ಮುಂಬೈ: ಕೊರೋನಾ ಹಿನ್ನೆಲೆ ಈಗಾಗಲೇ ಒಂದುವರೆ ತಿಂಗಳಿಗೂ ಅಧಿಕ ದಿನಗಳಿಂದ ದೇಶ ಲಾಕ್ ಡೌನ್ ಘೋಷಣೆಯಲ್ಲಿದೆ. ಆದರೆ ಈ ಬಿಡುವಿನ ವೇಳೆಯಲ್ಲಿ ಬಹುತೇಕ ನಟ-ನಟಿಯರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಕೊಮಡಿದ್ದರು. ತಮ್ಮ ಹಾಡು,ಕುಣಿತ ಹೀಗೆ ಏನೇ ಒಂದಲ್ಲ ಒಂದು ಚಟುವಟಿಕೆಗಳು ವೈರಲ್ ಆಗುತ್ತಲೇ ಇವೆ. ಆದರೆ ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಫಾರಂ ಹೌಸ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಸಲ್ಮಾನ್ ಖಾನ್ ತನ್ನ ಹವ್ಯಾಸಗಳನ್ನು ಪುನರ್‌ಜಾಗೃತಗೊಳಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಚಿತ್ರ ಬರೆಯುವುದು, ಕುದುರೆ ಸವಾರಿ ಮಾಡುವುದು ಹೀಗೆ ಒಂದಲ್ಲ ಒಂದು ಚಟುವಟಿಯಲ್ಲಿ ತಮ್ಮನ್ನು ತಾವು ಫುಲ್ ಬ್ಯೂಸಿಯಾಗಿಸಿಕೊಮಡಿದ್ದಾರೆ ಸಲ್ಮಾನ್ ಖಾನ್.

ಬಾಲಿವುಡ್ ನಟ ಸಲ್ಮಾನ್ ಖಾನ್ ರಚಿಸಿ ಹಾಡಿರುವ ಕೊರೋನಾ ಪ್ಯಾರ್ ಕೊರೋನಾ ಗೀತೆಗೆ ನೃತ್ಯ

ಪ್ಯಾರ್ ಕರೋನಾ ಎನ್ನುವ ಹಾಡಿಗೆ ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂಬ ಸಾಲುಗಳನ್ನೂ ಸೇರಿಸಿಕೊಂಡು ಗೀತೆ ರಚನೆ ಮಾಡಿದ್ದಾರೆ ಸಲ್ಮಾನ್ ಖಾನ್. ಸುಮಧುರು ಸಂಗೀತಕ್ಕೆ ಕೊಂಚ ರ್ಯಾಪ್ ಸ್ಪರ್ಷ ಕೂಡ ಈ ಹಾಡಿಗೆ ನೀಡಲಾಗಿದೆ. ಅಂದ್ಹಾಗೆ ಈ ಗೀತೆ ರಚನೆಯಲ್ಲಿ ಹುಸೇನ್ ದಲಾಲ್ ಅವರು ಕೂಡ ಸಲ್ಮಾನ್ ಗೆ ಸಾಥ್ ನೀಡಿದ್ದಾರೆ. ಹಾಡಿಗೆ ಸಂಗೀತ ನಿರ್ದೇಶನ ಮಾಡಿರುವುದು ಸಾಜಿದ್ ವಾಜಿದ್. ಹಾಡಿನ ನಿರ್ದೇಶನವನ್ನು ಅಭಿರಾಜ್ ಮಿನಾವಾಲಾ ಮಾಡಿದ್ದಾರೆ. ಸಂಗೀತ ನಿರ್ಮಾಣ ಅದಿತ್ಯ ದೇವ್ ಅವರದ್ದು.

ಸಲ್ಲುಭಾಯ್ ಹವ್ಯಾಸಗಳಲ್ಲಿ ಇದೀಗ ಗೀತೆರಚನೆ ಹೊಸ ಸೇರ್ಪಡೆಯಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಸ್ವತಃ ಹಾಡು ರಚಿಸಿ ತಾವೇ ಹಾಡಿದ್ದು ವಿಶೇಷ. ಸಲ್ಮಾನ್ ಖಾನ್ ಅವರ ಈ ಹಾಡು ಕೆಲವೇ ಗಂಟೆಗಳಲ್ಲಿ ಫುಲ್ ವೈರಲ್ ಆಗಿದೆ.

Leave a Reply

Your email address will not be published. Required fields are marked *

You May Also Like

ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಭಾರತ – ಚೀನಾ ಗಡಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ…

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿಗದಗ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ…

5 ಕೆಜಿ ಅಕ್ಕಿ, 1 ಕೆಜಿ ಬೇಳೆ ನವೆಂಬರ್ ವರೆಗೆ ವಿತರಿಸಲಾಗುವುದು: ನರೇಂದ್ರ ಮೋದಿ

ದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ…

ಬಳ್ಳಾರಿಯಲ್ಲಿ ಸೋಂಕಿತರ ಅಂತ್ಯಕ್ರಿಯೆ ವೇಳೆ ಅಮಾನವೀಯ ವರ್ತನೆ: 6 ಸಿಬ್ಬಂದಿ ಸಸ್ಪೆಂಡ್

ಬೆಂಗಳೂರು: ಕೊರೊನಾ ಸೋಂಕಿತರ ಶವಸಂಸ್ಕಾರದ ವೇಳೆ ಅಮಾನವೀಯ ವರ್ತನೆ ತೋರಿದ ಆರೋಪದ ಹಿನ್ನೆಲೆ ಬಳ್ಳಾರಿಯ ಆರೋಗ್ಯ…