ಗದಗ: ಈಗಾಗಲೇ ಜೂನ್ 1 ರವರೆಗೆ ಗದಗ ಜಿಲ್ಲೆಯನ್ನು ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ ಎಸ್ಪಿ ಯತೀಶ್ ಎನ್ ಬೆಳ್ಳಂಬೆಳಿಗ್ಗೆ ಫಿಲ್ಡಿಗಿಳಿದು ಅನವಶ್ಯಕ ಓಡಾಡುವವರಿಗೆ ಖಡಕ್ ವಾರ್ನಿಂಗ್ ಮಾಡಿದರು. ಗದಗ- ಬೆಟಗೇರಿ ಅವಳಿ ನಗರವನ್ನು ರೌಂಡ್ ಹಾಕಿದರು. ಹಳೇ ಡಿಸಿ ಆಫೀಸ್ ಸರ್ಕಲ್ ನಲ್ಲಿ ಸ್ವತ: ಅವರೇ ವಾಹನ ಪರಿಶೀಲನೆ ನಡೆಸಿದರು. ವಿನಾಕಾರಣ ರಸ್ತೆಗೆ ಇಳಿದ ವಾಹನ ಸೀಜ್ ಮಾಡಲು ಸೂಚಿಸಿದರು. ಈ ಮೂಲಕ ಅನವಶ್ಯಕ ಓಡಾಡುವವರ ವಾಹನ ಸೀಜ್ ಮಾಡುವ ಮೂಲಕ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು. ಈಗಾಗಲೇ ಮೇ.27 ರಿಂದ ಜೂನ್ 1 ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದಾಗಲೂ ಜನ್ರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಹೀಗಾಗಿ ಅವಂತರ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು. ಏನೇ ಆಗಲಿ ಸರ್ಕಾರ ಅಥವಾ ಅಧಿಕಾರಿಗಳ ಪ್ರಯತ್ನಿದಿಂದ ಮಾತ್ರ ಕೊರೊನಾ ನಿಯಂತ್ರಣ ಅಸಾಧ್ಯ. ನಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲಿ ಕಾಳಜಿ ಮೂಡಬೇಕಿದೆ. ಹೀಗಾಗಿ ಜನರ ಸಹಕಾರ ಅತ್ಯಂತ ಅವಶ್ಯಕ ಎನ್ನುವುದು ಪೊಲೀಸ್ ಇಲಾಖೆ ಮನವಿ.
You May Also Like
ಆನ್ಲೈನ್ ಮೂಲಕ ಐ.ಟಿ.ಐ ಕೋರ್ಸಗಳಿಗೆ ಪ್ರವೇಶಾತಿ
ರಾಜ್ಯದ 270 ಸರಕಾರಿ ಹಾಗೂ 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2020 ನೇ ಸಾಲಿಗೆ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್ಲೈನ್ ಮುಖಾಂತರ ಮಾಡಲಾಗುತ್ತಿದೆ.
- ಉತ್ತರಪ್ರಭ
- August 18, 2020
ಗದಗ ಜಿಲ್ಲೆಯಲ್ಲಿ ಕೊರೊನಾ ಸುಪರ್-ಸ್ಪ್ರೆಡರ್ ಯಾರು? : ಸುಪರ್-ಸ್ಪ್ರೇಡರ್ ಎಂದರೆ ಏನು?
ಗದಗ: ದಕ್ಷಿಣ ಕೋರಿಯಾದಲ್ಲಿ ಒಂದು ಹಂತದಲ್ಲಿ ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಿ ದೇಶವೇ ಆತಂಕಕ್ಕೆ ಈಡಾಗಲು…
- ಉತ್ತರಪ್ರಭ
- July 10, 2020
ಮಾನಸಿಕ ಒತ್ತಡದ ನಿವಾರಣೆಗೆ ದೈಹಿಕ ಚಟುವಟಿಕೆ ಅಗತ್ಯ
ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಆರೋಗ್ಯವೇ ಭಾಗ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಥಿತಿಯಲ್ಲಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಬಿ. ಸಂಕನೂರ ತಿಳಿಸಿದರು.
- ಉತ್ತರಪ್ರಭ
- February 7, 2021
ನರೇಗಲ್ಲ: ವಿದ್ಯುತ್ ನಿಲುಗಡೆ
110/11ಕೆವ್ಹಿ ನರೇಗಲ್ಲ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ನವೆಂಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
- ಉತ್ತರಪ್ರಭ
- November 7, 2020