ಮುಂಬಯಿ : ಶೂಟಿಂಗ್ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ಗೆ ಹಿಂದಿನಿಂದ ಲಾರಿ ಗುದ್ದಿದ ಘಟನೆ ನಡೆದಿದೆ.
ಅಲ್ಲು ಅರ್ಜುನ್ ಅವರು ಪುಷ್ಫ ಸಿನಿಮಾದಲ್ಲಿ ಸದ್ಯ ಬ್ಯೂಸಿಯಾಗಿದ್ದಾರೆ. ಆದರೆ, ಕ್ಯಾರವಾನ್ ನಲ್ಲಿ ಅಲ್ಲು ಇರಲಿಲ್ಲ. ಅವರ ಮೇಕಪ್ ಟೀಂ ಮಾತ್ರ ಇತ್ತು. ವಾಹನವು ರಂಪಚೋದವರಂನಿಂದ ಹೈದರಾಬಾದ್ ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.
ಕ್ಯಾರವಾನ್ ನ ಚಾಲಕ ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಹಿಂದೆ ಬರುತ್ತಿದ್ದ ಲಾರಿ ಗುದ್ದಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತು ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ನ್ನು ವಿಶೇಷವಾಗಿ ವಿನ್ಯಾಸಗೊಳಸಲಾಗಿತ್ತು. ಇದರ ಮೌಲ್ಯ ಸುಮಾರು ರೂ. 7 ಕೋಟಿ. ರೆಡ್ಡಿ ಕಸ್ಟಮ್ಸ್ ಎಂಬ ಕಂಪನಿ ಈ ವಾಹವನ್ನು ಡಿಸೈನ್ ಮಾಡಿದೆ.