ಗದಗ: ಲಿಂಗಾಯತ ಪ್ರಗತಿಶೀಲ ಸಂಘ, ಆಶ್ರಯದಲ್ಲಿಂದು ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗುವ ಶಿವಾನುಭವದಲ್ಲಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆಮಹಾದೇವಿ ಅವರು 2ನೇ ಸ್ಮರಣೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಮಾತೆ ಮಹಾದೇವಿ ಅವರ ಕುರಿತು ರೇಲ್ವೆ ಇಲಾಖೆ ಹಿರಿಯ ಅಭಿಯಂತರ ಶ್ರೀಸಚ್ಚಿದಾನಂದ ಚಟನಳ್ಳಿ ಮಾತನಾಡುವರು.

ಶಿವಣ್ಣ ಶರಣರು, ಗುಡಗುಂಟಿ ಇವರು ಸಂಪಾದಿಸಿರುವ ಶರಣ ಧರ್ಮ ಪ್ರವಚನ ರೂಪು-ರೇಷೆ ಗ್ರಂಥವನ್ನು ಪೂಜ್ಯರು ಲೋಕಾರ್ಪಣೆಗೊಳಿಸುವರು.

ಧರ್ಮಗ್ರಂಥ ಪಠಣವನ್ನು ಮಂಗಳಾ ಬಿ. ಕಾಮಣ್ಣವರ, ವಚನ ಚಿಂತನವನ್ನು ಚನ್ನಬಸವಣ್ಣ ಕಾಮಣ್ಣವರ ನೆರವೇರಿಸುವರು. ಸಂಗೀತ ಕಾರ್ಯಕ್ರಮವನ್ನು ಕೊಳಲು ವಾದಕ ಪಿ. ಕಾರ್ತಿಕ ಭಟ್ ಹಾಗೂ ತಬಲಾ ವಾದಕ ಶ್ರೀವತ್ಸ ಶರ್ಮಾ ನಡೆಸಿಕೊಡುವರು.

ದಾಸೋಹ ಸೇವೆಯನ್ನ ಗದಗ-ಬೆಟಗೇರಿ ಬಸವದಳದ ಬಸವಣ್ಣೆಪ್ಪ ವಿ. ಕಾಮಣ್ಣವರ ಹಾಗೂ ಲಿಂ. ಅನಸಮ್ಮ ಜಿ. ಗಾಣಗೇರಿ ಇವರ ಸ್ಮರಣಾರ್ಥ ಷಣ್ಮುಖಪ್ಪ ನೀಲಕಂಠಪ್ಪ ಕುರ್ನಳ್ಳಿ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ ಹಾಗೂ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜನರ ಹಣ, ಜನರಿಗೆ ಲೆಕ್ಕ ಕೊಡಬೇಕು: ಸಿದ್ದರಾಮಯ್ಯ

ಬೆಂಗಳೂರು: ಹಲವು ಮಂದಿ ತಜ್ಞರು ಕೇವಲ ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂದು ಅಭಿಪ್ರಾಯ…

ವಾಟ್ಸಾಪ್ ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ

ವಾಟ್ಸಾಪ್ ಬಳಕೆದಾರರಿಗೆ ಹೊಸ ಮಾಹಿತಿಯೊಂದು ಇಲ್ಲಿದೆ. ವಾಟ್ಸಾಪ್ ಬಳಕೆದಾರರು ಸ್ಮಾರ್ಟ ಫೋನ್ ಗಳಲ್ಲಿ ವಾಟ್ಸಾಪ್ ಲಾಗೌಟ್ ಮಾಡಬಹುದಾಗಿದೆ.

ಕ್ವಾರಂಟೈನ್ ನಲ್ಲಿಯೇ ಯುವತಿಯ ಅತ್ಯಾಚಾರ..!

ಕ್ಯಾರೆಂಟೈನ್ ನಲ್ಲಿಯೇ ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ 6 ಪುರುಷರು 18 ವರ್ಷದ ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ

ಮದ್ಯೆದಂಗಡಿ ಪ್ರಾರಂಭಕ್ಕೆ ಲಂಬಾಣಿ ಸಂಘಟನೆ ವಿರೋಧ

ಒಂದು ಕಾಲ ಘಟ್ಟದಲ್ಲಿ ಲಂಬಾಣಿ ಸಮಾಜ ಭಟ್ಟಿ ಸಾರಾಯಿ ಮಾರಾಟ ಮಾಡಿಯೇ ತಮ್ಮ ಬದುಕು ಕಟ್ಟಿಕೊಂಡಿತ್ತು. ಆದರೆ ಇದೀಗ ಸಮಾಜದಲ್ಲಿ ಜಾಗೃತಿ ಮೂಡಿದೆ ಎನ್ನುವುದಕ್ಕೆ ಯುವಕರ ಕಾರ್ಯ ಇದಕ್ಕೆ ಉದಾಹರಣೆಯಾಗಿದೆ.