ಲಕ್ಷ್ಮೇಶ್ವರ: ತಾಲೂಕಿನಲ್ಲಿ ನಿಗದಿಯಾಗಿದ್ದ 13 ಗ್ರಾಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಾಲೇಹೊಸೂರು ಗ್ರಾಪಂ ಹೊರತು ಪಡಿಸಿ ಉಳಿದ 12 ಗ್ರಾ.ಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಜರುಗಿತು.

ಸೂರಣಗಿ ಗ್ರಾಪಂಗೆ ಅಧ್ಯಕ್ಷರಾಗಿ ಶೇಖವ್ವ ಎನ್.ದೊಡ್ಡಗೊಣ್ಣನವರ, ಉಪಾಧ್ಯಕ್ಷರಾಗಿ ಶಂಕ್ರಪ್ಪ ಶಿರನಹಳ್ಳಿ ಆಯ್ಕೆಯಾಗಿದ್ದಾರೆ. ಅಡರಕಟ್ಟಿ ಗ್ರಾ.ಪಂಗೆ ಅಧ್ಯಕ್ಷರಾಗಿ ನಿಂಗಪ್ಪ ಪ್ಯಾಟಿ, ಉಪಾಧ್ಯಕ್ಷರಾಗಿ ಪವಿತ್ರ ಗಡ್ಡೆಪ್ಪಣ್ಣವರ. ಗೊಜನೂರ ಗ್ರಾ.ಪಂಗೆ ಅಧ್ಯಕ್ಷರಾಗಿ ನೀಲವ್ವ ಈರಣ್ಣಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಸುಶೀಲವ್ವ ತಳವಾರ, ಯಳವತ್ತಿ ಗ್ರಾ.ಪಂ.ಅಧ್ಯಕ್ಷರಾಗಿ ತುಳಜವ್ವ ಭಜಂತ್ರಿ, ಉಪಾಧ್ಯಕ್ಷರಾಗಿ ಶಿವಯೋಗಿ ಹೊಸಕೇರಿ ಆಯ್ಕೆಯಾಗಿದ್ದಾರೆ.

ದೊಡ್ಡೂರ ಗ್ರಾಪಂಗೆ ಅಧ್ಯಕ್ಷರಾಗಿ ನೀಲವ್ವ ಕಟಗಿ, ಚಂದ್ರು ಇಳಗೆರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಡಳ್ಳಿ ಗ್ರಾಪಂ‌ಗೆ ಅಧ್ಯಕ್ಷರಾಗಿ ಬೀಬಿಜಾನ ನಧಾಪ, ಕತ್ತೂರವ್ವ ಮ್ಯಾಗೇರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೋನಾಳ ಗ್ರಾ.ಪಂ ಅಧ್ಯಕ್ಷರಾಗಿ ಸುಶೀಲವ್ವ ಮರಿಲಿಂಗನಗೌಡರ, ಉಪಾಧ್ಯಕ್ಷರಾಗಿ ಸುಧಾ ಜಿ.ಮಾದರ ಆಯ್ಕೆಯಾಗಿದ್ದಾರೆ.

 ಪು.ಬಡ್ನಿ ಗ್ರಾ.ಪಂಗೆ ಅಧ್ಯಕ್ಷರಾಗಿ ಅಶೋಕ ಮರಿಹೊಳಣ್ಣವರ, ಉಪಾಧ್ಯಕ್ಷರಾಗಿ ಶಾಂತವ್ವ ಬಟಕುರ್ಗಿ. ಆದರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಹೊನ್ನಪ್ಪ ವಡ್ಡರ, ಉಪಾಧ್ಯಕ್ಷರಾಗಿ ತಿಪ್ಪವ್ವ ಲಮಾಣಿ. ಹುಲ್ಲೂರ ಗ್ರಾ.ಪಂ‌ಗೆ ಅಧ್ಯಕ್ಷರಾಗಿ ಶಿವಣ್ಣ ಬಸಾಪೂರ, ಉಪಾಧ್ಯಕ್ಷರಾಗಿ ಮರಿಯವ್ವ ಹರಿಜನ ಆಯ್ಕೆಯಾಗಿದ್ದಾರೆ. ಶಿಗ್ಲಿ ಗ್ರಾಪಂ ಅಶೋಕಯ್ಯ ಮುಳಗುಂದಮಠ ಅಧ್ಯಕ್ಷರಾಗಿ , ಉಪಾಧ್ಯಕ್ಷರಾಗಿ ಯಲಪ್ಪ ತಳವಾರ. ರಾಮಗೇರಿ ಗ್ರಾ.ಪಂಗೆ ಅಧ್ಯಕ್ಷರಾಗಿ ಅಶೋಕ ಎಂ.ಕಾಳೆ, ಉಪಾಧ್ಯಕ್ಷರಾಗಿ ಅಡವಿಯಕ್ಕ ಬೇಟಗೇರಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆದಿರುವ ಬಿ.ಎಸ್. ಯಡಿಯೂರಪ್ಪ

ಆಲಮಟ್ಟಿ:ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ…

ಶಾಸಕ‌ ಶಿವನಗೌಡ ಬಗ್ಗೆ ಮಾತಾಡುವ ನೈತಿಕತೆ ಪ್ರತಾಪಗೌಡಗೆ ಇಲ್ಲ;ಶಿವಣ್ಣ ನಾಯಕ

ಉತ್ತರಪ್ರಭ ಸುದ್ದಿ ಮಸ್ಕಿ‌: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ವಿಧಾನಪರಿಷತ್ ಚುನಾವಣೆಯಲ್ಲಿ ನೋಟಾ ಆಯ್ಕೆ ಹಿಂಪಡೆದ ಆಯೋಗ!

ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನೋಟಾ ಆಯ್ಕೆ ಇರುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.