ಹೂವಿನಹಡಗಲಿ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದ ಐಕ್ಯತೆಗೆ ಭಾಷಾ ಸೌಹಾರ್ಧತೆಯೇ ಸಹಕಾರಿಯಾಗಿದೆ ಎಂದು ಜಿಬಿಆರ್ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹೇಳಿದರು.

ಪಟ್ಟಣದ ಉಪ ಕಾರಾಗೃಹದಲ್ಲಿ ಜರುಗಿದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಭಾಷಾ ಸೌಹಾರ್ದತೆ ಎಂಬ ವಿಷಯ ಕುರಿತು ಮಾತನಾಡಿದರು.

ನಮ್ಮ ದೇಶ ಹಲವು ಕ್ಷೇತ್ರಗಳಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ರಾಷ್ಟçವಾಗಿದ್ದು, ವಿವಿಧತೆಯಲ್ಲಿ ಸಂಸ್ಕೃತಿ ಬೆಸೆಯುವ ಮಾರ್ಗವೇ ಭಾಷಾ ಸೌರ್ದತೆಯಾಗಿದೆ. ವಿವಿಧ ಭಾಷೆಗಳ ಮೂಲಕ ಭಾವನೆಗಳಲ್ಲಿ ಒಂದಾಗಿ ಐಕ್ಯತೆಯನ್ನು ಸಾಧಿಸಬೇಕಾಗಿದೆ. ಇಂದು ಮನೆಯ ಒಳಗಡೆ ಮಾತೃಭಾಷೆ ಹೊರಗಡೆ ಇದ್ದಾಗ ವ್ಯವಹಾರಿಕವಾಗಿ ಸಹೋದರ ಭಾಷೆಗಳನ್ನು ಕಲಿಯುವ ಅಗತ್ಯವಿದೆ ಎಂದರು. ಸರ್ವ ಭಾಷಾ ಸಹಿಷ್ಣುತೆ ನಮ್ಮಲ್ಲಿ ಇದ್ದಾಗ ಮಾತ್ರ ರಾಷ್ಟಿçÃಯ ಐಕ್ಯತೆ ಸಾಧ್ಯವಾಗುವುದು ಎಂದು ಹೇಳಿದರು. ನಮ್ಮ ದೇಶದ ನೋಟಿನಲ್ಲಿ ೧೬ ಭಾಷೆಗಳನ್ನು ಮುದ್ರಿಸಿದ ಜಗತ್ತಿನ ಏಕೈಕ ದೇಶದವರು ನಾವು ಎಂಬ ಹೆಮ್ಮೆ ನಮಗಿದೆ ಎಂದರು.

ಕಾರಾಗೃಹದ ಸಿಬ್ಬಂದಿ ಮೌಲಾಸಾಬ್ ಜೆ.ನದಾಫ್ ಮಾತನಾಡಿ ಶರಣರ ಜೀವನದ ಅಂಶಗಳ ಮೂಲಕ ತಿಳಿಸಿದ ಅವರು ಭಾಷಾಭಿಮಾನ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಿರಿ ಎಂದು ಹೇಳಿದರು. ಗೃಹ ರಕ್ಷಕದಳದ ಪಿ.ಶಂಕರರಾವ್ ಮಾತನಾಡಿದರು.

ಉಪಕಾರಗೃಹದ ಮುಖ್ಯ ಅಧೀಕ್ಷಕರಾದ ಎನ್.ಎಂ.ಕೆಂಪಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಭಾಷೆಗಳನ್ನು ಕಲಿಯುವುದರ ಜೊತೆಗೆ ಉತ್ತಮ ನಾಗರಿಕರಾಗಿರೆಂದು ಹೇಳಿದರು. ಹಿರಿಯರು ಕಂಡ ರಾಮರಾಜ್ಯದ ಕನಸು ನನಸಾಗಬೇಕಿದೆ ಎಂದರು.

ಉಪನ್ಯಾಸಕ ಡಾ.ಹೆಚ್.ಕೆ.ಮಹೇಶ್, ಸಿಬ್ಬಂದಿಗಳಾದ ಶ್ರೀಶೈಲ.ಆರ್.ನಾವಿ, ಎಫ್.ಜಿ.ಬಾರಿಕರ, ಗೃಹ ರಕ್ಷಕದಳದ ಕೆ.ರಾಜಪೀರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ದಿ. ಮಲ್ಲನಗೌಡ ಫ ಪಾಟೀಲ ಅವರ ದ್ವೀತಿಯ ಪುಣ್ಯಸ್ಮರಣೆಯಲ್ಲಿ ಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ

ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು. ಜೊತೆಗೆ ಸಾತ್ವಿಕ ಗುಣವುಳ್ಳವರಾಗಿದ್ದರು. ಅವರು ಸರಳತೆ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.

ಮಹಾಮಾರಿಗೆ ತತ್ತರಿಸಿದ ಮಹಾರಾಷ್ಟ್ರ- ನಿನ್ನೆ ಒಂದೇ ದಿನ ಎಷ್ಟು ಕೇಸ್ ಗಳು ಗೊತ್ತಾ?

ಮುಂಬಯಿ : ಕೊರೊನಾ ಹಾಟ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ…

ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದು ನಿಜ- ಸಚಿವ ಉಮೇಶ್ ಕತ್ತಿ

ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು…

ಶಾಸಕರೇ, ಆದರಳ್ಳಿ ಗ್ರಾಮದ ಬಗ್ಗೆ ಇಷ್ಟೇಕೆ ನಿರಾಸಕ್ತಿ?

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.