ಕಲಬಬುರಗಿ : ದೇಶದಲ್ಲೇ ಮೊದಲಬಾರಿಗೆ ಕೋರೊನಾ ಸಂಕಿನಿಂದ ಮೃತಪಟ್ಟ ಮೊಹಮದ್ದ ಹುಸೇನ್ ಸಿದ್ದಿಕ (76) ಅವರ ಕೊವಿಡ್ ಪಾಸಿಟಿವ್ ವರದಿ ಇನ್ನೂ ಅವರ ಕುಟುಂಬದ ಕೈಗೆ ತಲುಪಿಲ್ಲ.
ಸೌದಿ ಅರೇಬಿಯಾದ ಮೆಕ್ಕಾ ಯಾತ್ರೆಗೆ ತೆರಳಿದ್ದ ಅವರು 2020ರ ಫೆಬ್ರುವರಿ 29ರಂದು ಕಲಬುರಗಿಗೆ ಮರಳಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಮಾರ್ಚ 9ರಂದು ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಕಲಬುರಗಿಗೆ ಕರೆತರುವಾಗ ಮಾರ್ಗ ಮಧ್ಯೆ ಮಾರ್ಚ 10 ರಂದು ಮೃತಪಟ್ಟರು. ಅವರಿಗೆ ಕೋವಿಡ್‌-19 ತಗುಲಿದ್ದು ದೃಢಪಟ್ಟಿದ್ದರಿಂದ ದೇಶದ ಗಮನ ಕಲಬುರಗಿಯತ್ತ ಹರಿದಿತ್ತು.

ಸಾವು ಸಂಭವಿಸಿದ ವೇಳೆಯೇ ಕುಟುಂಬದವರಿಗೆ ಅದರ ವರದಿ ನೀಡಲಾಗಿರುತ್ತದೆ. ಸಿದ್ದಿಕಿ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಕೋವಿಡ್ ವರದಿ ಮಾರನೇ ದಿನ ಬಂದಿದೆ. ಹಾಗಾಗಿ, ಅವರಿಗೆ ವರದಿ ಸಿಕ್ಕಿರಲಿಕ್ಕಿಲ್ಲ. ಸಿದ್ದಿಕಿ ಅವರ ಎಸ್‌ಆರ್‌ಎಫ್‌ ಸಂಖ್ಯೆ ಸಮೇತ ಅರ್ಜಿ ಕೊಟ್ಟರೆ ಲಿಖಿತ ವರದಿ ನೀಡುತ್ತೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

You May Also Like

ಆಸ್ಪತ್ರೆಯಲ್ಲಿನ ಬಹುತೇಕ ಸಿಬ್ಬಂದಿಗೆ ಕೊರೊನಾ!

ಮುಂಬಯಿ: ಇಲ್ಲಿಯ ಮಹಾನಗರ ಪಾಲಿಕೆಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯ ಸಾಯನ್‌ ತಿಲಕ್‌ ಆಸ್ಪತ್ರೆಯ 92 ಜನ ವೈದ್ಯರು ಹಾಗೂ ಏಳು ಜನ ತರಬೇತಿ ಪಡೆಯುತ್ತಿದ್ದ ವೈದ್ಯರಿಗೆ ಸೋಂಕು ತಗುಲಿದೆ.

ಗದಗ ಜಿಲ್ಲೆಯ ಖಾಕಿ ಖದರ್ ಗೆ ಜನರು ಖುಷ್..!: ಕಳೆದ ವಸ್ತುಗಳು ಕೈಸೇರಿದ್ದಕ್ಕೆ ಜನ್ರು ಖುಷ್ !

ಖಾಕಿ ತನ್ನ ಖದರ್ ತೋರಿಸಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಗದಗ ಜಿಲ್ಲೆಯ ಪೊಲೀಸರು ತಾಜಾ ಉದಾಹರಣೆ. ಒಂದು ವರ್ಷದಿಂದ ಜಿಲ್ಲೆಯಲ್ಲಿ ಆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಜಾಲ ಭೇದಿಸಿ ಕಳ್ಳರ ಹೆಡೆಮುರಿ ಕಟ್ಟಿ ಜನರು ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಮೂಲಕ ಜಿಲ್ಲಾ ಪೊಲೀಸ್ ಇಂದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಅವಿಕಾ ಜೊತೆ ರೊಮ್ಯಾನ್ಸ್ ಮಾಡಲಿರುವ ಆದಿ

ಯುವ ನಟ ಆದಿ ಸಾಯಿಕುಮಾರ್ ಅವರು ಮುಂಬರುವ ದೊಡ್ಡ ಬಜೆಟ್ ಚಿತ್ರ ‘ಅಮರನ್’ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ.

ಕೊರೊನಾ ಪಿಪಿಇ ಕಿಟ್ ನದಿಯಲ್ಲಿ ಪತ್ತೆ: ಗ್ರಾಮಸ್ಥರ ಆತಂಕ

ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ), ನದಿಯಲ್ಲಿ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.