ಗದಗ: ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.

ಸಭೆಯಲ್ಲಿ ಶಹರ ಪೊಲೀಸ್ ಠಾಣೆ ಸಿಪಿಐ ಸಾಲಿಮಠ ಮಾತನಾಡಿ, ಪೋಲಿಸ್ ಅಂದರೆ ಭಯ ಅಲ್ಲ, ಭರವಸೆ ಎಂದು ಹೇಳಿದರು ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ಪಿಎಸ್‌ಐ ಪ್ರಕಾಶ ಡಿ ಮಾತನಾಡಿ, ಶಿಕ್ಷಣದ ಅರಿವು ಮಕ್ಕಳಲ್ಲಿ ಮನೆ ಮಾಡಬೇಕು ಅದು ಅವರ ಪ್ರಗತಿಗೆ ಹಾಗೂ ಸಮಾಜಕ್ಕೆ ಹಿರಿಮೆ ತರುತ್ತದೆ ಎಂದು ಮಕ್ಕಳ ಮನವೊಲಿಸಿದರು.

ಓಣಿಯ ಹಿರಿಯರಾದ ಶಿಕ್ಷಕ ಪಿ.ಎಚ್.ತಳಗೇರಿ ಮಾತನಾಡಿ, ಯುವಕರು ಮಧ್ಯಪಾನ ದಾಸರಾಗಿದ್ದಾರೆ. ಅಂತಹ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

 ಬಾಮ್ಸೇಫ್ ಅಂಗ ಸಂಘಟನೆಯಾದ ಭಾರತೀಯ ಯುವ ಮೋರ್ಚಾ ಜಿಲ್ಲಾ ಸಂಯೋಜಕ ವಿಶಾಲ ಗೋಶಾಲ್ಯನ್ನವರ್ ಮಾತನಾಡಿ, ಪ್ರೆöÊವೆಟ್ ಡಿಫೆನ್ಸ ಆ್ಯಕ್ಟ್ ಹಾಗೂ ಅನುಚ್ಛೇದ 17 ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಿಕೊಂಡರು.

 ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ವೀಣಾ ಕಡಬಿನ, ಮಂಜುಳಾ ಅಗಸಿನಕೊಪ್ಪ, ಯಮನವ್ವ ಕಲ್ಮನಿ, ಪೋಲಿಸರೊಂದಿಗೆ ಎಸ್.ಸಿ./ಎಸ್.ಟಿ. ಜನರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದರು. ರಾಘವೇಂದ್ರ ನಾಗನಾಥನಹಳ್ಳಿಯವರು ದಲಿತ ಎಂಬ ಪದ ಬಳಸುವುದು ಸೂಕ್ತವಲ್ಲ ಇದು ಅಸಂವಿಧಾನಿಕ ಪದ ಎಂದು ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಟ್ಟರು.

 ಈ ಸಂದರ್ಭದಲ್ಲಿ ವಿಶಾಲ ಹಾದಿಮನಿ, ಸಂತೋಷ ಅಕ್ಕಿ, ರಾಘು ದೊಡ್ಡಮನಿ, ಶಿವಾನಂದ ಸಕ್ರಿ, ಬಸವರಾಜ ಕಟ್ಟಿಮನಿ, ವಿನಾಯಕ ಕಟ್ಟಿಮನಿ, ವಿನಾಯಕ ಕಲ್ಮನಿ, ವಿನಾಯಕ ಸಂಗಾಪೂರ, ಸಂಜಯ ಪರಾಪೂರ, ಅಭಿಷೇಕ ಸಂಗಾಪೂರ, ಗಣೇಶ ಅಕ್ಕಿ, ಸುರೇಶ ಸಂಗಾಪೂರ, ಪ್ರಮೋದ ಸಕ್ರಿ, ಮೋಹನ ಅಗಸಿನಕೊಪ್ಪ, ರಾಹುಲ ಜಂಬಲದಿನ್ನಿ, ಮಂಜುನಾಥ ಕಲ್ಲೂರ, ಸಾಗರ ಕಟ್ಟಿಮನಿ, ಅಭಿ ಬಳ್ಳಾರಿ, ಶ್ರೀಶೈಲ ಪರಾಪೂರ, ಯಮನೇಶ ಬೇವಿನಕಟ್ಟಿ, ಹಾಗೂ ಭಾರತೀಯ ಯುವ ಮೋರ್ಚಾ ಕಾರ್ಯಕರ್ತರು, ತಳಗೇರಿ ಓಣಿಯ ಹಿರಿಯರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ನಮ್ಮ ಕರವೇ ಗ್ರಾಮ ಘಟಕ ಉದ್ಘಾಟನೆ

ತಾಲೂಕಿನ ಉಪ್ಪಾರ ಬುದ್ದಿನಿ ಗ್ರಾಮದಲ್ಲಿ ನಮ್ಮ‌ ಕರವೇ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ತಾಲೂಕ ಘಟಕ ನಮ್ಮ ಕರವೇ ಅಧ್ಯಕ್ಷ ಬಸವರಾಜ ಉದ್ಬಾಳ ಅವರು ಮಾತನಾಡಿ, ನಾಡು ನುಡಿ, ಜಲ, ಭಾಷೆ ರಕ್ಷಣೆಗೆ ನಮ್ಮ ಕರವೇ ಕಾರ್ಯಕರ್ತರು ಬದ್ದರಾಗಿರಬೇಕೆಂದು ಹೇಳಿದರು.

ಪ್ರತ್ಯೇಕ ಕೇಂದ್ರ ಸ್ಥಾನಕ್ಕೆ ಒತ್ತಾಯಿಸಿ ಜಿಗಳೂರು ಗ್ರಾಮಸ್ಥರ ಪ್ರತಿಭಟನೆ

ರೋಣ: ಜಿಗಳೂರ ಗ್ರಾಮಕ್ಕೆ ಪ್ರತ್ಯೇಕ ಕೇಂದ್ರ ಸ್ಥಾನ ನೀಡಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.…

ಡಿಎಪಿ ರಸಗೊಬ್ಬರ ದರ ಇಳಿಕೆ

ಧಾರವಾಡ: ಡಿಎಪಿ ರಸಗೊಬ್ಬರ ದರ ಇಳಿಕೆ ಮಾಡಿ ಸರ್ಕಾರ ಆದೇಶಿಸಿದೆ. ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಜೆ 1200 ರೂ. ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆಎಸ್ಸಿಎಮ್ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು.