ಬೆಂಗಳೂರು: ನಟ ಧ್ರುವ ಸರ್ಜಾ ಟಾಲಿವುಡ್ ಸಿನಿಪ್ರೀಯರಿಗೆ ಕ್ಷಮೆಯಾಚಿಸಿದ್ದಾರೆ. ಅರೇ ಯಾಕೆ ಧ್ರುವಾ ಸರ್ಜಾ ಕ್ಷಮೆಯಾಚಿಸಿದ್ದಾರೆ ಎನ್ನುವ ಕುತೂಹಲು ಮೂಡುವುದು ಸಹಜ. ಇದೇ ಮೊದಲ ಬಾರಿ ತೆಲುಗು ಪ್ರೇಕ್ಷಕರಿಗೆ ಮುಂದೆ ಧ್ರುವ ಬರಲಿದ್ದಾರೆ. ಇಂತಹ ಸಂದರ್ಭದಲ್ಲಿ ಧ್ರುವ ಕ್ಷಮೆಯಾಚಿಸಿದ್ದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಈಗಾಗಲೇ ಧ್ರುವ ಸರ್ಜ ನಟನೆಯ ಪೊಗರು ಸಿನಿಮಾ ಸ್ಯಾಂಡಲ್​ವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಪೊಗರು ಕನ್ನಡ,  ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಈ ಮೂಲಕ ಇದೇ ಮೊದಲ ಬಾರಿ ಧ್ರುವ ಸರ್ಜಾ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ. ಕೆಜಿಎಫ್​ ಸಿನಿಮಾದ ನಂತರ ಕನ್ನಡದ ಬಹುತೇಕ ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲಿವೆ. ಇನ್ನು ತೆರೆಗೂ ಮುನ್ನವೇ ಪೊಗರು ಸಿನಿಮಾದ ಡೈಲಾಗ್​ ಟೀಸರ್​ ಹಾಗು  ಖರಾಬು ಹಾಡು ಹಾಗೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪ್ರೇಕ್ಷಕರ ಮನಕ್ಕೂ ಲಗ್ಗೆ ಇಟ್ಟಿದೆ.

ಪೊಗರು ಸಿನಿಮಾ ಪ್ರಚಾರಕ್ಕಾಗಿ ನಟ ಧ್ರುವ ಇನ್ ಸ್ಟಾಗ್ರಾಂನಲ್ಲಿ ಟಾಲಿವುಡ್ ಸಿನಿಪ್ರೀಯರಿಗೆ ಕ್ಷಮೆಯಾಚಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಮೂಲಕ ಅರ್ಜುನ್​ ಸರ್ಜಾ ಅವರೊಂದಿಗಿರುವ ಧ್ರುವ ಸರ್ಜಾ ಕೂಡ ಟಾಲಿವುಡ್​ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಂಡಿದ್ದಾರೆ. ತಾನು ಅರ್ಜುನ್​ ಸರ್ಜಾ ಅವರ ಸಂಬಂಧಿ, ತೆಲುಗಿನಲ್ಲಿ ತಪ್ಪಾಗಿ ಮಾತನಾಡಿದರೆ ಕ್ಷಮಿಸಿ ಎನ್ನುತ್ತಲೇ ಮಾತು ಆರಂಭಿಸಿ, ಪೊಗರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…

ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲೂ ಓಡಿ ಹೋಗಿಲ್ವಂತೆ!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಮಗನಿಗಾಗಿ ವಿಶೇಷ ಶುಭಾಶಯ ತಿಳಿಸಿದ ನಟಿ ರಕ್ಷಿತಾ!

ಬೆಂಗಳೂರು : ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮಗ ಸೂರ್ಯ 12ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾನೆ. ಹೀಗಾಗಿ ಮಗನ ಹುಟ್ಟು ಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ ಸ್ಟಾಗ್ರಾಮ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಮತ್ತು ಶಿವರಾಜ ಕುಮಾರ ಕೆಲವೇ ಕ್ಷಣಗಳಲ್ಲಿ ಜಂಟಿ ಸುದ್ದಿ ಗೋಷ್ಠಿ

ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ಅವರ ಅಭಿಮಾನಿಗಳು ದೌಡು ಹೆಚ್ಚಿನ ಪೊಲೀಸ್ ಬೀಗಿ ಬಂದೋಬಸ್ತ ಮಾಡಲಾಗಿದ್ದು .ರಾಜ್ಯಾದ್ಯಂತ ಅವರ ಅಭಿಮಾನಿಗಳು ಬೇಗ ಗುಣಮುಖರಾಗಿ ಅಪ್ಪು ಬರಲಿ ಎಂದು ಪ್ರಾರ್ಥನೆ ಮಾಡುತ್ತಿರುವ ಬೆನ್ನಲ್ಲೆ ಕೆಲವೇ ಕ್ಷಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ. ಅಸ್ಪತ್ರೆಯತ್ತ ಚಿತ್ರರಂಗದ ಗಣ್ಯರು ,ರಾಜಕೀಯ ಮುಖಂಡರು ಚಿತ್ರರಂಗದ ಚಟುವಟಿಕೆಗಳನ್ನು ಬದಿಗೊತ್ತಿ ಎಲ್ಲರೂ ವಿಕ್ರಮ್ ಆಸ್ಪತ್ರೆಯತ್ತ ಬರುತ್ತಿದ್ದು ಕ್ಷಣಕ್ಷಣಕ್ಕೂ ಪುನೀತ್ ರಾಜಕುಮಾರ ಅವರ ಆರೋಗ್ಯ