ಗದಗ: ಲಿಂಗಾಯತ ಪ್ರಗತಿಶೀಲ ಸಂಘ, ಆಶ್ರಯದಲ್ಲಿಂದು ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗುವ ಶಿವಾನುಭವದಲ್ಲಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆಮಹಾದೇವಿ ಅವರು 2ನೇ ಸ್ಮರಣೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಮಾತೆ ಮಹಾದೇವಿ ಅವರ ಕುರಿತು ರೇಲ್ವೆ ಇಲಾಖೆ ಹಿರಿಯ ಅಭಿಯಂತರ ಶ್ರೀಸಚ್ಚಿದಾನಂದ ಚಟನಳ್ಳಿ ಮಾತನಾಡುವರು.
ಶಿವಣ್ಣ ಶರಣರು, ಗುಡಗುಂಟಿ ಇವರು ಸಂಪಾದಿಸಿರುವ ಶರಣ ಧರ್ಮ ಪ್ರವಚನ ರೂಪು-ರೇಷೆ ಗ್ರಂಥವನ್ನು ಪೂಜ್ಯರು ಲೋಕಾರ್ಪಣೆಗೊಳಿಸುವರು.
ಧರ್ಮಗ್ರಂಥ ಪಠಣವನ್ನು ಮಂಗಳಾ ಬಿ. ಕಾಮಣ್ಣವರ, ವಚನ ಚಿಂತನವನ್ನು ಚನ್ನಬಸವಣ್ಣ ಕಾಮಣ್ಣವರ ನೆರವೇರಿಸುವರು. ಸಂಗೀತ ಕಾರ್ಯಕ್ರಮವನ್ನು ಕೊಳಲು ವಾದಕ ಪಿ. ಕಾರ್ತಿಕ ಭಟ್ ಹಾಗೂ ತಬಲಾ ವಾದಕ ಶ್ರೀವತ್ಸ ಶರ್ಮಾ ನಡೆಸಿಕೊಡುವರು.
ದಾಸೋಹ ಸೇವೆಯನ್ನ ಗದಗ-ಬೆಟಗೇರಿ ಬಸವದಳದ ಬಸವಣ್ಣೆಪ್ಪ ವಿ. ಕಾಮಣ್ಣವರ ಹಾಗೂ ಲಿಂ. ಅನಸಮ್ಮ ಜಿ. ಗಾಣಗೇರಿ ಇವರ ಸ್ಮರಣಾರ್ಥ ಷಣ್ಮುಖಪ್ಪ ನೀಲಕಂಠಪ್ಪ ಕುರ್ನಳ್ಳಿ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ ಹಾಗೂ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
