ರೋಣ: ನಗರದ ಬಸ್ ನಿಲ್ದಾಣದ ಹತ್ತಿರ ಬೀಡು ಬಿಟ್ಟಿರುವ ಕೋತಿಗಳಿಗೆ ಬಾಳೆ ಹಣ್ಣು ನೀಡುವ ಮೂಲಕ ಎಎಸ್ಐ ಒಬ್ಬರೂ ಮಾನವೀಯತೆ ಮೆರೆದ ಘಟನೆ ರೋಣದಲ್ಲಿ ನಡೆದಿದೆ.
ಲಾಕ್ ಡೌನ್ ನಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಯಿದ್ದವರೇ ಸಂಕಷ್ಟದಲ್ಲಿರುವಾಗ ಇನ್ನು ಮೂಕ ಪ್ರಾಣಿಗಳ ವೇದನೆ ಹೇಳತೀರದು. ರೋಣ ಪಟ್ಟಣದ ಬಸ್ ನಿಲ್ದಾಣದ ಬಳಿ ನೀರು ಆಹಾರವಿಲ್ಲದೇ ನಿತ್ರಾಣವಾಗಿರುವ ಕೋತಿಗಳಿಗೆ ಆಹಾರ ನೀಡುವ ಮೂಲಕ ಇಲ್ಲಿನ ಎಎಸ್ಐ ಸರ್ವಿ ಕೋತಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.
ರೋಣ ಠಾಣೆಯ ಎಎಸ್ಐ ಸರ್ವಿ ಕೋತಿಗಳಿಗೆ ಬಾಳೆ ಹಣ್ಣು, ಬಿಸ್ಕೀಟ್, ನೀರಿನ ಬಾಟಲಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕರೊನಾ ಸಂಕಷ್ಟದ ಕಾಲದಲ್ಲಿಯೂ ಒತ್ತಡದ ಕೆಲಸದ ಮಧ್ಯದಲ್ಲಿಯೂ ಇಂತಹ ಜನಪರ, ಜೀವಪರ ಕಾರ್ಯಗಳಿಗೆ ಮೀಡಿಯುತ್ತಿರುವ ಈ ಪೊಲೀಸಪ್ಪನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಅನೇಕ ಸಂಘ ಸಂಸ್ಥೆಯವರು ಅದೆಷ್ಡೋ ಕಡೆಗಳಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿ ಪ್ರಾಣಿಗಳ ಮೇಲೆ ದಯೇ ತೋರಿಸುವ ಮೂಲಕ ಎ.ಎಸ್.ಐ ಸರ್ವಿ ಅವರು ಕಾಳಜಿ ತೋರಿದ್ದು ವಿಶೇಷವಾಗಿದೆ.