು ನಾಮಿನೇಟ್ ಆಗಿದ್ದಾರೆ.


ಈ ನಾಮಿನೇಟ್ ನಿಂದ ತಪ್ಪಿಸಿಕೊಳ್ಳಲು ಬಿಗ್ ಬಾಸ್ ಎರಡು ತಂಡಗಳನ್ನು ಮಾಡಿ ನಕ್ಷತ್ರ ಅಂಟಿಸುವ ಕುರಿತು ಟಾಸ್ಕ್ ನೀಡಿದ್ದರು. ಈ ಸಂದರ್ಭದಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಿದ್ದರು. ಈ ವೇಳೆ ಈ ಟಾಸ್ಕ್ ನ ಪ್ರಕಾರ ತಂಡದ ತಲಾ ಓರ್ವ ಸದಸ್ಯ ಜಾಕೆಟ್ ಹಾಕಬೇಕು ಎಂದು ಹೇಳಲಾಗಿತ್ತು. ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಬೇಕಿತ್ತು. ಈ ಸಂದರ್ಭದಲ್ಲಿ ನಿಂಗ್ ಐತೇ ತಂಡದದಿಂದ ದಿವ್ಯಾ ಜಾಕೇಟ್ ಧರಿಸಿದ್ದರು. ಆಗ ಎದುರಾಳಿ ತಂಡದವರು ದಿವ್ಯಾ ಮೇಲೆ ನಕ್ಷತ್ರ ಅಂಟಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಕೈ ಗ್ಲಾಸ್ ಗೆ ತಗುಲಿದ ಪರಿಣಾಮ ದಿವ್ಯಾ ಕೈಗೆ ಗಾಯವಾಗಿದೆ. ಇದರಿಂದ ದಿವ್ಯಾ, ಬಿಕ್ಕಿ ಬಿಕ್ಕಿ ಅತ್ತರು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು.
ವಿಜಯಪಥ ಹಾಗೂ ನಿಂಗ್ ಐತೆ ಎಂಬ ಎರಡು ತಂಡಗಳನ್ನು ಈ ಸ್ಪರ್ಧೆ ಮಾಡಿದ್ದರು. ವಿಜಯ ಪಥ ತಂಡಕ್ಕೆ ಅರವಿಂದ್ ನಾಯಕರಾಗಿದ್ದರೆ, ನಿಂಗ್ ಐತೆ ತಂಡಕ್ಕೆ ಮಂಜು ನಾಯಕರಾಗಿದ್ದರು.
ವಿಜಯ ಪಥ ತಂಡದಲ್ಲಿ ಶುಭಾ, ವೈಷ್ಣವಿ, ಪ್ರಶಾಂತ್, ಪ್ರಿಯಾಂಕಾ ಇದ್ದರು. ನಿಂಗ್ ಐತೆ ತಂಡದಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಇದ್ದರು.

Leave a Reply

Your email address will not be published. Required fields are marked *

You May Also Like

ಕಣ್ಣಿನ ಸಮಸ್ಯೆ ಮುಕ್ತಿಗೊಂದು ಮನೆ ಮದ್ದು

ಆಧುನಿಕ ಜಗತ್ತಿಗೆ ಒಡ್ಡಿಕೊಂಡಿರುವ ಬಹುತೇಕರು ಸದ್ಯ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕಂಪ್ಯೂಟರ್, ಮೊಬೈಲ್ ನಂತಹ…

ದೊರೆಸ್ವಾಮಿ ನಿಧನದಿಂದ ಪ್ರಜಾಪ್ರಭುತ್ವ ಬಡವಾಗಿದೆ: ಎಂ.ಎಸ್.ಹಡಪದ

ಗಜೇಂದ್ರಗಡ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿಯವರನ್ನು ಕಳೆದುಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ಇಂದು ಬಡವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಹೇಳಿದರು.

ಗೋಗೇರಿಯಲ್ಲಿ ಕರವೇ ಯುವಸೈನ್ಯ ದಿಂದ ಆಹಾರದ ಕಿಟ್ ವಿತರಣೆ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು. ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ.

ಕೋರೊನಾ ಸೋಂಕು ನಿಯಂತ್ರಣ, ಚಿಕಿತ್ಸೆ, ಲಸಿಕಾಕರಣ ಸಭೆಯಲ್ಲಿ ಹೆಳಿದ್ದೆನು?

ಗದಗ: ಸರ್ಕಾರ ತಿಳಿಸಿದ ಆಧ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ ಆದ್ಯತೆಯನುಸಾರ ಮೊದಲು ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು. ಅವರು ಜಿಲ್ಲಾಡಳಿತ ಭವನದ ಜಿ.ಪಂ ವಿಡಿಯೋ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಳೊಂದಿಗೆ ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.