ಮಸ್ಕಿ: ಕ್ಷೇತ್ರದ ಮತದಾರರಿಗೆ ಮೋಸ ಮಾಡಿರುವ ಪ್ರತಾಪಗೌಡಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷಕ್ಕೆ ಆರ್. ಬಸನಗೌಡ ತುರವಿಹಾಳ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಪ್ರತಾಪಗೌಡ ಅವರು ಹಣೆಗೆ ವಿಭೂತಿ ಹಚ್ಚುತ್ತಾರೆ. ಇವರು ಬಿಜೆಪಿಯಿಂದ ಬಂದ ಇವರಿಗೆ ಸ್ವಾಗತ ಮಾಡಿದ್ದೇವೆ. ಆದರೆ ಇವರು ಚೆಂದೂಲಿ ಕುದುರೆ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದರು.

ಪ್ರತಾಪಗೌಡ ಅವರನ್ನು ಪಕ್ಷ ಶಾಸಕನಾಗಿ ಮಾಡಿತ್ತು. ‌ಅದೇ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಅವರು ಮಾನ ಮರ್ಯಾದೆ ಇಲ್ಲದ ವ್ಯಕ್ತಿಗಳು. ಪಕ್ಷಾಂತರ ಮಾಡುವರು ಜನ ದ್ರೋಹಿಗಳು. ಮಸ್ಕಿ ಕ್ಷೇತ್ರ ಹಿಂದುಳಿದ ಅಂತ ಹೇಳಿದಾಗ 200ಕೋಟಿ ಹಣ ಕೊಟ್ಟಿದ್ದೆ‌. ಮಸ್ಕಿ ಕ್ಷೇತ್ತ ಅಭಿವೃದ್ಧಿ ಆಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಲ್ಲದೇ ಗೆಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಮಾರಾಟವಾಗಿದ್ದಾರೆ. ಹಣದ ಹೊಳೆ ಹರಿಸಿ ಶಿರಾದಲ್ಲಿ ಗೆದ್ದಿದ್ದಾರೆ ಹೊರತು ಜನರ ಮನಸ್ಸು ಗೆದ್ದಿಲ್ಲ ಅಂದರು.

2008, 2013 ಚುನಾವಣೆಯಲ್ಲಿ ಬಿಜೆಪಿಗೆ ಜನ ಕೃಪೆ ತೋರಿಲ್ಲ.‌ ಶಾಸಕರಿಗೆ ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಕೊರೊನಾ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರಕಾರ 2ಸಾವಿರ ಕೋಟಿ ರೂಪಾಯಿ ಹಣ ಲೂಟಿ ಮಾಡಿದೆ. ಕೇಂದ್ರದಲ್ಲಿ ಕೋಮುವಾದಿ ಸರಕಾರ ಬಂದಿದೆ. ದೇಶದಲ್ಲಿ ಮೋದಿ ಅಷ್ಟು ಸುಳ್ಳುಗಾರ ಯಾರಿಲ್ಲ. ಕೊರೊನಾ ಲಸಿಕೆ ಕಂಡು ಹಿಡಿಯುವ ಬದಲಿಗೆ ದ್ವೀಪ ಹಚ್ಚಿ. ತಮಟೆ ಬಾರಿಸಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಈ ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ವಿಧವಾ ವೇತನ, ವೃದ್ಯಾಪ ವೇತನ ನಮ್ಮ ಸರಕಾರದಲ್ಲಿ ಯಾವತ್ತು ನಿಂತಿಲ್ಲ. ಇದೀಗ ಕೊಟ್ಯಾಂತರ ಹಣ ನಿಂತಿದೆ. ಬಡವರು ಹಸಿವುನಿಂದ ಬಳಲ ಬಾರದು ಎಂದು ಅನ್ನಭಾಗ್ಯ ಜಾರಿಗೆ ತಂದಿದ್ದೇವೆ. ಆದರೆ ಒಂದೇ ವರ್ಷದಲ್ಲಿ ಯಡಿಯೂರಪ್ಪ ಅವರು 90ಕೋಟಿ ಸಾಲ ಮಾಡುತ್ತಾರೆ. ಇಂತಹ ಸರಕಾರಕ್ಕೆ ಎಚ್ಚರಿಕೆ ಕೊಡಲು ಉಪ ಚುನಾವಣೆಯಲ್ಲಿ ಆರ್.‌ಬಸನಗೌಡ ಅವರಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಹೆತ್ತ ತಾಯಿಗೆ ದ್ರೋಹ ಬಗೆದ ಪ್ರತಾಪಗೌಡ ಅವರ ಸ್ಥಾನಕ್ಕೆ ಆರ್.‌ಬಸನಗೌಡ ಅವರಿದ್ದಾರೆ. ‌ಜನರ ಸೇವೆ ಮಾಡುವರಿಗೆ ಸದಾವಕಾಶ ಇರುತ್ತದೆ. ಪಕ್ಷದಲ್ಲಿ ಗೆದ್ದು ಮೋಸ ಮಾಡಿದವರು ಪಕ್ಷ ಬಿಟ್ಟಿದ್ದೆ ಒಳ್ಳೆಯದು. ಉಪ ಚುನಾವಣೆಯಲ್ಲಿ  ನಾವು ಸೊತಿದ್ದೇವೆ ಎಂದು ಕಾಂಗ್ರೆಸ್ ದೃತಿಗೆಟ್ಟಿಲ್ಲ. ಮಸ್ಕಿ ಕ್ಷೇತ್ರದ ಮತದಾರರ ಬೆಂಬಲ ನೋಡಿದರೆ 20ಸಾವಿರ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದ್ದು ಸುಳ್ಳಾಗಿದೆ. ದೇಶಕ್ಕೆ ಸಂವಿಧಾನ ಕೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಈ ಭಾಗದ ರೈತರಿಗೆ ಅನುಕೂಲವಾಗುವ ನಂದವಾಡಗಿ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ ಎಂದರು.

 ಈ ಸಂದರ್ಭದಲ್ಲಿ ಕೆಪಿಸಿಸಿ ಕಾಯ್ರಾಧ್ಯಕ್ಷ ಈಶ್ವರ ಖಂಡ್ರೆ, ಸತೀಸ ಜಾರಕಿಹೊಳಿ. ಆರ್.‌ಬಸನಗೌಡ ತುರವಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್. ಮಾಜಿ ಸಂಸದ ಬಿ.ವಿ.ನಾಯಕ. ಶಾಸಕ ಡಿ.ಎಸ್.ಹುಲಿಗೇರಿ, ಶಾಸಕ ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ. ಹನುಂಮತಪ್ಪ ಮುದ್ದಾಪೂರ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *

You May Also Like

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ವಲಸಿಗರ ರೈಲ್ವೇ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾಗಾಂಧಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಭಾವೈಕ್ಯದ ಮಾಧುರ್ಯ ಬೆಳಕು ತೋಂಟದ ಸಿದ್ದಲಿಂಗ ಶ್ರೀ- ಪ್ರೊ.ಆಶಾದೇವಿ

ವರದಿ: ಗುಲಾಬಚಂದ ಜಾಧವಗದಗ : ತಾಯಿ ತನ್ನ ಮಕ್ಕಳಿಗೆ ಎಂದೂ ಭೇದಭಾವ ಮಾಡಲ್ಲ.ಹಾಗೆಯೇ ಬೆಂಕಿ,ಗಾಳಿ,ನೀರು ನಿಸರ್ಗದ…

ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆದಿರುವ ಬಿ.ಎಸ್. ಯಡಿಯೂರಪ್ಪ

ಆಲಮಟ್ಟಿ:ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ…