ಉತ್ತರಪ್ರಭ ಸುದ್ದಿ

ನರಗುಂದ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಸಾಮಾನ್ಯ ವ್ಯವಸ್ಥೆಗಳು ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರುಗಳು ಇಲ್ಲದಿರುವುದು ಕಂಡುಬರುತ್ತಿದೆ ಎಂದು ಡಾ.ಸಂಗಮೇಶ ಕೊಳ್ಳಿಯವರ ಆರೋಪಿಸಿದರು.

ಬಾಬಾಸಾಹೇಬ ಭಾವೆ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಂದ ಸರಿಯಾದ ಚಿಕಿತ್ಸೆಯ ವ್ಯವಸ್ಥೆ ಇಲ್ಲದಿರುವ ಕುರಿತು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಾ.ಸಂಗಮೇಶ ಕೊಳ್ಳಿಯವರ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಸ್ಪೆಶಲಿಸ್ಟ್ ವೈದ್ಯರಿದ್ದರು ಅವರ್ಯಾರು ನಿಷ್ಠೆಯಿಂದ ತಮ್ಮ ವೃತ್ತಿಯನ್ನು ಮಾಡದಿರುವುದು ರೋಗಿಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.

ಕೆಲವು ಬಾರಿ ರೋಗಿಗಳಿಗೆ ಮುಟ್ಟುವುದಿರಲಿ ಮುಖವನ್ನು ನೋಡದೇ ಕಾಟಾಚಾರಕ್ಕೆ ಎಂಬಂತೆ ಮಾತ್ರೆಯನ್ನು ಬರೆದು ಕೊಟ್ಟು ಕಳಿಸಿಬಿಡುತ್ತಾರೆ. ಇಸಿಜಿ ಮಾಡಲು ಪ್ರತ್ಯೇಕ ಕೊಠಡಿಯಂತು ಇಲ್ಲವೇ ಇಲ್ಲ. ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಜನರಲ್ ಹಾಲ್ ನಲ್ಲಿ ಇಸಿಜಿ ವ್ಯವಸ್ಥೆ ಯಾವಾಗರೊಮ್ಮೆ ಇರುತ್ತದೆ. ಕೆಲವು ಬಾರಿ ಇಲ್ಲವೇ ಇರುವುದಿಲ್ಲ. ಹೀಗೆ ಹಲವಾರು ಅವ್ಯವಸ್ಥೆ ಇಲ್ಲಿ ಕಾಣುತ್ತವೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರವಿ ಚಿಂತಾಲ, ಬಿ ಡಿ ಪಾಟೀಲ, ಶಿವಾನಂದ ಮೋಹಿತೆ, ಎಂ ಎಂ ಜಾವುರ, ಗುರ್ಲಿಂಗಪ್ಪ ಪಡಿಯವರ, ಬಸವರಾಜ ಪಾಟೀಲ, ಶಿವಾನಂದ ಹಳಕಟ್ಟಿ, ನಿಂಗಪ್ಪ ಹಡಪದ, ರಮೇಶ ಹಡಪದ, ಸುನೀಲ ದೊಡಮನಿ, ಮಂಜುನಾಥ ದೊಡಮನಿ, ಬಾಬು ಅತ್ತಾರ, ಹನಮಂತಗೌಡ ಭರಮಗೌಡ್ರ, ಪ್ರಶಾಂತ ಹೂಗಾರ, ನಿಂಗನಗೌಡ ಪಾಟೀಲ, ಮುತ್ತು ಕಳಸಾಪುರ, ಮುತ್ತು ಕಬಾಡರ, ಸಂಜು ಮಾದರ, ಪ್ರಸಾದ ಮುತ್ತಿನ, ಶಿವನಗೌಡ ಪಾಟೀಲ, ಶಶಿ ಹಂಚಿನಾಳ, ಅಶೋಕ ಹೂಲಿ, ಶರಣು ಹುಣಶಿಕಟ್ಟಿ, ಮಂಜುನಾಥ ಮೂಲಿಮನಿ ಹಾಗೂ ಹಿರಿಯರು ಮತ್ತು ಅನೇಕ ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಏ.10 ರಿಂದ ಈ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ

ಸಾರಿಗೆ ಮುಷ್ಕರ ಹೊತ್ತಲ್ಲೇ ಸರ್ಕಾರ ನೈಟ್‍ಕರ್ಫ್ಯೂ ಜಾರಿ ಮಾಡಿದೆ. ಈ ಮೂಲಕ ಜನಸಾಮಾನ್ಯರಿಗೆ ಏಕಕಾಲಕ್ಕೆ ಎರಡು ಆಘಾತ ಕಾದಿದೆ. ಏ.10 ರಿಂದ ರಾಜ್ಯದ 8 ನಗರಗಳಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ. ಇತ್ತ ಶನಿವಾರದಿಂದ ಸತತ 4 ದಿನ ರಜೆ ಇರುತ್ತದೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ತೀವ್ರ ಸಂಕಷ್ಟ ಎದುರಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭವಿಜಯಪುರ: ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ…

ನಾಳೆ ಸತತ 8ನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ನಂಬುಗೆಯ ನಾಯಕರಾಗಿ, ನಾಡಿನ ಶಿಕ್ಷಕ ಸಮುದಾಯದ ಜೀವಧ್ವನಿಯಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಹೊರಟ್ಟಿಯವರು ನಾಡಿಗೆ ಪರಿಚಿತರಾಗಿದ್ದೇ…

ಜಿಂದಾಲ್ ಕಂಪೆನಿಗೆ ಸರ್ಕಾರ ಕದ್ದುಮುಚ್ಚಿ ಭೂಮಿ ಮಾರಾಟ

ಜಿಂದಾಲ್ ಕಂಪೆನಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ 3677 ಎಕರೆ ಭೂಮಿಯನ್ನು ಮಾರಾಟ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.