ಆಧುನಿಕ ಜಗತ್ತಿಗೆ ಒಡ್ಡಿಕೊಂಡಿರುವ ಬಹುತೇಕರು ಸದ್ಯ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕಂಪ್ಯೂಟರ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತುಗಳೇ ಸದ್ಯ ಬಹುತೇಕರ ಸಂಗಾತಿಗಳಂತಾಗಿವೆ. ಹೀಗಾಗಿ ಕಣ್ಣಿನ ಸಮಸ್ಯೆ ಪ್ರತಿಯೊಬ್ಬರ ಕಾಮನ್ ಸಮಸ್ಯೆಯಾಗಿ ಬಿಟ್ಟಿದೆ. ಸದ್ಯ ಇದರಿಂದ ಮುಕ್ತಿ ಪಡೆಯುವ ಸಂಗತಿಯೊಂದು ಸಂಶೋಧನೆಯಿಂದ ಹೊರ ಬಂದಿದೆ.

ಪ್ರತಿ ದಿನ ಮೂರು ನಿಮಿಷಗಳ ಕಾಲ ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡುವುದರಿಂದ ದೃಷ್ಟಿ ಸಮಸ್ಯೆ ಸುಧಾರಣೆಯಾಗಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ವರದಿಯಂತೆ ದೃಷ್ಟಿ ಸಾಮರ್ಥ್ಯವನ್ನು ಸುಧಾರಣೆ ಮಾಡುವುದಕ್ಕಾಗಿ ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡಬೇಕು. ಇದು ಮನೆಯ ಮಟ್ಟಿಗೆ ಮಾಡಿಕೊಳ್ಳಬಹುದಾದ ಪ್ರಾಥಮಿಕ ಕಣ್ಣಿನ ಥೆರೆಪಿಯಾಗಲಿದ್ದು, ಸ್ವಭಾವಿಕವಾಗಿ ಕುಸಿಯುವ ದೃಷ್ಟಿ ಸಾಮರ್ಥ್ಯವನ್ನು ಚಿಗುರಿಸುತ್ತದೆ ಎಂದು ತಿಳಿದು ಬಂದಿದೆ.

ಹಲವರಲ್ಲಿ ರೆಟಿನಾ ಜೀವಕೋಶಗಳ ಶಕ್ತಿ ಕುಂದುತ್ತದೆ. ಈ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ತರಂಗಾಂತರದ ಗಾಢ ಕೆಂಪು ಬಣ್ಣದ ಬೆಳಕನ್ನು ದಿನವೊಂದಕ್ಕೆ 3 ನಿಮಿಷಗಳು ದಿಟ್ಟಿಸಿ ನೋಡಬಹುದು ಎಂಬುದು ನಮ್ಮ ಅಧ್ಯಯನ ವರದಿಯ ಮೂಲಕ ದೃಢಪಟ್ಟಿದೆ ಎಂದು ಬ್ರಿಟನ್ ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಮುಖ್ಯ ಲೇಖಕಿ ಗ್ಲೆನ್ ಜೆಫರಿ ಹೇಳಿದ್ದಾರೆ.

ಮನುಷ್ಯರಲ್ಲಿ 40 ವಯಸ್ಸಿನ ಬಳಿಕ ರೆಟೀನಾದ ಜೀವಕೋಶಗಳ ಶಕ್ತಿ ಸಹ ಕುಂದುತ್ತದೆ. ಇಲಿ ಸೇರಿದಂತೆ ಹಲವು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. 670 ನ್ಯಾನೋಮೀಟರ್ ನಷ್ಟು ಗಾಢ ಕೆಂಪು ಬಣ್ಣದ ಬೆಳಕನ್ನು ಚೆಲ್ಲಿದಾಗ ಅವುಗಳ ರೆಟೀನಾದ ಫೋಟೊರಿಸೆಪ್ಟರ್ ಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಇದೇ ಮಾದರಿಯ ಪ್ರಯೋಗವನ್ನು ಮನುಷ್ಯರ ಮೇಲೆಯೂ ನಡೆಸಲಾಗಿದ್ದು, 28-72 ವರ್ಷಗಳ ನಡುವಿನ 24 (12 ಪುರುಷರ, 12 ಮಹಿಳೆಯರು) ಸಂಶೋಧನೆಗೆ ಒಳಪಡಿಸಲಾಗಿದ್ದು, ಎಲ್ ಇಡಿ ಟಾರ್ಚ್ ನ್ನು ನೀಡಲಾಗಿತ್ತು. ಅದರಲ್ಲಿನ 670 ಎನ್ಎಂ ಬೆಳಕಿನ ಕಿರಣಗಳನ್ನು ದಿನವೊಂದಕ್ಕೆ 3 ನಿಮಿಷಗಳ ಕಾಲ ದಿಟ್ಟಿಸುವಂತೆ ಸೂಚಿಸಲಾಗಿತ್ತು, 40 ವಯಸ್ಸಿನವರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿರುವುದನ್ನು ಸಂಶೋಧಕರು ಕಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಂಬಾಭವಾನಿ ಜಾತ್ರಾ ಉತ್ಸವ ಸಡಗರ ಸಂಭ್ರಮ ಕೃಷ್ಣೆ ತಟದಲ್ಲಿ ಕುಂಭ ಮೆರವಣಿಗೆ ಕಲರವ

ಚಿತ್ರ ವರದಿ : ಗುಲಾಬಚಂದ ಆರ್.ಜಾಧವಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ…

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!! ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ…

ಡಾ.ಆನಂದ್ ಪಾಟೀಲ್ ಸಂದರ್ಶನ : ಮಧು ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳೇನು?

ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳು ಹಾಗೂ ಕ್ವಾರಂಟೈನ್ ಅವಧಿ ಮುಗಿದ ಮೇಲಿನ ನಮ್ಮ ಜೀವನ ಶೈಲಿ ಹೇಗಿರಬೇಕು. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ತಜ್ಞ ವೈದ್ಯ ಡಾ.ಆನಂದ್ ಪಾಟೀಲ್(ಮೊ.8073475549) ಇವರೊಂದಿಗೆ ಡಾ. ಬಸವರಾಜ್ ಡಿ ತಳವಾರ (ಮೊ.9148874739) ಅವರು ನಡೆಸಿದ ಸಂದರ್ಶನ ಇಲ್ಲಿದೆ…

ಪಟಾಕಿ ನಿಷೇಧ ಆದೇಶ ಹಿಂಪಡೆದ ಸಿಎಂ: ಹಸಿರು ಪಟಾಕಿಗೆ ಅನುಮತಿ ನೀಡಿದ ಬಿಎಸ್ವೈ

ದೀಪಾವಳಿ ಹಿನ್ನೆಲೆ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಯಡಿಯೂರಪ್ಪ “ಹಸಿರು ಪಟಾಕಿ ”ಮಾರಾಟ ಮತ್ತು ಸಿಡಿಸಲು ಅವಕಾಶ ನೀಡಿದ್ದಾರೆ.