ಉತ್ತರಪ್ರಭ ಸುದ್ದಿ

ಮಸ್ಕಿ‌: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ ನೈತಿಕತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಉಪ ಚುನಾವಣೆಯಲ್ಲಿ ಪ್ರತಾಪಗೌಡ ಸೋಲಿಗೆ ಕೆ.‌ಶಿವನಗೌಡ ನಾಯಕರೇ ಕಾರಣ ಎಂದು ಪ್ರತಾಪಗೌಡ ಹೇಳಿಕೆ‌ ನೀಡಿರುವುದು ಖಂಡನೀಯವಾಗಿದೆ. ತಾವು ಮೂರು ಭಾರಿ ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾಗಿ ಆಡಳಿತ ನೀಡದೇ, ಪಕ್ಷದ ಕಾರ್ಯಕರ್ತರ ಕಾಳಜಿ ವಹಿಸದ ಪರಿಣಾಮವಾಗಿ ಸೋಲು ಅನುಭವಿಸಿದ್ದಾರೆ, ಹೊರತು ದೇವದುರ್ಗ ಶಾಸಕ ಶಿವನಗೌಡ ಕಾರಣವಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಕ್ಷೇತ್ರದ ಜನತೆ ಪ್ರತಾಪಗೌಡ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು, ಅಧಿಕಾರ ಅವಧಿಯನ್ನು ಅನುಭವಿಸದೇ ಜನರ ಆದೇಶವನ್ನು ಧಿಕ್ಕರಿಸಿ ಹಣದ ಆಸೆಗಾಗಿ, ಅಧಿಕಾರದ ಹಪಾಹಪಿಗಾಗಿ ಮರಳಿ ಬಿಜೆಪಿಗೆ ಬಂದಿರುವ ಪ್ರತಾಪಗೌಡರಿಗೆ ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿತಕ್ಕ ಪಾಠ ಕಲಿಸಿದ್ದಾರೆ, ಆದರೆ ಸೋಲಿನ ಹತಾಸೆದಿಂದಾಗಿ ಅನಗತ್ಯ ಹೇಳಿಕೆಗಳನ್ನು ಕೆ.‌ಶಿವನಗೌಡ ನಾಯಕನ ವಿರುದ್ಧ ನೀಡುವುದು ಸರಿಯಿಲ್ಲ, ಇದೇ ರೀತಿ ಹೇಳಿಕೆ ನೀಡಿದರೆ ಶಿವನಗೌಡ ಅಭಿಮಾನಿ ಬಳಗದಿಂದ ಮಸ್ಕಿಯಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಬೇಡಜಂಗಮ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ; ಬಿ.ಡಿ. ಹಿರೇಮಠ

ಬೇಡ ಜಂಗಮ ಜಾತಿ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ನಿಲ್ಲದು’ ಎಂದು ಬೇಡಜಂಗಮ ಸಂಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಎಚ್ಚರಿಸಿದರು.

ಸಲೂನ್ ಪಾರ್ಲರ್ ಗಳಿಗೆ ಹೋಗುವ ಮುನ್ನ ಈ ಸುಚನೆಗಳನ್ನೊಮ್ಮೆ ಓದಿ..

ಬೆಂಗಳೂರು: ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ 58 ದಿನ ಬಂದ್ ಆಗಿದ್ದ ನಗರದ ಸಲೂನ್, ಪಾರ್ಲರ್’ಗಳು…

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಜಯ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉತ್ತರಪ್ರಭ ಲಕ್ಷ್ಮೇಶ್ವರ: ಧಾರವಾಡ ವಿಧಾನ ಪರಿಷತ್ ಚುಣಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್…

ಎಸ್‌ಡಿಎಂಸಿ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು : ಪಿ.ಸಿ.ಜೋಗರೆಡ್ಡಿ

ಶಾಲಾ ಮೇಲುಸ್ತುವಾರಿ ಸಮಿತಿ ಆಡಳಿತದಲ್ಲಿ ಶಾಲೆಯ ಅಭಿವೃದ್ಧಿ ಅಡಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಮದ್ಯೆ ಎಸ್‌ಡಿಎಂಸಿ ಸೇತುವೆಯಾಗಿಕಾರ್ಯ ನಿರ್ವಹಿಸಬೇಕಿದೆ ಎಂದು ಸಿಆರ್‌ಪಿ ಪಿ.ಸಿ.ಜೋಗರೆಡ್ಡಿ ಹೇಳಿದರು.