ಗದಗ: ಈಗಾಗಲೇ ಜೂನ್ 1 ರವರೆಗೆ ಗದಗ ಜಿಲ್ಲೆಯನ್ನು ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ ಎಸ್ಪಿ ಯತೀಶ್ ಎನ್ ಬೆಳ್ಳಂಬೆಳಿಗ್ಗೆ ಫಿಲ್ಡಿಗಿಳಿದು ಅನವಶ್ಯಕ ಓಡಾಡುವವರಿಗೆ ಖಡಕ್ ವಾರ್ನಿಂಗ್ ಮಾಡಿದರು. ಗದಗ- ಬೆಟಗೇರಿ ಅವಳಿ ನಗರವನ್ನು ರೌಂಡ್ ಹಾಕಿದರು. ಹಳೇ ಡಿಸಿ ಆಫೀಸ್ ಸರ್ಕಲ್ ನಲ್ಲಿ ಸ್ವತ: ಅವರೇ ವಾಹನ ಪರಿಶೀಲನೆ ನಡೆಸಿದರು. ವಿನಾಕಾರಣ ರಸ್ತೆಗೆ ಇಳಿದ ವಾಹನ ಸೀಜ್ ಮಾಡಲು ಸೂಚಿಸಿದರು. ಈ ಮೂಲಕ ಅನವಶ್ಯಕ ಓಡಾಡುವವರ ವಾಹನ ಸೀಜ್ ಮಾಡುವ ಮೂಲಕ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು. ಈಗಾಗಲೇ ಮೇ.27 ರಿಂದ ಜೂನ್ 1 ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದಾಗಲೂ ಜನ್ರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಹೀಗಾಗಿ ಅವಂತರ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು. ಏನೇ ಆಗಲಿ ಸರ್ಕಾರ ಅಥವಾ ಅಧಿಕಾರಿಗಳ ಪ್ರಯತ್ನಿದಿಂದ ಮಾತ್ರ ಕೊರೊನಾ ನಿಯಂತ್ರಣ ಅಸಾಧ್ಯ. ನಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲಿ ಕಾಳಜಿ ಮೂಡಬೇಕಿದೆ. ಹೀಗಾಗಿ ಜನರ ಸಹಕಾರ ಅತ್ಯಂತ ಅವಶ್ಯಕ ಎನ್ನುವುದು ಪೊಲೀಸ್ ಇಲಾಖೆ ಮನವಿ.

Leave a Reply

Your email address will not be published. Required fields are marked *

You May Also Like

ಜಿಲ್ಲೆಯಲ್ಲಿ ಶೇ.99.80 ರಷ್ಟು ಮತದಾನ

ಧಾರವಾಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆ ಶಾಂತಿಯುತ : ಜಿಲ್ಲೆಯಲ್ಲಿ ಶೇ.99.80 ರಷ್ಟು ಮತದಾನ ಉತ್ತರಪ್ರಭ…

ಸಂದಿಗವಾಡ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಉತ್ತರಪ್ರಭ ಸುದ್ದಿ ರೋಣ: ತಾಲೂಕಿನ ಸಂದಿಗವಾಡ ಬಳಿ ಬಸ್ ಹರಿದು ಬೈಕ್ ಸವಾರನ ಸಾವು. ನವಲಗುಂದದ…

ರಾಜ್ಯದಲ್ಲಿ ಮತ್ತೊಮ್ಮೆ ರೈತರಿಂದ ಬಂದ್ ಕರೆ

ಬೆಂಗಳೂರು: ಡಿ.5 ರಂದಷ್ಟೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆ ನೀಡಿದ ಬಂದ್ ಕರೆ ಬೆನ್ನಲ್ಲೆ, ಡಿ.8 ಕ್ಕೆ ರೈತಪರ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿವೆ. ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.

ಅಸುಂಡಿ ಬಾಲಕಿ ಕೊಲೆ ಪ್ರಕರಣ:24 ಗಂಟೆಯಾದರು ಇನ್ನೂ ಪತ್ತೆಯಾಗದ ಹಂತಕರು

ಗದಗ: ತಾಲೂಕಿನ ಅಸುಂಡಿ ಗ್ರಾಮದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ಶವ ಬುಧವಾರ ಸಂಜೆ ಕೊಳೆತ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಗದಗ ಗ್ರಾಮೀಣ ಪೊಲೀಸರು ಬೇಟಿ ನೀಡಿ ಶವವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ 24 ಗಂಟೆ ಕಳೆದರು ಇನ್ನೂ ಅರೋಪಿಗಳ ಪತ್ತೆಯಾಗಿಲ್ಲ.