ಬೀದರ: ಜಾನಪದ ಜನ ಕೇಂದ್ರಿತ ಮೌಲ್ಯಗಳ ನಿದಿಯಾಗಿದ್ದು ಇದನ್ನು ಬಗೆದಷ್ಟು ದೇಶಿಯತೆ ಅನಾವರಣಗೊಳ್ಳುವುದು ಎಂದು ಕರ್ನಾಟಕ ಜಾನಪದ ಪರಿಷತ್ತು ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ನುಡಿದರು. ಅವರು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಹಾಗೂ ಜಿಲ್ಲಾ ಘಟಕ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ, ಕರ್ನಾಟಕ ಸಾಹಿತ್ಯ ಸಂಘ ಮತ್ತು ಕನ್ನಡ ಸಾಹಿತ್ಯ ವಿಭಾಗ ಕರ್ನಾಟಕ ಕಾಲೇಜು ಬೀದರ್ ಸಂಯುಕ್ತಾಶ್ರಯದಲ್ಲಿ ಇಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಜಾನಪದ ದಿನಾಚರಣೆ-2022 ದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂಗ್ಲೆಡ್‌ನ ಡಬ್ಲ್ಯೂಜೆ. ಥೋಮ್ಸ್ ಇವರು 1846ರ ಮಾರ್ಚ 22ರಂದು ಫೋಕಲೋರ ಪದವನ್ನು ತಮ್ಮ ಲೇಖನದಲ್ಲಿ ಬಳಸಿ ಪ್ರಕಟಿಸಿದರು. ಅಂದಿನಿಂದ ಫೋಕಲೋರ ವಿಶ್ವದಲ್ಲಿ ಬಳಕೆಯಾಗುತ್ತ ಬಂತು. ಅಂದಿನನಿಂದ ಪ್ರತಿ ವರ್ಷ ಮಾರ್ಚ 22ರಂದು ವಿಶ್ವ ಜಾನಪದ ದಿನಾಚರಣೆ ಆಚರಿಸುತ್ತ ಬರಲಾಗಿದೆ. ಇಂಗ್ಲೀಷನ್ ಫೋಕಲೋರ ಪದದ ಸಂವಾದ ಪದದಲ್ಲಿ ಜಾನಪದ ಎಂದು ಕರೆಯಲಾಗುತ್ತದೆ. ಚರಿತ್ರೆಗೆ ಇದೊಂದು ಬಲಿಷ್ಠವಾದ ಆಕಾರ. ಇವುಗಳಿಗೆ ಜನಪದದಲ್ಲಿ ವಾರಸುದಾದರರು ಇವುಗಳನ್ನು ಗೌರವಿಸುವುದು ನಮ್ಮೇಲ್ಲರ ಹೋಣೆಯಾಗಿದೆ ಜನಪದ ಸಾಹಿತ್ಯ ಪ್ರಕಾರಗಳಾದ ಕಥೆ, ಹಾಡು, ಗಾದೆ, ಒಗಟು, ಒಡಪು ಮತ್ತು ಬಯಲಾಟದ ಧಾಟಿಗಳು ಹಿಡಿದಿಡುವ ಪ್ರಯತ್ನ ಮಾಡಬೇಕಾಗಿದೆ. ಅದರಲ್ಲಿರುವ ಮಾನವೀಯ ಮೌಲ್ಯಗಳನ್ನು ತಿಳಿ ಹೇಳಬೇಕಾಗಿದೆ. ಆ ದಿಶೆಯಲ್ಲಿ ಇಂದಿನ ವಿಶ್ವ ಜಾನಪದ ದಿನಾಚರಣೆ ನಮಗೆಲ್ಲ ಪೂರಕವಾಗಲಿದೆೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರಾದ ರೇವಣಸಿದ್ದಪ್ಪ ಜಲಾದೆ ಮಾತನಾಡುತ್ತ ನಮ್ಮ ದೇಶದ ಸಂಸ್ಕೃತಿ ಇಂದಿಗೂ ಉಳಿದುಕೊಂಡು ಬಂದಿರುವುದು ಜನಪದದಿಂದ ಆಧುನಿಕ ಸಮೂಹ ಮಾಧ್ಯಮ ಕಾರಣವಾಗಿ ನಮ್ಮ ಜನಪದ ಸಂಸ್ಕೃತಿ ನಶಿಸಿ ಹೊಗುತ್ತಿದೆ. ಅದನ್ನು ಉಳಿಸಿಕೊಳ್ಳಲು ಇಂಥ ಕಾರ್ಯಕ್ರಮ ತುಂಬ ಉಪಯುಕ್ತವಾಗಲಿದೆ. ಡಾ. ಹೆಬ್ಬಾಳೆ ಅವರು ಈ ದಿಶೆಯಲ್ಲಿ ಪುಣ್ಯದ ಕಾರ್ಯ ಮಾಡುತಿದ್ದಾರೆ.
ತಾಲೂಕು ಅಧ್ಯಕ್ಷರಾದ ಎಸ್‌ಬಿ ಕುಚಬಾಳ ತಮ್ಮ ಶ್ರೀಕಂಠದಿಂದ ಜಾನಪದ ಹಾಡನ್ನು ಹಾಡಿ ರಂಜಿಸಿದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಗಳಾದ ಡಾ. ಸುನಿತಾ ಕೂಡ್ಲಿಕರ್ ಸ್ವಾಗತಿಸಿದರು. ಇನ್ನೋರ್ವ ಕಾರ್ಯದರ್ಶಿ ಡಾ. ಮಹಾನಂದಾ ಮಡಕಿ ನಿರೂಪಿಸಿದರು. ಅಂಜಲಿ ದೊಡ್ಡಕಾಮಣ್ಣ ಪ್ರಾರ್ಥನೆ ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ ಭಗವತಿ ಮತ್ತು ಮರಖಲ ಗ್ರಾಮದ ಶ್ರೀಮತಿ ನಾಗಮ್ಮ ಮತ್ತು ಸಂಗಡಿಗರು ಸಂಪ್ರದಾಯದ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ತಳಿಸಿದರು. ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಶ್ರೀ ಶಿವಶರಣಪ್ಪ ಗಣೇಶಪುರ ಶ್ರೀ ಶ್ರೀಧರ ಜಾಧವ ಶ್ರೀ ಪವನ ನಾಟೆಕರ ಶ್ರೀಮತಿ ಸುನೀತಾ ಬುಡೆರಿ ಉಪಸ್ಥಿತರಿದ್ದರು.ಪ್ರಾಧ್ಯಾಪಕರು ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ತಾಲೂಕಿನಲ್ಲಿ 7 ಜನ ಅವಿರೋಧ ಆಯ್ಕೆ: 167 ಸ್ಥಾನಗಳಿಗೆ ಚುನಾವಣೆ

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳ ಚುನಾವಣಾ ಕಣ ರಂಗೇರುತ್ತಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…

ಕಟ್ಟಡ ಕಾರ್ಮಿಕರು ಲಾಕ್ ಡೌನ್ ಪರಿಹಾರಧನ ಪಡೆಯಲು ಇರುವ ಷರತ್ತುಗಳೇನು?

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.3,000 ಲಾಕ್ ಡೌನ್ ವಿಶೇಷ ಪರಿಹಾರಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕೊರ್ಲಹಳ್ಳಿ: ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲು!

ಗದಗ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಿಂದ ಗದಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ. ಕೊರ್ಲಹಳ್ಳಿ ಸಮೀಪದಲ್ಲಿ ಹೆದ್ದಾರಿ ಪಕ್ಕದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.