ಮುಳಗುಂದ: ಸಮೀಪದ ಬೆಳಧಡಿ ಗ್ರಾಮದ ಅಂಚೆ ಕಚೇರಿಯಲ್ಲಿ ಮಂಗಳವಾರ ಗದಗ ಅಂಚೆ ವರಿಷ್ಠಾಧಿಕಾರಿ ಚಿದಾನಂದ ಪದ್ಮಸಾಲಿ ಅವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯಡಿ ಸಂಗಮೇಶ ಅರಕೇರಿಮಠ ಅವರಿಗೆ 2 ಲಕ್ಷ ರೂ ಮೊತ್ತದ ಚೆಕ್ ವಿತರಿಸಿದರು.

ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಕುಟುಂಬಕ್ಕೆ ಭದ್ರತೆಗೆ ಒದಗಿಸುತ್ತದೆ. ಕಡಿಮೆ ಮೊತ್ತದ ವಿಮಾ ಕಂತು ತುಂಬಿ, ಅಪಘಾತವಾಗಿ ಮೃತಪಟ್ಟರೆ 5 ಲಕ್ಷ, ಸ್ವಾಭಾವಿಕ ಸಾವಿಗೆ 2 ಲಕ್ಷ ರೂ ಮೊತ್ತವನ್ನ ಅವರ ಕುಟುಂಬದ ವಾರಸುದಾರರಿಗೆ ಇಲಾಖೆ ಒದಗಿಸುತ್ತದೆ. ಹೀಗೆ ಅನೇಕ ಉಳಿತಾಯ ಹಾಗೂ ಜೀವ ವಿಮಾ ಯೋಜನೆಗಳಿದ್ದು ಅಂಚೆ ಇಲಾಖೆ ಯೋಜನೆಗಳನ್ನು ಗ್ರಾಹಕರು ಸದುಪಯೋಗ ಮಾಡಿಕೊಳ್ಳಬೇಕು. ಎಂದರು.

ಸಹಾಯಕ ಅಂಚೆ ಅಧೀಕ್ಷಕ ಎಂ.ಜಿ.ಕರಣೆ ಮಾತನಾಡಿ, ಅಂಚೆ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಂಚೆ ಸಿಬ್ಬಂದಿಯು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೌಲಭ್ಯಗಳನ್ನ ಗ್ರಾಹಕರು ಪಡೆದುಕೊಳ್ಳಬೇಕು. ಎಂದರು.

ಗದಗ ಅಂಚೆ ಪಾಲಕ ಡಿ.ಡಿ.ಮುಳಗುಂದ ಸಭೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಇನಾಮತಿ, ಉಪಾಧ್ಯಕ್ಷ ಶಂಕ್ರಪ್ಪ ಹೊಸಳ್ಳಿ, ಸದಸ್ಯೆ ಲಕ್ಷ್ಮವ್ವ ಮುಂದಲಮನಿ, ಶಿಕ್ಷಕ ಕಲ್ಲಣ್ಣವರ, ಪಶು ವೈದ್ಯಾಧಿಕಾರಿ ಪಿ.ಎಸ್.ಗಣಾಚಾರಿ, ಅಂಚೆ ಮೇಲ್ವಿಚಾರಕ ಎಸ್.ವಿ.ಹಿರೇಮಠ, ವೆಂಕಟೇಶ ಆಕಳವಾಡಿ, ಶ್ರೀದೇವಿ ಕಲಕೇರಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಸೋಂಕಿತರ ಸಂಖ್ಯೆಯಲ್ಲಿ 4 ನೆ ಸ್ಥಾನದಲ್ಲಿ ಕರ್ನಾಟಕ : ರಿಕವರಿಗಿಂತ ಆಕ್ಟಿವ್ ಕೇಸ್ ಹೆಚ್ಚು

ಸೋಂಕಿತರ ಸಂಖ್ಯೆ (ಕೇಸ್ ಲೋಡ್) ಆಧಾರದ ಪಟ್ಟಿಯಲ್ಲಿ ಕರ್ನಾಟಕ ಈಗ ಗುಜರಾತ್ ದಾಟಿ 4ನೆ ಸ್ಥಾನಕ್ಕೆ…

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ-ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಯಾವ ಶಾಸಕರು ರಾಜಿನಾಮೆ ನೀಡುವುದಿಲ್ಲ. ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಬಿಜೆಪಿಗೆ ಮುಳುವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಾರಾಟವಾದ ಸಾರಿ ಎಷ್ಟು ಗೊತ್ತಾ?

ಒಂದೇ ದಿನ ಹಾವೇರಿಯಲ್ಲಿ ಕೊಟ್ಯಾಂತರ ಮದ್ಯ ಬಿಕರಿಯಾಗಿದ್ದು ಇದರಿಂದ ನಿನ್ನೆ ಒಂದೇ ದಿನಕ್ಕೆ ಅಬಕಾರಿ ಇಲಾಖೆಗೆ ಕೋಟ್ಯಾಂತರ ಕಮಾಯಿಯಾಗಿದೆ.