ಮುಂಬೈ: 2020ರಲ್ಲಿ ಲಾಕ್‌ ಡೌನ್‌ ನಿಂದ ಬೇಸತ್ತ ಜನ ಈಗ ಮತ್ತದೇ ಲಾಕ್‌ ಡೌನ್‌ ಮೊರೆ ಹೋಗುವ ಅನಿವಾರ್ಯತೆ ಇದೆ. ಯಾಕೆಂದರೆ, ಬ್ರಿಟನ್‌ ನಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್‌ ಹರಡುತ್ತಿದ್ದು, ಅಲ್ಲಿನ ಜನ ತ್ತರಿಸಿ ಹೋಗಿದ್ದಾರೆ. ಈಗಾಗಲೇ ಬ್ರಿಟನ್‌ ಅಲ್ಲದೇ, ಬೇರೆ ದೇಶಗಳಿಗೂ ಈ ವೈರಸ್‌ ಹಬ್ಬಿದ್ದು, ಭಾರತವೇನು ಹೊರತಾಗಿಲ್ಲ.

ಇದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಶುರುವಾಗಿದ್ದು, ಈಗ ದೇಶದಲ್ಲಿ ಎರಡೆರಡು ವೈರಾಣುಗಳನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ 2021 ಹೊಸ ವರ್ಷವನ್ನು ಲಾಕ್‌ ಡೌನ್‌ ಮೂಲಕವೇ ಬರ ಮಾಡಿಕೊಳ್ಳಲು ಮುಂದಾಗಿದೆ. ಬ್ರಿಟನ್‌ ವೈರಸ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆಯಿಂದ ಮಹಾರಾಷ್ಟ್ರ ಸರ್ಕಾರ ಲಾಕ್‌ ಡೌನ್‌ ಮಾಡಿದೆ.

ಇನ್ನು ಈ ಹಿಂದೆ ಇನ್ನೂ 6 ತಿಂಗಳ ಕಾಲ ಮಾಸ್ಕ್‌ ಕಡ್ಡಾಯ ಎಂದು ಘೊಷಿಸಲಾಗಿತ್ತು. ಆದರೆ, ಲಾಕ್‌ ಡೌನ್‌ ಮಾಡಲ್ಲ ಎಂದಿದ್ದ ಸರ್ಕಾರ ಈಗ ಅನಿವಾರ್ಯತೆ ದೃಷ್ಟಿಯಿಂದ ಲಾಕ್‌ ಡೌನ್‌ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ದೇಶದ ಇತರೆ ರಾಜ್ಯಗಳು ಸಹ ಲಾಕ್‌ ಡೌನ್‌ ಮೊರೆ ಹೋಗುವ ಸಾಧ್ಯೆತೆ ದಟ್ಟವಾಗಿದೆ. 2020 ಹಾಗೂ 2021ರ ಹೊಸ ವರ್ಗಳು ಇಡೀ ಜಗತ್ತಿಗೆ ಕರಾಳ ವರ್ಷಗಳಾಗಿ ಇತಿಹಾಸದ ಪುಟ ನಿರ್ಮಿಸಲಿವೆ.

ಇನ್ನು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಹೊಸ ರೂಪಾಂತರಿ ವೈರಸ್‌ನ ಲಕ್ಷಣಗಳು ಸ್ಪಷ್ಟವಾಗಿರದ ಕಾರಣ, ಜನರು ಎಚ್ಚರ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಹೈದ್ರಾಬಾದ್ ನಲ್ಲಿ ವರುಣನ ರೌದ್ರನರ್ತನನಕ್ಕೆ ಬಲಿಯಾದವರು ಎಷ್ಟು ಜನ? ಹಾನಿಯಾದ ಆಸ್ತಿ ಮೊತ್ತ ಎಷ್ಟು?

ಹೈದ್ರಾಬಾದ್ : ಹೈದ್ರಾಬಾದ್ ನಲ್ಲಿ ಮತ್ತೆ ಮಳೆರಾಯ ತನ್ನ ರೌದ್ರನರ್ತನ ಪ್ರಾರಂಭಿಸಿದ್ದು, ಮತ್ತೆ ಇಬ್ಬರನ್ನು ಬಲಿ ಪಡೆದಿದ್ದಾನೆ. ಈ ಮೂಲಕ ಮಹಾಮಳೆಗೆ 50 ಜನ ಬಲಿಯಾದಂತಾಗಿದೆ.

ಯಾವುದೇ ಆತಂಕ ಬೇಡ ಅಮಿತ್ ಶಾ ಆರೋಗ್ಯವಾಗಿದ್ದಾರಂತೆ

ನಾನು ಆರೋಗ್ಯವಾಗಿದ್ದೇನೆ. ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಈ ನದಿಗಳ ಜಲಮಾರ್ಗದಲ್ಲಿ ಸರಕು ಸಾಗಾಟಕ್ಕೆ ನಿರ್ಬಂಧ

ರಾಜ್ಯದ 5 ಜಲಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ.

ಸಾಲು ಮರದ ತಿಮ್ಮಕ್ಕನನ್ನು ನೆನೆದ ಬಜ್ಜಿ

ಭಾರತ ಕ್ರಿಕೆಟ್ ತಂಡದ ಆಟಗಾರ ಹರ್ಭಜನ್ ಸಿಂಗ್, ರಾಜ್ಯದ ಹೆಮ್ಮೆಯ ತಾಯಿಯನ್ನು ನೆನೆದು ಟ್ವೀಟ್ ಮಾಡಿದ್ದಾರೆ.ಸಾಲುಮರದ ತಿಮ್ಮಕ್ಕ ಅವರನ್ನು ಭಜ್ಜಿ ನೆನೆದು ಟ್ವೀಟ್ ಮಾಡಿದ್ದಾರೆ.