ಲಕ್ಷ್ಮೇಶ್ವರ: ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಶನಿವಾರ, ಭಾನುವಾರ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

ಇನ್ನು ಬಹುತೇಕರು ಇದಕ್ಕೆ ಸಹಕಾರ ನೀಡಿದ್ದು ಕೂಡ ವಿಶೇಷವಾಗಿತ್ತು. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಹಾಗು ಆರೋಗ್ಯ ಇಲಾಖೆ ಪುರಸಭೆಯವರು ಸಾಕಷ್ಟು ಜಾಗೃತಿಗೂ ಮುಂದಾಗಿದ್ದಾರೆ.

ಶನಿವಾರ ಹಾಗು ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದರೂ ಕೆಲವರು  ಓಡಾಡುತ್ತಿದ್ದರು. ಅಂಥವರಿಗೆ ಸಿ.ಪಿ.ಐ ವಿಕಾಸ ಲಮಾಣಿ ಹಾಗೂ ಪಿಎಸ್‌ಐ ಶಿವಯೋಗಿ ಲೋಹಾರ ಬಿಸಿಮುಟ್ಟಿಸಿದರು. ಬೇಕಾಬಿಟ್ಟಿ ಓಡಾಡುವ ಜನ ಹಾಗು ವಾಹನಗಳನ್ನು ವಶಕ್ಕೆ ಪಡೆದುಕೊಂಡರು. ಶುಕ್ರವಾರ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಲಾಗಿದ್ದು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಪಟ್ಟಣದ ಎಲ್ಲಾ ವ್ಯಾಪಾರ ಮುಗ್ಗಟ್ಟು ಬಂದವಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

                ಲಕ್ಷ್ಮೇಶ್ವರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗಿದ್ದು, ಮಾರುಕಟ್ಟೆ, ಶಿಗ್ಲಿ ಕ್ರಾಸ್, ಪಾದಕಟ್ಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಪೌರಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1 comment
  1. ನಮ್ಮ ಪೋಲಿಸ್ ಅಧಿಕಾರಿಗಳು ಜನರ ಹಿತ ರಕ್ಷಣೆ ಕಾಪಾಡಲು ಕೊರೊನ
    ತಡೆಗಟ್ಟಲು
    ಬಹಳ ಶ್ರಮ ಪಡುತ್ತಿದ್ದಾರೆ. ಅವರಿಗೆ ನಮ್ಮದೊಂದು ಹೃತ್ಪೂರ್ವಕ ವಂದನೆಗಳು

Leave a Reply

Your email address will not be published. Required fields are marked *

You May Also Like

ನಿಮ್ಮ ಜಿಲ್ಲೆ ಯಾವ ಝೋನ್ ನಲ್ಲಿದೆ ಅಂತ ತಿಳಿದುಕೊಳ್ಳಿ

ಮೇ.3ರ ನಂತರ ರಾಜ್ಯದ 6 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳನ್ನು ಗ್ರೀನ್ ಹಾಗೂ ಯಲ್ಲೋ ಝೋನ್ ಗಳಾಗಿ ವಿಂಗಡಿಸಲಾಗಿದೆ. ರೆಡ್ ಮತ್ತು ಯಲ್ಲೋ ಝೋನ್ ಗಳಲ್ಲಿ ಮೇ.3ರ ನಂತರ ಲಾಕ್ ಡೌನ್ ಸ್ವಲ್ಪ ಸಡಿಲಗೊಳ್ಳುವ ಸಾದ್ಯತೆ ಇದೆ. ಯಾವ ಜಿಲ್ಲೆ ಯಾವ ಝೋನ್ ನಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ..

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.

ನಿಧನ: ಗಿರಿಜಮ್ಮ ಬಸನಗೌಡ ಪಾಟೀಲ್

ಮಾಜಿ ಸಚಿವ ಎಸ್.ಎಸ್.ಪಾಟೀಲ್ ಇವರ ಅಣ್ಣಂದಿರಾದ ದಿ.ಮುದುಕನಗೌಡ ಭರಮನಗೌಡ ಪಾಟೀಲ್ ಇವರ ಹಿರಿಯ ಸುಪುತ್ರ ದಿ.ಬಸನಗೌಡ ಮುದುಕನಗೌಡ ಪಾಟೀಲ್ ಇವರ ಧರ್ಮಪತ್ನಿ ಗಿರಿಜಮ್ಮ ಬಸನಗೌಡ ಪಾಟೀಲ್(77) ಇವರು ಭಾನುವಾರ ನಿಧನ ಹೊಂದಿದರು.

ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ

ನಗರದ ಜನತಾ ಶಿಕ್ಷಣ ಸಮಿತಿಯ ಬನಶಂಕರಿ ಆರ್ಟ್ಸ್, ಕಾಮರ್ಸ್ ಮತ್ತು ಎಸ್.ಕೆ.ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ ಆಯೋಜಿಸಲಾಗಿದೆ.