ಗದಗ: ಓರ್ವ ವ್ಯಕ್ತಿ ದೇಹಕ್ಕೆ ಎಲ್ಲೆಂದರಲ್ಲಿ ಬ್ಲೇಡ್ನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದ ಗುರುರಾಜ ಜಾಗಿರದಾರ (48) ಶಿವಾನಂದ ಮಠದ ಹಿಂಬಾಗದ ನಂದೀಶ್ವರ ನಗರದ ಮಠದ ಹಿಂಭಾಗದಲ್ಲಿರುವ ತನ್ನ ಮನೆಯ ಕಿಡಕಿಗಳನ್ನು ಒಡೆದು ತನ್ನ ದೇಹಕ್ಕೆ ಎಲ್ಲೆಂದರಲ್ಲಿ ಬ್ಲೇಡ್ನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ನಗರದ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.