ರೋಣ: ಜಿಗಳೂರ ಗ್ರಾಮಕ್ಕೆ ಪ್ರತ್ಯೇಕ ಕೇಂದ್ರ ಸ್ಥಾನ ನೀಡಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ತಾಲೂಕು ಕಚೇರಿ ಎದುರು ಅನಿರ್ಧಷ್ಟವಧಿ ಸತ್ಯಾಗ್ರಹ ನಡೆಸಿದರು.
ಜಿಗಳೂರ ಗ್ರಾಮದಿಂದ ರೋಣ ತಾಲೂಕ ಕಚೇರಿಯವರೆಗೂ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೂಡಿ ಕ್ರಾಸ್ ಹಾಗೂ ಮುಲ್ಲನಬಾವಿ ಕ್ರಾಸ್ ಮುಖಾಂತರ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆಯಲ್ಲಿ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು. ನಂತರ ತಹಶೀಲ್ದಾರರಿಗೆ ಜಿಗಳೂರು ಗ್ರಾಮವನ್ನು ಪ್ರತ್ಯೇಕ ಕೇಂದ್ರ ಸ್ಥಳವನ್ನಾಗಿ ಘೋಷಿಸಲು ಒತ್ತಾಯಿಸಿ ಮನವಿ ನೀಡಿದರು.
ಈ ವೇಳೆ ರಾಮನಗೌಡ ಪಾಟೀಲ, ಎಸ್.ಐ. ಪಾಟೀಲ, ಎಸ್.ಎಸ್. ಧಾರಣೆಪ್ಪಗೌಡ. ಕುಮಾರ ದಾನಪ್ಪಗೌಡ, ತಿಪ್ಪಣ್ಣ, ಸುರೇಶ ಹ್ಯಾಗಾರ, ಶರಣಪ್ಪ ಹತ್ತಿಕಟಗಿ. ಯಲ್ಲಪ್ಪ ಮಡಿವಾಳರ, ಮಹಾಂತೇಶ್ ಚಿಕ್ಕನಗೌಡರ, ವಿಜಯ ನರೇಗಲ್ ಮುಂತಾದವರು ಪಾಲ್ಗೊಂಡಿದ್ದರು.