ಗದಗ: ಇತ್ತಿಚೆಗೆ ಕಲಬುರಗಿಯಲ್ಲಿ ನಡದ ಘಟನೆಯಲ್ಲಿ ಗೋಂಧಳಿ ಸಮಾಜದ ಸುರೇಶ್ ಎಂಬ ವ್ಯಕ್ತಿ ಕೊಲೆಯಾಗಿದ್ದು, ಸರ್ಕಾರ ತನ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಒತ್ತಾಯಿಸಿದರು.
ಅವರು ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮ ನಿವಾಸಿ ಸುರೇಶ ಬುಡಬುಡಕಿ ಹಾಗೂ ಜ್ಯೋತಿಷ್ಯ ಹೇಳುವ ಕಾಯಕ ಮಾಡುತ್ತಿದ್ದರು. ಏಳು ಜನ ಅನ್ಯಕೋಮಿ ಯುವಕರು ಸಣ್ಣ ಕಾರಣಕ್ಕೆ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ ಎಂದು ಕಿಡಿಕಾರಿದರು.
ಸುರೇಶ್ ಸಾವು ಸಮಾಜದಲ್ಲಿ ಮಾನವಿಯತೆ ಹುಡುಕುತ್ತದೆ. ಇನ್ನು ಮುಖ್ಯವಾಗಿ ಈ ಪ್ರಕರಣದಲ್ಲಿ ಕಲಬುರಗಿ ಪೋಲಿಸ್ ವ್ಯವಸ್ಥೆ ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಇಡೀ ಕುಟುಂಬ ಆರ್ಥಿಕವಾಗಿ ಸುರೇಶ್ ಅವರ ಮೇಲೆ ಅವಲಂಭಿತವಾಗಿತ್ತು. ಇದೀಗ ಸುರೇಶ್ ಕೊಲೆಯಿಂದ ಕುಟುಂಬವೂ ಬೀದಿಗೆ ಬರುವಂತಾಗಿದೆ. ಹೀಗಾಗಿ ಸರ್ಕಾರ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಒಂದು ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗೋಂಧಳಿ ಸಮಾಜದ ಮುಂಡರಗಿ ತಾಲೂಕ ಅಧ್ಯಕ್ಷ ದುರಗೊಜಿ ಗಣಾಚಾರಿ, ಪುಂಡಲೀಕ ಪಾರ್ಗೆ, ದುರಗಪ್ಪ ವಾಡಗನ್ ಲಕ್ಷಣ್ ಡಾರ್ಗೆ, ಮಂಜುನಾಥ ಗಾಡಕರ್, ಬಾಳಪ್ಪ ಮುಖ್ಯೆ, ಸಮಾಜದ ಜಿಲ್ಲಾ ಅಧ್ಯಕ್ಷ ಸಹದೇವ ಗಣಾಚಾರಿ ಇನ್ನಿತರರು ಉಪಸ್ಥಿತರಿದ್ದರು.