ನವದೆಹಲಿ: ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಹೊಸ ರೂಪಾಂತರಿ ಕೊರೊನಾ ತಳಿ, ಪ್ರತಿಕಾಯ ಅಭಿವೃದ್ಧಿಗೊಂಡ ಜನರಲ್ಲಿ ಮತ್ತೆ ಸೋಂಕು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಳಗೊಳ್ಳುತ್ತಿರುವುದಕ್ಕೆ ಎಂದು ಡಾ.ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ತಳಿಯ ಕೊರೋನಾ ವೈರಸ್, ಪ್ರತಿಕಾಯಗಳನ್ನೂ ಮೀರಿ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೆಳೆಯನಿಗಾಗಿ ಗಂಡನ ಮರ್ಮಾಂಗಕ್ಕೆ ಆಸಿಡ್ ಎರಚಿದ ಪಾಪಿ!

ಲಕ್ನೋ : ಗೆಳೆಯನಿಗಾಗಿ ಪತ್ನಿಯೊಬ್ಬರು ಗಂಡನ ಮರ್ಮಾಂಗಕ್ಕೆ ಆಸಿಡ್ ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನ ಟಿ.ಪಿ. ನಗರದಲ್ಲಿ ನಡೆದಿದೆ. ಪತ್ನಿಯ ದಾಳಿಯಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೂಗಲ್ ಫೋಟೋ ಬ್ಯಾಕ್ಅಪ್ ಸ್ಟೋರೇಜ್ ಗೆ ಇನ್ಮುಂದೆ ಹಣ ಪಾವತಿಸಬೇಕು

ಈಗಾಗಲೇ ಹಲವು ವರ್ಷಗಳಿಂದ ಮೊಬೈಲ್ ಗಳಲ್ಲಿ ಗೂಗಲ್ ಫೋಟೋಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಇನ್ಮುಂದೆ ಹಾಗಿಲ್ಲ. ಫೋಟೋ ಬ್ಯಾಕ್ ಅಪ್ ಸ್ಟೋರೇಜ್ ಮಾಡಲು ಹಣ ಪಾವತಿಸುವಂತಾಗಿದೆ.

ಕಂಟೈನ್ಮೆಂಟ್ ಬಿಟ್ಟು ಉಳಿದೆಡೆ ವಹಿವಾಟಿಗೆ ಅವಕಾಶ ನೀಡಬೇಕು

ನವದೆಹಲಿ: ದೇಶದಾದ್ಯಂತ ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಎಲ್ಲ ರೀತಿಯ…

ನಟ ಸುಶಾಂತ್ ಸಿಂಗ್ ಲಾಸ್ಟ್ ಪಿಕ್ಚರ್ ಟ್ರೈಲರ್: ಬದುಕು-ಸಾವಿನ ತಲ್ಲಣದ ಕಹಾನಿ

‘ಯಾವಾಗ ಹುಟ್ಟಬೇಕು, ಯಾವಾಗ ಸಾಯಬೇಕು ಎಂದು ನಿರ್ಧರಿಸುವುದು ನಮ್ ಕೈಲಿಲ್ಲ. ಆದರೆ, ಹೇಗೆ ಬದುಕಬೇಕು ಎಂದು…