ಉತ್ತರಪ್ರಭ ಸುದ್ದಿ

ಮಸ್ಕಿ‌: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ ನೈತಿಕತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಉಪ ಚುನಾವಣೆಯಲ್ಲಿ ಪ್ರತಾಪಗೌಡ ಸೋಲಿಗೆ ಕೆ.‌ಶಿವನಗೌಡ ನಾಯಕರೇ ಕಾರಣ ಎಂದು ಪ್ರತಾಪಗೌಡ ಹೇಳಿಕೆ‌ ನೀಡಿರುವುದು ಖಂಡನೀಯವಾಗಿದೆ. ತಾವು ಮೂರು ಭಾರಿ ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾಗಿ ಆಡಳಿತ ನೀಡದೇ, ಪಕ್ಷದ ಕಾರ್ಯಕರ್ತರ ಕಾಳಜಿ ವಹಿಸದ ಪರಿಣಾಮವಾಗಿ ಸೋಲು ಅನುಭವಿಸಿದ್ದಾರೆ, ಹೊರತು ದೇವದುರ್ಗ ಶಾಸಕ ಶಿವನಗೌಡ ಕಾರಣವಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಕ್ಷೇತ್ರದ ಜನತೆ ಪ್ರತಾಪಗೌಡ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು, ಅಧಿಕಾರ ಅವಧಿಯನ್ನು ಅನುಭವಿಸದೇ ಜನರ ಆದೇಶವನ್ನು ಧಿಕ್ಕರಿಸಿ ಹಣದ ಆಸೆಗಾಗಿ, ಅಧಿಕಾರದ ಹಪಾಹಪಿಗಾಗಿ ಮರಳಿ ಬಿಜೆಪಿಗೆ ಬಂದಿರುವ ಪ್ರತಾಪಗೌಡರಿಗೆ ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿತಕ್ಕ ಪಾಠ ಕಲಿಸಿದ್ದಾರೆ, ಆದರೆ ಸೋಲಿನ ಹತಾಸೆದಿಂದಾಗಿ ಅನಗತ್ಯ ಹೇಳಿಕೆಗಳನ್ನು ಕೆ.‌ಶಿವನಗೌಡ ನಾಯಕನ ವಿರುದ್ಧ ನೀಡುವುದು ಸರಿಯಿಲ್ಲ, ಇದೇ ರೀತಿ ಹೇಳಿಕೆ ನೀಡಿದರೆ ಶಿವನಗೌಡ ಅಭಿಮಾನಿ ಬಳಗದಿಂದ ಮಸ್ಕಿಯಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನರೇಗಲ್: ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು- ಪಾಟೀಲ

ಮತದಾನ ಎಂಬುದು ಸಂವಿಧಾನ ನೀಡಿರುವ ಅತ್ಯಮೂಲ್ಯವಾದ ಹಕ್ಕು ಅದನ್ನು ಸಮರ್ಥವಾಗಿ ಬಳಸಿಕೊಂಡು ಎಲ್ಲರೂ ತಪ್ಪದೆ ಮತದಾನ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ವೈ.ಸಿ.ಪಾಟೀಲ ಹೇಳಿದರು.

ನೀರಿನ ಕರ ಹೆಚ್ಚಳಕ್ಕೆ ಕನ್ನಡ ಕ್ರಾಂತಿ ಸೇನೆ ವಿರೋಧ

ವರ್ಷಕ್ಕೆ 950 ರೂ ನೀರಿನ ಕರವನ್ನು ಪುರಸಭೆ ನಿಗದಿ ಮಾಡಿತ್ತು. ಆದರೆ ಇದೀಗ ಏಕಾಏಕಿ 1550 ರೂ, ಏಕಾಏಕಿ ಹೆಚ್ಚಿಗೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಸಚಿವ ಶೆಟ್ಟರ್

ಪದವೀಧರರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.