ಗದಗ: ನಗರದ ಹಾಕಿ ಗ್ರೌಂಡ ಹತ್ತಿರ, ಎಸ್.ಎಂ.ಕೃಷ್ಣ ನಗರ ರಸ್ತೆಯ ಬಳಿ ಮಾ.6 ರಂದು ಶನಿವಾರ ಸಂಜೆ 6-30ಕ್ಕೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಆರ್ಟ್ ಅಡ್ಡಾ ಸಭಾಭವನ ಉದ್ಘಾಟನೆ ಹಾಗೂ ಸಂಧ್ಯಾ ಸುರಾಗ ಕಾರ್ಯಕ್ರಮ ನೆರವೇರುವುದು.
ಸಾಂಸ್ಕೃತಿಕ ಸಭಾಭವನದ ಉದ್ಘಾಟನೆಯನ್ನು ಹಿರಿಯ ಹಿಂದೂಸ್ತಾನಿ ಸಂಗೀತಗಾರರಾದ ಪಂಡಿತ ಡಾ.ಎಂ.ವೆAಕಟೇಶಕುಮಾರ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ.ಅರ್ಜುನ ಗೊಳಸಂಗಿ ವಹಿಸುವರು. ಗಣ್ಯ ವ್ಯಾಪಾರಸ್ಥರಾದ ಸಂಜಯ ಬಾಗಮಾರ, ಹಿರಿಯ ಕಲಾವಿದರಾದ ಆರ್.ಡಿ.ಕಡ್ಲಿಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಂಧ್ಯಾ ಸುರಾಗ ಸಂಗೀತ ಕಾರ್ಯಕ್ರಮವನ್ನು ಪಂಡಿತ ವೆಂಕಟೇಶಕುಮಾರ ಅವರ ಶಿಷ್ಯೆ ಕು.ಐಶ್ವರ್ಯಾ ದೇಸಾಯಿ ನಡೆಸುವರು. ಇವರಿಗೆ ಕೇಶವ ಜೋಷಿ ತಬಲಾ ಸಾಥ್, ಸತೀಶ ಕೊಳ್ಳಿ ಹಾರ್ಮೋನಿಯಂ ಸಾಥ್ ನೀಡುವರು. ಕಾರ್ಯಕ್ರಮಕ್ಕೆ ಕಲಾಸಕ್ತರು ಭಾಗವಹಿಸಿ ಯಶಸ್ವಿಗೊಳಿಸಲು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಚ್.ಕೆ.ಪಾಟೀಲರಿಗೆ ಮಾತೃವಿಯೋಗ

ಉತ್ತರಪ್ರಭ ಸುದ್ದಿಗದಗ: ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲ ಅವರ…

ಗದಗನಲ್ಲಿ ಏಳು ಲಕ್ಷದೊಂದಿಗೆ ಕೆಲಸಗಾರ ನಾಪತ್ತೆ ; ಮಾಲಿಕನಿಂದ ದೂರು

ಗದಗ: ಬ್ಯಾಂಕಿಗೆ ಹಣ ಕಟ್ಟಿಬಾ ಅಂತಾ ಕಳಿಸಿದ ಮಾಲಿಕನ ಲಕ್ಷಾಂತರ ರೂಪಾಯಿಯೊಂದಿಗೆ ಕೆಲಸಗಾರ ನಾಪತ್ತೆಯಾಗಿದ್ದಾನೆ ಎನ್ನುವ…

ರಾಜಕೀಯ ಹಗ್ಗ ಜಗ್ಗಾಟ: ಪಾಳುಬಿದ್ದ ಆಶ್ರಯ ಮನೆಗಳ ಪ್ರವೇಶಿಸಿದ ಜನರು

ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದಿದ್ದಾರೆ. ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ.

ಕನಕ ದುರ್ಗಾದೇವಿಯ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.