ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು ನಿಜ. ಈ ಕೂಗು ಇಂದು ಹೊಸದೆನ್ನಲ್ಲ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದರು. ಆಲಮಟ್ಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಎರಡು ದಶಕಗಳಿಂದಲೂ ಉ.ಕ.ಅಭಿವೃದ್ಧಿ ಬಗ್ಗೆ ಹೋರಾಟ, ಧ್ವನಿ ಎತ್ತುತ್ತಲ್ಲಿರುವೆ ಎಂದರು. ಈ ಭಾಗದಲ್ಲಿ ಪ್ರಗತಿಪರ ಕೆಲಸ,ಕಾರ್ಯಗಳು ಅಗದಿದ್ದಾಗ ಅನಿವಾರ್ಯವಾಗಿ ಈಗಲೂ, ಮುಂದೆಯೂ ಪ್ರತ್ಯೇಕ ರಾಜ್ಯದ ಕೂಗೆತ್ತುವೆ. ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿ ಅನ್ಯಾಯ ಅಗಕೂಡದು.ಅದಕ್ಕೆ ನನ್ನ ವ್ಯಯುಕ್ತಿಕ ಸಹಮತ ಇಲ್ಲ. ಹೀಗಾಗಿ ನನ್ನ ಧ್ವನಿಕೂಗು ನಿರಂತರ ಇರಲಿದೆ. ಉ.ಕ.ಬಗ್ಗೆ ತಾತ್ಸಾರಭಾವ ಯಾರೇ ಹೊಂದಿದರು ಸಹಿಸಿಕೊಳ್ಳಲಾಗದು. ಇದಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸುವಲ್ಲಿ ತಪ್ಪೆನಿಲ್ಲ ಎಂದರು.
ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಈ ಭಾಗದ ಜನತೆಯ ಒಮ್ಮತದ ಬೇಡಿಕೆಯೂ ಅಗಿದೆ. ಆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಮಾಡಲು ಯಾವುದೇ ಅಡ್ಡಿಯಿಲ್ಲ. ತಾವು ಈಗಲೂ ಸಮರ್ಥಿಸಿಕೊಳ್ಳವೆ. ತಾವೊಬ್ಬ ಜನಪ್ರತಿನಿಧಿ. ಹೀಗಾಗಿ ಜನತೆಯ ಹಿತ ಕಾಯುವುದು ನನ್ನ ಮುಖ್ಯ ಧ್ಯೇಯ. ಆ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ವ್ಯಯಕ್ತಿಕವಾಗಿ ಎಬ್ಬಿಸಿ ಹೇಳಲ್ಲಿಚ್ಚಿಸುತ್ತಿರುವೆ. ನನ್ನ ಧ್ವನಿಗೆ ಯಾರೇ ಸ್ಪಂದಿಸಿ ಧ್ವನಿಗೂಡಿಸಿದರೂ ಅಷ್ಟೇ. ಬಿಟ್ಟರು ಅಷ್ಟೇ ನನ್ನ ಕೂಗು ಮಾತ್ರ ಅನ್ಯಾಯವಾದಾಗ ಪ್ರತಿಧ್ವನಿಸುತ್ತದೆ. ಈ ಕೂಗು ನಿಲ್ಲದು ಎಂದರು. ನನ್ನ ಧ್ವನಿಗೆ ಈ ಭಾಗದ ಶಾಸಕರು ಧ್ವನಿಗೂಡಿಸುವವರು ಇದ್ದಾರೆ. ಅದರೆ ಬಾಯಿ ಬಿಡಲು ಸದ್ಯ ತಯಾರಿಲ್ಲ ಅಷ್ಟೇ ಎಂದು ಮೊನಚಾಗಿ ಹಸನ್ಮುಖದಿಂದ ನುಡಿದರು.
ಈ ಭಾಗದಲ್ಲಿ ತೊಂದರೆವಾದಲ್ಲಿ ನನ್ನ ಕೂಗು ಇದಿದ್ದೆ. ನನಗಿಗ 60 ವರ್ಷ. ಇನ್ನೂ 15 ವರ್ಷದವರೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಸಾಮಾಜಿಕ ಕೆಲಸದೊಂದಿಗೆ ಶಾಸಕನಾಗಿ ಇರುವ ಸಾಮಥ್ರ‍್ಯ ಇದೆ ಎಂದು ಉಮೇಶ್ ಕತ್ತಿ ಹೇಳಿದರು. ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆ: ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿದ್ದಾರೆ,ಸಚಿವರಿದ್ಗಾರೆ,ಶಾಸಕರಿದ್ದಾರೆ. ಮೇಲಾಗಿ ಬಲಾಢ್ಯ ಕಾರ್ಯಕರ್ತರ ಶಕ್ತಿಯೂ ಇದೆ. ಇದರ ಪರಿಣಾಮ ಬಿಜೆಪಿ ಸಮರ್ಥನೀಯ ಅಭಿವೃದ್ಧಿ ಪರ ಕೆಲಸ,ಕಾರ್ಯಗಳನ್ನು ನಿರ್ವಹಿಸುತ್ತಿದೆ. ಜನಪರ ಯೋಜನೆಗಳ ಚಾರಣದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಗೆ ಸನ್ನದ್ದುವಾಗಲ್ಲಿದೆ. ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಬಿಜೆಪಿ ಎಂದರು.
ಸಿದ್ದು- ಡಿಕೆಶಿಗೆ ಏನಾಗಿದೆಯೋ ಗೊತ್ತಿಲ್ಲ ? ಕಾಂಗ್ರೆಸ್ ಪರಸ್ಥಿತಿ ಸದ್ಯ ಸರಿಯಿಲ್ಲ. ಸಿ.ಎಂ.ಹುದ್ದೆಗಾಗಿ ಈಗಲೇ ಮುಸುಕಿನ ಗುದ್ದಾಟ ನಡೆದಿದೆ. ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ನಡುವೆ ಫೈಟ್ ಒಳಗೊಳಗೆ ಸಾಗುತ್ತಿದೆ. ವಿಪಕ್ಷ ನಾಯಕರು ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇವರಿಬ್ಬರಿಗೂ ಏನಾಗಿದೆಯೋ ಗೊತ್ತಿಲ್ಲ. ಅಧಿಕಾರದ ಹುಚ್ಚು ಹಿಡಿದಿದೆ ಎಂದು ಉಮೇಶ್ ಕತ್ತಿ ವ್ಯಂಗ್ಯವಾಡಿ ಟೀಕಿಸಿದರು.

Leave a Reply

Your email address will not be published. Required fields are marked *

You May Also Like

ಉಪ ಚುನಾವಣೆ ಫಲಿತಾಂಶ ನಾಳೆ – ರಾಜರಾಜೇಶ್ವರಿ ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ!

ಬೆಂಗಳೂರು : ರಾಜ್ಯದಲ್ಲಿ ರಾಜಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನಾಳೆಗೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯೆರಾತ್ರಿಯವರೆಗೂ ನಿಷೇಧಾದಜ್ಞೆ ಜಾರಿಗೊಳಿಸಲಾಗಿದೆ.

ಅಂತರ ನಿಗಮ ವರ್ಗಾವಣೆಗೆ ಸಮ್ಮತಿ: ಮಾರ್ಗಸೂಚಿ ಪ್ರಕಟಿಸಿದ ಸಾರಿಗೆ ಇಲಾಖೆ

ಸಾರಿಗೆ ಇಲಾಖೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೇಲ್ವಿಚಾರಕರನ್ನು ಬಿಟ್ಟು ಮೂರು ಮತ್ತು ನಾಲ್ಕನೇ ಶ್ರೇಣಿಯ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಸಾರಿಗೆ ನೌಕರರ ಗೊಂದಲಕ್ಕೆ ತೆರೆ ಎಳೆದ ಸಚಿವ ಸವದಿ

ಸಾರಿಗೆ ಇಲಾಖೆ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ಕೆಲವು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎನ್ನುವ ವದಂತಿ ಹಬ್ಬಿದೆ. ಅಂತಹ ಯಾವುದೇ ಪ್ರಸ್ತಾಪ ಇಲ್ಲ.

ಬೃಹತ್ ಮೇರವಣಿಗೆ ಮೂಲಕ ಸಿ.ಸಿ.ಪಾಟೀಲ ನಾಮಪತ್ರ ಸಲ್ಲಿಕೆ ನಾಳೆ

ಉತ್ತರಪ್ರಭ ನರಗುಂದ:ನರಗುಂದ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸಿ.ಸಿ.ಪಾಟೀಲ ನಾಳೆ ದಿ. 19-4-2023ರ…